ಮುಲ್ಕಿಯ ಖ್ಯಾತ ದಸ್ತಾವೇಜು ಬರಹಗಾರ ನಿಧನ
ಮುಲ್ಕಿ: ಇಲ್ಲಿನ ಖ್ಯಾತ ದಸ್ತಾವೇಜು ಬರಹಗಾರರಾಗಿದ್ದ ಸುರೇಂದ್ರ ಶಣೈ (82) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ಸಂಜೆ ನಿಧನರಾಗಿದ್ದಾರೆ.
ಮುಲ್ಕಿಯಲ್ಲಿ ಕಳೆದ 40 ವರ್ಷಗಳಿಂದ ದಸ್ತಾವೇಜು ಬರಹಗಾರರೆಂದು ಪ್ರಸಿದ್ಧಿ ಪಡೆದಿದ್ದರು. ಅವರು ಓರ್ವ ಪುತ್ರ ಹಾಗೂ ಪುತ್ರಿಯರನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಮುಲ್ಕಿ ನ.ಪಂ.ಮಾಜಿ ಅಧ್ಯಕ್ಷ ಸುನಿಲ್ ಆಳ್ವ, ಸದಸ್ಯರಾದ ಬಾಲಚಂದ್ರ ಕಾಮತ್, ಮಾಜೀ ಸದಸ್ಯ ಅಬ್ದುಲ್ ರಝಾಕ್, ಸಾಮಾಜಿಕ ಕಾರ್ಯಕರ್ತ ಸುಧೀರ್ ಬಾಳಿಗಾ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story