Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಐತಿಹಾಸಿಕ ಕೊಳಕೇರಿ ನಾಡ್ ಮಂದ್‍ನಲ್ಲಿ...

ಐತಿಹಾಸಿಕ ಕೊಳಕೇರಿ ನಾಡ್ ಮಂದ್‍ನಲ್ಲಿ ‘ಹುತ್ತರಿ ಕೋಲಾಟ’

ವಾರ್ತಾಭಾರತಿವಾರ್ತಾಭಾರತಿ15 Dec 2019 11:32 PM IST
share
ಐತಿಹಾಸಿಕ ಕೊಳಕೇರಿ ನಾಡ್ ಮಂದ್‍ನಲ್ಲಿ ‘ಹುತ್ತರಿ ಕೋಲಾಟ’

ಮಡಿಕೇರಿ ಡಿ.15: ನಾಪೋಕ್ಲು ಬಳಿಯ ಕೊಳಕೇರಿಯ ಐತಿಹಾಸಿಕ ಹಿನ್ನೆಲೆಯ ಬಿದ್ದಾಟಂಡ ವಾಡೆ ನಾಡ್ ಮಂದ್‍ನಲ್ಲಿ ಶನಿವಾರ ಮತ್ತು  ಭಾನುವಾರದಂದು ‘ಹುತ್ತರಿ ಹಬ್ಬದ ಕೋಲಾಟ’ ಸಂಭ್ರಮದಿಂದ ನಡೆಯಿತು.

ಹುತ್ತರಿ ಹಬ್ಬ ಕಳೆದು ಊರ್ ಮಂದ್‍ನಲ್ಲಿ ಈಡ್ ಕಾರ್ಯಕ್ರಮ ಮುಗಿದ ಬಳಿಕ ಎಲ್ಲಾ ಊರ್ ಮಂದ್‍ನವರು ನಾಡ್ ಮಂದ್ ಕೊಳಕೇರಿ ಗ್ರಾಮದ ನೂರಂಬಾಡ ಬಿದ್ದಾಟಂಡ ವಾಡೆಯಲ್ಲಿ ಸಮಾವೇಶಗೊಳುವುದು ವಾಡಿಕೆ. ಅದರಂತೆ ನಾಪೋಕ್ಲು ಗ್ರಾಮ, ಕೊಳಕೇರಿ ಗ್ರಾಮ ಮತ್ತು ಬೇತು ಗ್ರಾಮದ ಗ್ರಾಮಸ್ಥರು ಊರ್ ಮಂದ್ ಮುಗಿಸಿ ಬಿದ್ದಾಟಂಡ ವಾಡೆಯ ನಾಡ್ ಮಂದ್‍ಗೆ ದುಡಿಕೊಟ್ಟ್ ಪಾಟ್‍ನೊಂದಿಗೆ ಆಗಮಿಸಿದರು. ಈ ಸಂದರ್ಭ ಬಿದ್ದಾಟಂಡ ವಾಡೆಯ ಹತ್ತಿರವಿರುವ ಈಶ್ವರ ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮಕ್ಕಿ ದೇವಾಲಯದಿಂದ ಆಗಮಿಸುವ ತಿರುವಾಯುಧ, ಕಾಪಾಳ ಕಳಿಯೊಂದಿಗೆ ಆಗಮಿಸುವ ಬೇತು ಗ್ರಾಮಸ್ಥರನ್ನು ವಾಡೆಯ ಸಮೀಪ ಪಟಾಕಿಗಳ ಭರಾಟೆಯ ನಡುವೆ ಸ್ವಾಗತಿಸಿ, ದುಡಿಕೊಟ್ಟ್ ಹಾಡಿನ ಮೂಲಕ ಮಂದ್‍ಗೆ ಮೂರು ಸುತ್ತು ಬಂದು ತಿರುವಾಯುಧ ಮತ್ತು ಕೋಲನ್ನು ಮರದ ಕೆಳಗೆ ಇಡಲಾಯಿತು. ಅದರಂತೆ ನಾಪೋಕ್ಲು ಗ್ರಾಮದಿಂದ ಆಗಮಿಸುವ ಊರ್ ಮಂದ್‍ನವರನ್ನು ದುಡಿ ಕೊಟ್ಟ್ ಪಾಟ್‍ನ ಮೂಲಕ ಸ್ವಾಗತಿಸಿ ವಾಡೆಯಲ್ಲಿರುವ ಬಸುರಿ ಮರದ ಕೆಳಗೆ ಕೋಲನ್ನಿಟ್ಟು ಎಲ್ಲಾ ಮೂರು ಊರಿನವರು ಸೇರಿ ಬಿದ್ದಾಟಂಡ ವಾಡೆಯಲ್ಲಿ ಕೋಲಾಟ ನಡೆಸಿ ಸಂಭ್ರಮಿಸಿದರು. 

ವಿಶೇಷತೆ ಎಂದರೆ ಬಿದ್ದಾಟಂಡ ವಾಡೆ ಮಂದ್‍ನಲ್ಲಿ ವಾರ್ಷಿಕವಾಗಿ ಎರಡು ದಿನ ಕೋಲಾಟ ನಡೆಸುತ್ತಾರೆ. ಮೊದಲ ದಿನ ದೊಡ್ಡ ಕೋಲು ಎರಡನೆ ದಿನ ಸಣ್ಣ ಕೋಲು. ಮೊದಲ ದಿನದ ಕೋಲಾಟ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆ. ಅದರಂತೆ ಕೋಲಾಟ ಮುಗಿದ ಮೇಲೆ ಆಯಾಯ ಗ್ರಾಮಸ್ಥರು ಮಕ್ಕಿ ದೇವಾಲಯಕ್ಕೆ ಕೋಲನ್ನು ಒಪ್ಪಿಸುವುದು ನಡೆದು ಕೊಂಡು ಬಂದ ಪದ್ಧತಿ.

ಮಕ್ಕಿ ದೇವಾಲಯದಿಂದ ಆಗಮಿಸಿದ ಕಾಪಾಳ ವೇಷ ಹಾಕಿದವರು ಮೈಗೆ ಮಸಿ ಬಳಿದುಕೊಂಡು ಕುಣಿದು ಕುಪ್ಪಳಿಸಿದರು. ಈ ಪದ್ಧತಿಯು ನೂರಾರು ವರ್ಷಗಳ ಹಿಂದೆಯೇ ಇಲ್ಲಿ ಆಚರಣೆಯಲ್ಲಿದೆ. ಕಾರ್ಯಕ್ರಮದಲ್ಲಿ  ಕೊಡವ ಅಕಾಡಮಿಯ ಮಾಜಿ  ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ನಾಪೋಕ್ಲು, ಕೊಳಕೇರಿ, ಬೇತು, ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X