ಮರೋಳಿ ವಾರ್ಡ್ ಅಭಿವೃದ್ಧಿಗೆ 2.19 ಕೋ.ರೂ. ಅನುದಾನ ಬಿಡುಗಡೆ

ಮಂಗಳೂರು, ಡಿ.16: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮರೋಳಿ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗೆ 2.19 ಕೋ.ರೂ.ಅನುದಾನ ಬಿಡುಗಡೆಗೊಳಿಸಿರುವುದಾಗಿ ಶಾಸಕ ಡಿ. ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ 58 ಲಕ್ಷ ರೂ.ಬಿಡುಗಡೆಯಾಗಿದ್ದು, ಕರ್ಣಾಟಕ ಬ್ಯಾಂಕ್ನ ಪ್ರಧಾನ ಕಚೇರಿಯ ಎದುರಿನ ರಸ್ತೆಗೆ ಡಾಮರೀಕರಣಕ್ಕೆ 50 ಲಕ್ಷ ರೂ., ಉಜ್ಜೋಡಿ ಪ್ರೇಮ್ ನಗರದಲ್ಲಿ ಕಾಲು ಸಂಕ ಪುನರ್ನಿರ್ಮಾಣಕ್ಕೆ 8 ಲಕ್ಷ ರೂ.ಮೀಸಲಿಡಲಾಗಿದೆ. ಮಳೆಹಾನಿ ಪರಿಹಾರ ನಿಧಿಯಲ್ಲಿ 27 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಜಯನಗರ ಮುಖ್ಯ ರಸ್ತೆಯ ಬಳಿ ಮುಚ್ಚುಗುಂಡಿ ರಚನೆ ಕಾಮಗಾರಿಗೆ 2.50 ಲಕ್ಷ ರೂ., ಬಜ್ಜೋಡಿ ಬಿಕರ್ನಕಟ್ಟೆ ಬಳಿ ತಡೆಗೋಡೆ ದುರಸ್ತಿಗೆ 5 ಲಕ್ಷ ರೂ., ಬಜ್ಜೋಡಿ ಬಳಿ ತೋಡಿಗೆ ತಡೆಗೋಡೆ ನಿರ್ಮಾಣ ಹಾಗೂ ರಸ್ತೆ ದುರಸ್ತಿ ಕಾಮಗಾರಿಗೆ 5 ಲಕ್ಷ ರೂ., ಮರೋಳಿ ಕನಪತಗ್ಗು ಚಾಮುಂಡೇಶ್ವರಿ ಮಂದಿರದ ಬಳಿ ತಡೆಗೋಡೆ ದುರಸ್ತಿ ಕಾಮಗಾರಿಗೆ 5 ಲಕ್ಷ ರೂ,, ಬಿಕರ್ನಕಟ್ಟೆ ಬಜ್ಜೋಡಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ 5 ಲಕ್ಷ ರೂ., ಮರೋಳಿ ಬಳಿ ತೋಡು ದುರಸ್ತಿ ಕಾಮಗಾರಿಗೆ 5 ಲಕ್ಷ ರೂ.ಅನುದಾನ ಒದಗಿಸಲಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 74.5 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಮರೋಳಿ ಜೋಡುಕಟ್ಟೆ ಬಯಲು ರಂಗಮಂದಿರ ನಿರ್ಮಾಣದ ಮುಂದುವರೆದ ಕಾಮಗಾರಿಗೆ 25 ಲಕ್ಷ ರೂ., ಬಜ್ಜೋಡಿ ಮುಖ್ಯ ರಸ್ತೆಯಲ್ಲಿ ಚರಂಡಿ ಹಾಗೂ ಮೋರಿ ರಚನೆಗೆ 5 ಲಕ್ಷ ರೂ., ಬಜ್ಜೋಡಿ ಮುಖ್ಯ ರಸ್ತೆಯಲ್ಲಿ ಒಳಚರಂಡಿ ರಚನೆ ಕಾಮಗಾರಿಗೆ 5 ಲಕ್ಷ ರೂ., ಬಜ್ಜೋಡಿ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ 15 ಲಕ್ಷ ರೂ., ಅಡು ಮರೋಳಿ ಮಾರಿಕಾಂಬಾ ದೇವಸ್ಥಾನದ ಬಳಿ ತಡೆಗೋಡೆ ರಚನೆ ಕಾಮಗಾರಿಗೆ 5 ಲಕ್ಷ ರೂ., ಸೂರ್ಯನಾರಾಯಣ ದೇವಸ್ಥಾನದ ಮುಂಭಾಗದ ಮನೆಯ ಎದುರು ಚರಂಡಿ ಹಾಗೂ ಮೋರಿ ರಚನೆ ಕಾಮಗಾರಿಗೆ 5 ಲಕ್ಷ ರೂ., ಮರೋಳಿ ಭಾರತ್ ಪ್ರಿಂಟರ್ಸ್ ಎದುರು ರೇಗೋ ಭಾಗ್ ಅಡ್ಡ ರಸ್ತೆಯ ಕಾಂಕ್ರಿಟೀಕರಣ ಹಾಗೂ ಚರಂಡಿ ರಚನೆಗೆ 5 ಲಕ್ಷ ರೂ., ಜಯನಗರ 4 ನೇ ಅಡ್ಡ ರಸ್ತೆಯ ಬಳಿ ಒಳ ಚರಂಡಿ ಅಭಿವೃದ್ಧಿ ಕಾಮಗಾರಿ 4.38 ಲಕ್ಷ, ಜಯನಗರ 4ನೇ ಅಡ್ಡರಸ್ತೆಯ ಕಾಮಗಾರಿಗೆ 4.67 ಲಕ್ಷ ರೂ. ಅನುದಾನ ನೀಡಲಾಗಿದೆ.
ಮನಪಾ ಸಾಮಾನ್ಯ ನಿಧಿಯಿಂದ 14.80 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಬಜ್ಜೋಡಿ ಬಳಿ ರಸ್ತೆ ಕಾಂಕ್ರಿಟೀಕರಣಕ್ಕೆ 5 ಲಕ್ಷ ರೂ., ಕನಪತಗ್ಗು ರಸ್ತೆಯ ಚಾಮುಂಡೇಶ್ವರಿ ದೇವಸ್ಥಾನದ ಬಳಿ ತಡೆಗೋಡೆ ರಚನೆ ಹಾಗೂ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ., ಬಜ್ಜೋಡಿ, ತಾತವ್ ರಸ್ತೆ, ಜಯನಗರ ಅಡ್ಡರಸ್ತೆಗಳಲ್ಲಿ ಕುಡಿಯುವ ನೀರಿನ ಪೂರೈಕೆ ಅಭಿವೃದ್ಧಿಗೆ ಹೊಸ ಎಚ್ಡಿಪಿಇ ಕೊಳವೆ ಅಳವಡಿಕೆ ಕಾಮಗಾರಿಗೆ 4.80 ಲಕ್ಷ ರೂ.ಮೀಸಲಿಡಲಾಗಿದೆ.
ಕೇಂದ್ರ ಸರಕಾರದ 14ನೇ ಹಣಕಾಸು ಅನುದಾನದಡಿ 20 ಲಕ್ಷ ರೂ.ಬಿಡುಗಡೆಯಾಗಿದ್ದು ಮರೋಳಿ ಜಯನಗರ 4ನೇ ಅಡ್ಡರಸ್ತೆಯ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಅಡುಮರೋಳಿ ದೈವಸ್ಥಾನದ ಹತ್ತಿರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅದನ್ನು ವಿನಿಯೋಗಿಸಲಾಗುವುದು ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ 15 ಲಕ್ಷ ರೂ.ಬಿಡುಗಡೆಯಾಗಿದ್ದು ಮರೋಳಿ ಗ್ರಾಮದ ಆಡು ಎಂಬಲ್ಲಿ ತೋಡು ಅಭಿವೃದ್ಧಿ ಕಾಮಗಾರಿಗೆ ಮೀಸಲಿಡಲಾಗಿದೆ ಎಂದು ಕಾಮತ್ ತಿಳಿಸಿದ್ದಾರೆ.







