ಬದ್ರಿಯಾ ಜುಮಾ ಮಸೀದಿ ಅಡ್ಡೂರು: ವಾರ್ಷಿಕ ಸಭೆ, ಪದಾಧಿಕಾರಿಗಳ ಆಯ್ಕೆ
ಮಂಗಳೂರು : ಬದ್ರಿಯಾ ಜುಮಾ ಮಸೀದಿ ಅಡ್ಡೂರು ಇದರ ವಾರ್ಷಿಕ ಮಹಾಸಭೆಯು ಖತೀಬ್ ಮುಹಮ್ಮದ್ ಶರೀಫ್ ದಾರಿಮಿ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ನೂತನ ಸಾಲಿನ ಆಡಳಿತ ಕಮಿಟಿಯ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಟಿ ಸಯ್ಯದ್, ಉಪಾಧ್ಯಕ್ಷರುಗಳಾಗಿ ಎ ಹಾಮದ್ ಬಾವ, ಎಂಎಸ್ ಶೇಖಬ್ಬ, ಪ್ರಧಾನ ಕಾರ್ಯದರ್ಶಿಯಾಗಿ ಪಿಎ ಇಸಾಖ್, ಜೊತೆ ಕಾರ್ಯದರ್ಶಿಗಳಾಗಿ ಕೆ ಉಮ್ಮರ್ ಫಾರೂಕ್, ಎಕೆ ಅಬ್ದುಲ್ ಲತೀಫ್, ಸಲಹೆಗಾರರಾಗಿ ಟಿ ಅಹ್ಮದ್ ಬಾವ, ಕೋಶಾಧಿಕಾರಿಯಾಗಿ ಎಪಿ ಮುಯ್ಯದ್ದಿ, ಲೆಕ್ಕ ಪರಿಶೋಧಕರಾಗಿ ಯು. ಹಮೀದ್ ಅವರನ್ನು ನೇಮಿಸಲಾಯಿತು.
ಈ ಸಂದರ್ಭ ಎಕೆ ಅಶ್ರಫ್, ಡಿಎಸ್ ರಫೀಕ್, ಎಕೆ ಮುಹಮ್ಮದ್, ಎಜಿ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
Next Story





