ಆದಿತ್ಯನಾಥ್ ಸರಕಾರದ ವಿರುದ್ಧವೇ ತಿರುಗಿಬಿದ್ದ ಬಿಜೆಪಿ ಶಾಸಕರು: ವಿಧಾನಸಭೆಯಲ್ಲೇ ಧರಣಿ
ಉತ್ತರ ಪ್ರದೇಶ ರಾಜಕೀಯದಲ್ಲಿ ಹೊಸ ಬೆಳವಣಿಗೆ
ಲಕ್ನೋ: ಆದಿತ್ಯನಾಥ್ ಸರಕಾರದ ಕಾರ್ಯ ನಿರ್ವಹಣೆಯನ್ನು ವಿರೋಧಿಸಿ ಬಿಜೆಪಿ ಶಾಸಕರೇ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಸರಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.
ತನ್ನ ಕ್ಷೇತ್ರದಲ್ಲಿ ಅಧಿಕಾರಿಗಳ ಅನುಚಿತ ವರ್ತನೆಯ ಬಗ್ಗೆ ಗಾಝಿಯಾಬಾದ್ ನ ಬಿಜೆಪಿ ಶಾಸಕ ನಂದಕಿಶೋರ್ ಗುಜ್ಜರ್ ಅವರಿಗೆ ವಿಧಾನಸಭೆಯಲ್ಲಿ ಮಾತನಾಡಲು ಅವಕಾಶ ನೀಡದ ನಂತರ ಈ ಆಕ್ರೋಶ ವ್ಯಕ್ತವಾಯಿತು. ಕೂಡಲೇ ಸುಮಾರು 70 ಬಿಜೆಪಿ ಶಾಸಕರು ನಂದಕಿಶೋರ್ ಗೆ ಬೆಂಬಲ ಸೂಚಿಸಿದರು. ಇಷ್ಟೇ ಅಲ್ಲದೆ ನಂದಕಿಶೋರ್ ಅವರಿಗೆ ಬಿಎಸ್ಪಿ ಶಾಸಕರೂ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಸ್ಪೀಕರ್ ಅಧಿವೇಶನವನ್ನು ಮುಂದೂಡಿದರು.
ಆಕ್ರೋಶಿತ ಶಾಸಕರನ್ನು ಸಮಾಧಾನಪಡಿಸಲು ಡಿಸಿಎಂ ದಿನೇಶ್ ಶರ್ಮಾ ಮತ್ತು ಸಚಿವ ಸುರೇಶ್ ಖನ್ನಾ ಪ್ರಯತ್ನಿಸಿದರಾದರೂ ಅದು ಫಲ ನೀಡಲಿಲ್ಲ. ಎಲ್ಲಾ ಶಾಸಕರು ವಿಧಾನಸಭೆಯಲ್ಲೇ ಧರಣಿ ಕುಳಿತರು.
ಅಧಿಕಾರಿಗಳು ತಮ್ಮನ್ನು ಹೇಗೆ ಅವಮಾನಿಸುತ್ತಿದ್ದಾರೆ ಎನ್ನುವುದನ್ನು ಶಾಸಕರು ಸಚಿವರಿಗೆ ವಿವರಿಸಿ, ಇದು ಆದಿತ್ಯನಾಥ್ ಸರಕಾರದಲ್ಲಿ ಸಾಮಾನ್ಯವಾಗಿಬಿಟ್ಟಿದೆ ಎಂದರು.
"ವಿಧಾನ ಭವನದಲ್ಲಿರುವ ಭದ್ರತಾ ಸಿಬ್ಬಂದಿ ಕೂಡ ನಮ್ಮ ಜೊತೆ ಅನುಚಿತವಾಗಿ ವರ್ತಿಸುತ್ತಾರೆ. ಸಚಿವರು ನಮ್ಮ ಮಾತು ಕೇಳುತ್ತಿಲ್ಲ. ಇದು ಆಡಳಿತ ಪಕ್ಷದ ಭಾರೀ ಬಹುಮತದ ಫಲಿತಾಂಶ" ಎಂದು ಮತ್ತೊಬ್ಬ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಆದಿತ್ಯನಾಥ್ ಸರಕಾರ ತಮ್ಮ ಸಮಸ್ಯೆಗಳನ್ನು ಪರಿಗಣಿಸುತ್ತಿಲ್ಲ. ರಾಜ್ಯದ ಪರಿಸ್ಥಿತಿಯ ಬಗ್ಗೆ ಪಕ್ಷಕ್ಕೆ ಮಾಹಿತಿ ನೀಡಿದರೂ ಯಾವುದೇ ಫಲವಿಲ್ಲ. ವಿಧಾನಸಭೆಯಲ್ಲಿ ತಮಗೆ ಧ್ವನಿಯೆತ್ತಲು ಅವಕಾಶ ನೀಡದೆ ಇರುವುದರಿಂದ ಶಾಸಕರಾಗಿ ತಮ್ಮ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದವರು ಹೇಳಿದರು.
विधानसभा कल तक स्थगित होने के बाद भी भाजपा के 100 से ज़्यादा विधायक सदन में अपनी ही सरकार में उपेक्षित होने के कारण बैठे!
— Anand Bhadauria (@BhadauriyaAnand) December 17, 2019
इस समय सदन में विपक्ष सहित 200 से ज़्यादा विधायक सरकार की तानाशाही के ख़िलाफ़
यानी सरकार अल्पमत में
समय से पहले जनता को कुकर्मियों से निजात मिलने की उम्मीद pic.twitter.com/JqguyjVvKU