ಮಂಗಳೂರು : ತಕ್ವಾ ಇಸ್ಲಾಮಿಕ್ ಅಕಾಡಮಿಯ ವಾರ್ಷಿಕೋತ್ಸವ, ಮೀಲಾದ್ ಫೆಸ್ಟ್
![ಮಂಗಳೂರು : ತಕ್ವಾ ಇಸ್ಲಾಮಿಕ್ ಅಕಾಡಮಿಯ ವಾರ್ಷಿಕೋತ್ಸವ, ಮೀಲಾದ್ ಫೆಸ್ಟ್ ಮಂಗಳೂರು : ತಕ್ವಾ ಇಸ್ಲಾಮಿಕ್ ಅಕಾಡಮಿಯ ವಾರ್ಷಿಕೋತ್ಸವ, ಮೀಲಾದ್ ಫೆಸ್ಟ್](https://www.varthabharati.in/sites/default/files/images/articles/2019/12/17/224089-1576599807.jpg)
ಮಂಗಳೂರು : ತಕ್ವಾ ಇಸ್ಲಾಮಿಕ್ ಅಕಾಡಮಿಯ ವಾರ್ಷಿಕೋತ್ಸವ ಹಾಗು ಮೀಲಾದ್ ಫೆಸ್ಟ್-2019 ಕಾರ್ಯಕ್ರಮವು ಮಂಗಳೂರಿನ ಪುರಭವನದಲ್ಲಿ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲ್ಲಿಕೋಟೆ ಹಾಗೂ ಕಣ್ಣೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಹಾಗೂ ಶಿಕ್ಷಣ ತಜ್ಞರಾದ ಡಾ. ಅಬ್ದುಲ್ ರಹ್ಮಾನ್ ಅವರು ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಯೆನೆಪೋಯ ಅಬ್ದುಲ್ಲಾ ಕುಂಞಿ ವಹಿಸಿದ್ದರು. ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ ಕಾರ್ಯಕ್ರಮ ಉದ್ಘಾಟಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಬಿ.ಎಂ ಮಮ್ತಾಝ್ ಅಲಿ ಸ್ವಾಗತಿಸಿದರು. ಟ್ರಸ್ಟಿಗಳಾದ ಹಾಜಿ ಮುಹಮ್ಮದ್ ಅರಬಿ, ಬಶೀರ್ ಅಹ್ಮದ್, ಮುಹಮ್ಮದ್ ಹಾರಿಸ್, ಬಿ.ಎ ನಝೀರ್, ಮುಹಮ್ಮದ್ ಕುದ್ರೋಳಿ, ಮೌಲಾನ ಅಬ್ದುಲ್ ರಶೀದ್ ಝೈನಿ, ಪಿ.ಸಿ. ಹಾಶಿರ್, ಪ್ರಾಂಶುಪಾಲರಾದ ಅಬ್ದುಲ್ ರಹ್ಮಾನ್ ಸಖಾಫಿ ಮತ್ತು ಮ್ಯಾನೇಜರ್ ಹಸನ್ ಕುಂಞಿ ಈ ಸಂದರ್ಭ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಸಾಂಸೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಆಡಳಿತಧಿಕಾರಿ ಅಸ್ಮಾ ಅಸಫ್ ಹಾಗೂ ಸಂಯೋಜಕರಾದ ಸಾಜಿದಾ ರಫೀಕ್ ಕಾರ್ಯಕ್ರಮ ನಿರೂಪಿಸಿದರು.