ಮಂಗಳೂರು ಪೊಲೀಸರ ದೌರ್ಜನ್ಯ ಆರೋಪ : ಐಸಿಯುನಲ್ಲಿ ಹೆದರಿ ಅಡಗಿ ಕುಳಿತ ವೈದ್ಯರು !
![ಮಂಗಳೂರು ಪೊಲೀಸರ ದೌರ್ಜನ್ಯ ಆರೋಪ : ಐಸಿಯುನಲ್ಲಿ ಹೆದರಿ ಅಡಗಿ ಕುಳಿತ ವೈದ್ಯರು ! ಮಂಗಳೂರು ಪೊಲೀಸರ ದೌರ್ಜನ್ಯ ಆರೋಪ : ಐಸಿಯುನಲ್ಲಿ ಹೆದರಿ ಅಡಗಿ ಕುಳಿತ ವೈದ್ಯರು !](https://www.varthabharati.in/sites/default/files/images/articles/2019/12/20/224375-1576841193.jpeg)
ಮಂಗಳೂರು ನಗರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಗಾಯಾಳುಗಳ ಜತೆ ಬಂದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆನ್ನಲಾಗಿದ್ದು, ಘಟನೆಯಿಂದ ಬೆಚ್ಚಿಬಿದ್ದ ವೈದ್ಯರು, ನರ್ಸ್ಗಳು ಐಸಿಯುನ ರೂಮ್ವೊಂದರಲ್ಲಿ ಅಡಗಿ ಕುಳಿತ ಘಟನೆ ನಡೆದಿದೆ.
ಐಸಿಯುನ ಬಾಗಿಲು ನೂಕಿ ಒಳ ಪ್ರವೇಶಿಸಿದ ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದವರ ಜತೆ ಬಂದವರನ್ನು ಲಾಠಿಯಿಂದ ಹೊಡೆಯಲು ಮುಂದಾದರು. ಪ್ರಾಣಭಯದಿಂದ ಐಸಿಯುನ ರೂಮ್ವೊಂದರಲ್ಲಿ ವೈದ್ಯರು ಸಹಿತ 10ಕ್ಕೂ ಅಧಿಕ ನರ್ಸ್ಗಳು ಅಡಗಿ ಕುಳಿತೆವು. ನಮ್ಮ ರೂಮಿನ ಬಾಗಿಲು ಒದೆಯುವ ಶಬ್ದವೂ ಆಯಿತು. ಬಹಳ ಹೆದರಿದ್ದೆವು. ನಮ್ಮವರಲ್ಲಿ ಕೆಲವರು ಅಳುತ್ತಾ ಕುಟುಂಬಸ್ಥರಿಗೆ ಪರಿಸ್ಥಿತಿಯನ್ನು ವಿವರಿಸುತ್ತಿದ್ದರು ಎಂದು ಹೆಸರು ಬಹಿರಂಗ ಪಡಿಸಲು ಬಯಸದ ವೈದ್ಯರೊಬ್ಬರು ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.
Next Story