ಮಂಗಳೂರು : ಜುಮಾ ನಮಾಜ್ ಗಾಗಿ ಕರ್ಫ್ಯೂ ಸಡಿಲಿಕೆ
![ಮಂಗಳೂರು : ಜುಮಾ ನಮಾಜ್ ಗಾಗಿ ಕರ್ಫ್ಯೂ ಸಡಿಲಿಕೆ ಮಂಗಳೂರು : ಜುಮಾ ನಮಾಜ್ ಗಾಗಿ ಕರ್ಫ್ಯೂ ಸಡಿಲಿಕೆ](https://www.varthabharati.in/sites/default/files/images/articles/2019/12/20/224418-1576821830.jpg)
ಮಂಗಳೂರು, ಡಿ. 20 : ಮಂಗಳೂರು ನಗರ ವ್ಯಾಪ್ತಿಯಲ್ಲಿ ವಿಧಿಸಲಾಗಿರುವ ಕರ್ಫ್ಯೂ ನಲ್ಲಿ ಶುಕ್ರವಾರ ಜುಮಾ ನಮಾಝ್ ಮಾಡಲು ಅವಕಾಶ ನೀಡುವ ಉದ್ದೇಶದಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಮುಸ್ಲಿಮರು ಜುಮಾ ನಮಾಝ್ ಗೆ ಮಸೀದಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಜುಮಾ ನಮಾಝ್ ನಿರ್ವಹಿಸಿ ಬಳಿಕ ಆದಷ್ಟು ಬೇಗ ಅಲ್ಲಿಂದ ತಮ್ಮ ತಮ್ಮ ಮನೆಗಳಿಗೆ ಮರಳಬೇಕು ಎಂದು ತಿಳಿಸಲಾಗಿದೆ.
Next Story