ಕೋಟ, ಡಿ.20: ಗದ್ದೆಯಿಂದ ಹುಲ್ಲು ತರಲು ನಡೆದುಕೊಂಡು ಹೋಗುತ್ತಿದ್ದ ಕಾವಡಿ ಗ್ರಾಮದ ಮಾನಂಬಳ್ಳಿಯ ಸವಿತಾ ಶೆಡ್ತಿ(65) ಎಂಬವರು ಡಿ.20 ರಂದು ಬೆಳಗ್ಗೆ ಕಾಲುದಾರಿಯಲ್ಲಿ ಆವರಣ ಇಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.