ಕಾರ್ಮಿಕ ಕಾನೂನುಗಳ ಅನುಷ್ಠಾನದಲ್ಲಿ ಗೊಂದಲ: ಡಿಸಿ ಜಗದೀಶ್
![ಕಾರ್ಮಿಕ ಕಾನೂನುಗಳ ಅನುಷ್ಠಾನದಲ್ಲಿ ಗೊಂದಲ: ಡಿಸಿ ಜಗದೀಶ್ ಕಾರ್ಮಿಕ ಕಾನೂನುಗಳ ಅನುಷ್ಠಾನದಲ್ಲಿ ಗೊಂದಲ: ಡಿಸಿ ಜಗದೀಶ್](https://www.varthabharati.in/sites/default/files/images/articles/2019/12/21/224582-1576940262.jpg)
ಉಡುಪಿ, ಡಿ.21: ಕಾರ್ಮಿಕರ ಹೋರಾಟದ ಫಲವಾಗಿ ಸಾಕಷ್ಟು ಕಾರ್ಮಿಕ ಕಾನೂನುಗಳು ಜಾರಿಗೆ ಬಂದಿವೆ. ಆದರೆ ಅವುಗಳ ಅಧ್ಯಯನಗಳು ಸರಿಯಾಗಿ ಆಗುತ್ತಿಲ್ಲ. ಈ ಕಾನೂನುಗಳ ಅನುಷ್ಠಾನಕ್ಕೆ ಸಂಬಂಧಿಸಿ ಅಧಿಕಾರಿಗಳಲ್ಲಿಯೇ ಸಾಕಷ್ಟು ಗೊಂದಲ ಗಳಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಉಡುಪಿ ಶಾಖೆಯ ವತಿಯಿಂದ ಕುಂಜಿಬೆಟ್ಟುವಿನ ಐಸಿಎಐ ಭವನದ ಸೆಮಿನಾರ್ ಹಾಲ್ನಲ್ಲಿ ಆಯೋಜಿಸಲಾದ ಕಾರ್ಮಿಕ ಕಾನೂನುಗಳ ಪಕ್ಷಿನೋಟ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸರಕಾರಿ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರ ಪಿಎಫ್ ಹಾಗೂ ಇಎಸ್ಐ ಹಣವನ್ನು ಗುತ್ತಿಗೆ ಸಂಸ್ಥೆ ಗಳು ಬಾಕಿ ಇರಿಸಿಕೊಂಡಿ ರುವ ವಿಚಾರಗಳು ಗಮನಕ್ಕೆ ಬಂದಿದೆ. ಉಡುಪಿ ಜಿಲ್ಲೆಯಲ್ಲಿ ಬೇರೆ ಜಿಲ್ಲೆ ಗಳಲ್ಲಿರುಷ್ಟು ಬಾಕಿ ಇಲ್ಲದಿದ್ದರೂ ಶೇ.100ರಷ್ಟು ಪಾವತಿಯಾಗಿದೆ ಅಂತನೂ ಹೇಳಕ್ಕೆ ಆಗಲ್ಲ. ನೌಕರರು ದುಡಿದ ಹಣ ಅವರಿಗೆ ಸರಿಯಾದ ಸಮಯಕ್ಕೆ ಸೇರಬೇಕಾಗಿದೆ ಎಂದರು.
ಕಂದಾಯ ಇಲಾಖೆಗೆ ಸಂಬಂಧಿಸಿದ ಕಾನೂನುಗಳ ಕುರಿತು ಅಧಿಕಾರಿಗಳ ತರಬೇತಿ ನೀಡುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಯಾವುದೇ ತಪ್ಪು ಸಂಭವಿಸದಂತೆ ಹಾಗೂ ಆ ತಪ್ಪು ಆರ್ಟಿಐ ಕಾರ್ಯಕರ್ತರಿಗೆ ಆಹಾರವಾಗದಂತೆ ಎಚ್ಚರ ವಹಿಸಲು ಈ ತರಬೇತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಎಸ್.ಎಸ್. ಲಾ ಚೇಂಬರ್ನ ಕಾನೂನು ಸಲಹೆಗಾರ ಎಚ್.ಎಸ್.ಶಾಮಸುಂದರ್ ಉಪಸ್ಥಿತರಿದ್ದರು. ಸಂಸ್ಥೆಯ ಉಡುಪಿ ಶಾಖೆಯ ಅಧ್ಯಕ್ಷ ಸಿಎ ನರಸಿಂಹ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಸಿಎ ಕವಿತಾ ಎಂ.ಪೈ ವಂದಿಸಿದರು. ಸಿಎ ಅರ್ಚನಾ ಮಯ್ಯ ಕಾರ್ಯಕ್ರಮ ನಿರೂಪಿಸಿದರು.