ನೌಶೀನ್ ಕುಟುಂಬಕ್ಕೆ ಕುಮಾರಸ್ವಾಮಿ ಸಾಂತ್ವನ, 5 ಲಕ್ಷ ರೂ.ನ ಚೆಕ್ ವಿತರಣೆ
ಮಂಗಳೂರು ಗೋಲಿಬಾರ್ ಪ್ರಕರಣ
![ನೌಶೀನ್ ಕುಟುಂಬಕ್ಕೆ ಕುಮಾರಸ್ವಾಮಿ ಸಾಂತ್ವನ, 5 ಲಕ್ಷ ರೂ.ನ ಚೆಕ್ ವಿತರಣೆ ನೌಶೀನ್ ಕುಟುಂಬಕ್ಕೆ ಕುಮಾರಸ್ವಾಮಿ ಸಾಂತ್ವನ, 5 ಲಕ್ಷ ರೂ.ನ ಚೆಕ್ ವಿತರಣೆ](https://www.varthabharati.in/sites/default/files/images/articles/2019/12/22/224647-1577003956.gif)
ಮಂಗಳೂರು, ಡಿ.22: ನಗರದಲ್ಲಿ ಗುರುವಾರ ನಡೆದ ಗೋಲಿಬಾರ್ಗೆ ಬಲಿಯಾದ ಕುದ್ರೋಳಿಯ ಯುವಕ ನೌಶೀನ್ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಐದು ಲಕ್ಷ ರೂ.ನ ಚೆಕ್ ವಿತರಿಸಿ ಸಾಂತ್ವನ ಹೇಳಿದರು.
ಇಂದು ಬೆಳಗ್ಗೆ ಕುದ್ರೋಳಿಯಲ್ಲಿರುವ ನೌಶೀನ್ ನಿವಾಸಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಘಟನೆಯ ಬಗ್ಗೆ ವಿವರಗಳನ್ನು ಪಡೆದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಬೋಜೇಗೌಡ, ಬಿ.ಎಂ.ಫಾರೂಕ್, ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ವಿಟ್ಲ ಮತ್ತಿತತರು ಜೊತೆಗಿದ್ದರು.