Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಸೈಲೆಂಟ್ ನೈಟ್... ಹೋಲಿ ನೈಟ್....!!

ಸೈಲೆಂಟ್ ನೈಟ್... ಹೋಲಿ ನೈಟ್....!!

ಅಜಯ್ ರಾಜ್ ಡಿಅಜಯ್ ರಾಜ್ ಡಿ22 Dec 2019 4:31 PM IST
share
ಸೈಲೆಂಟ್ ನೈಟ್... ಹೋಲಿ ನೈಟ್....!!

ಡಿಸೆಂಬರ್ ತಿಂಗಳು ಬಂತೆಂದರೆ ಸಾಕು ಕ್ರಿಸ್ಮಸ್ ಹತ್ತಿರದಲ್ಲಿದೆ ಎನ್ನುವ ಬೆಚ್ಚಗಿನ ಭಾವ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ಕ್ರಿಸ್ಮಸ್ ಹಬ್ಬ ಎಂದರೆ ಯೇಸುಕ್ರಿಸ್ತನ ಹುಟ್ಟುಹಬ್ಬ. ಕ್ರೈಸ್ತರ ಅತಿ ದೊಡ್ಡ ಹಬ್ಬಗಳಲ್ಲಿ ಒಂದು. ತಿಂಗಳ ದಿನಗಳು ಕಳೆದಂತೆಲ್ಲಾ ಜಗಮಗಿಸುವ ದೀಪಾಲಂಕಾರಗಳು, ನಕ್ಷತ್ರಗಳು, ಕೇಕ್, ಚಾಕೊಲೇಟ್ ಮತ್ತು ಇನ್ನಿತರ ಸಿಹಿತಿಂಡಿಗಳು ಹಬ್ಬದ ವಾತಾವರಣವನ್ನು ಉಂಟುಮಾಡುತ್ತವೆ. ಇನ್ನು ಕ್ರೈಸ್ತರ ಮನೆಗಳಲ್ಲಂತೂ ಪುಟ್ಟ ಪುಟ್ಟ ಕ್ರಿಸ್ಮಸ್ ಗುಡಿಸಲುಗಳು ಮತ್ತು ಕ್ರಿಸ್ಮಸ್ ಟ್ರೀಗಳು ಕಡ್ಡಾಯವಾಗಿರುತ್ತವೆ. ಇಡೀ ಪ್ರಪಂಚವೇ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತವೆ.

ಕ್ರಿಸ್ಮಸ್ ಹಬ್ಬದ ಮತ್ತೊಂದು ವಿಶಿಷ್ಟವೆಂದರೆ ಕ್ಯಾರಲ್ಸ್. ಅಂದರೆ ಕ್ರಿಸ್ತನ ಜನನದ ಕಥಾನಕವನ್ನು ಹೊಂದಿರುವ ಗೀತೆಗಳು. ಇಂತಹ ಗೀತೆಗಳಲ್ಲಿ ಸುಪ್ರಸಿದ್ಧವಾದ ಒಂದು ಗೀತೆಯ ಬಗ್ಗೆಯೇ ನಾನು ಹೇಳ ಹೊರಟಿರುವುದು. ಹೌದು, ಅದು ಸೈಲೆಂಟ್ ನೈಟ್ ಹೋಲಿ ನೈಟ್ ಎಂಬ ಅತಿ ಮಧುರ ಮಹೋನ್ನತ ಗೀತೆ. ಜಗತ್ತಿನ ಸುಮಾರು ಮುನ್ನೂರಕ್ಕೂ ಹೆಚ್ಚು ಭಾಷೆ, ಉಪಭಾಷೆಗಳಿಗೆ ಅನುವಾದವಾಗಿರುವ ಈ ಗೀತೆಯನ್ನು ಬಹುಶ: ಕೇಳದವರೇ ಇಲ್ಲ ಎನ್ನಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕ, ಮುದುಕರಾದಿಯಾಗಿ ಈ ಹಾಡನ್ನು ಕೇಳಿಸಿಕೊಂಡಾಕ್ಷಣ ಎಲ್ಲರೂ ಗುನುಗುತ್ತಾರೆ. ಮೂಲತ: ಜರ್ಮನ್ ಭಾಷೆಯಲ್ಲಿ ರಚಿತವಾದ ಈ ಹಾಡಿನ ಸ್ವರ ಮಾಧುರ್ಯಕ್ಕೆ ಮನಸೋಲದವರೇ ಇಲ್ಲ. ಈ ಸುಂದರ, ಸುಶ್ರಾವ್ಯ ಗೀತೆಯು ಹುಟ್ಟಿದ ಬಗೆಯೇ ಒಂದು ರೋಚಕ ಕಥೆ.

ಒಬೆರ್ನಡಾರ್ ಎಂಬುದು ಆಸ್ಟ್ರಿಯಾ ದೇಶದ ಜರ್ಮನ್ ಮನೆಮಾತಿನ ಒಂದು ಪುಟ್ಟ ಹಳ್ಳಿ. 1818ರ ಡಿಸೆಂಬರ್ ತಿಂಗಳಿನ ಚಳಿಗಾಲ. ಅಲ್ಲಿನ ಭೀಕರ ಚಳಿಗೆ ಹಳ್ಳಿಯ ಪಕ್ಕದ ಸಾಲ್ಝ್ ಹೊಳೆಯು ಹೆಪ್ಪುಗಟ್ಟುತ್ತಿದ್ದ ಸಮಯ. ಹಳ್ಳಿಯ ಸಂತ ನಿಕೋಲಾಸ್ ಚರ್ಚು ಕ್ರಿಸ್ತಜಯಂತಿಯ ಆಚರಣೆಗೆ ಸಿದ್ಧವಾಗುತ್ತಿತ್ತು. ಅಲ್ಲಿನ ಚರ್ಚಿನ ಪಾದ್ರಿ ಫಾದರ್ ಜೋಸೆಫ್ ಮೊಹ್ರ್ ಇನ್ನು ತರುಣ. ಆತ ಆ ಚರ್ಚಿಗೆ ಬಂದು ಕೇವಲ ಒಂದು ವರ್ಷವಾಗಿತ್ತಷ್ಟೇ. ಮಧ್ಯರಾತ್ರಿಯ ಪೂಜೆಗೆ ಸಕಲ ಸಿದ್ಧತೆಯನ್ನು ಕೈಗೊಳ್ಳಲು ಎರಡು ತಾಸು ಮುಂಚಿತವಾಗಿಯೇ ಚರ್ಚಿನೊಳಗೆ ಆಗಮಿಸಿದ ಫಾದರ್ ಮೊಹ್ರ್ ದೊಡ್ಡ ಹಬ್ಬಗಳಿಗೆಂದೇ ಉಪಯೋಗಿಸಲ್ಪಡುತ್ತಿದ್ದ ಚರ್ಚಿನ ಪೈಪ್ ಆರ್ಗಾನ್‌ನ ಮೇಲೆ ಮೆಲ್ಲನೆ ಕೈಯಾಡಿಸಿ, ಅದರ ಮೇಲಿದ್ದ ಧೂಳನ್ನೆಲ್ಲಾ ಬಹಳ ನಾಜೂಕಾಗಿ ಒರೆಸಿ, ಬಹಳ ಅಭಿಮಾನ ಮತ್ತು ಹೆಮ್ಮೆಯಿಂದ ನುಡಿಸಲು ಪ್ರಾರಂಭಿಸುತ್ತಾರೆ. ಆದರೆ, ಆ ಪೈಪ್ ಆರ್ಗಾನ್‌ನಿಂದ ಶಬ್ಧವೇ ಹೊರಡುವುದಿಲ್ಲ. ಮೂರು ದಿನಗಳ ಹಿಂದೆಯಷ್ಟೇ ನಗರದಿಂದ ವೀಣಾ ವಾದಕನನ್ನು ಕರೆಸಿ, ರಿಪೇರಿ ಮಾಡಿಸಿಟ್ಟಿದ್ದ ಪೈಪ್ ಆರ್ಗಾನ್ ಇನ್ನೇನು ಕ್ರಿಸ್ತ ಜಯಂತಿಗೆ ಇನ್ನೆರಡು ತಾಸು ಉಳಿದಿದೆ ಎನ್ನುವಷ್ಟರಲ್ಲಿ ಶಬ್ಧವನ್ನೇ ಹೊರಡಿಸುತ್ತಿಲ್ಲವೆಂಬುದನ್ನು ತಿಳಿದು ಫಾದರ್ ಮೊಹ್ರ್ ದಿಗ್ಭ್ರಾಂತರಾಗುತ್ತಾರೆ. ಕೊಂಚ ಸವಾರಿಸಿಕೊಂಡ ನಂತರ, ಒಮ್ಮೆಲೆ ಏನೋ ಹೊಳೆದಂತಾಗಿ ಪಕ್ಕದೂರಿನ ಫ್ರಾಂಝ್ ಝೇವೆರ್ ಗ್ರುಬೇರ್ ಎಂಬ ಸ್ಕೂಲ್ ಮೇಷ್ಟ್ರ ಮನೆಗೆ ಆಗಮಿಸುತ್ತಾರೆ. ಫ್ರಾಂಝ್ ಝೇವೆರ್ ಗ್ರುಬೇರ್ ಅವರು ಕೇವಲ ಮೇಷ್ಟ್ರು ಮಾತ್ರ ಆಗಿರದೆ ಆರ್ಗನ್ ನಿಪುಣರೂ ಹಾಗೂ ಚರ್ಚಿನ ಗಾನವೃಂದದ ಮುಖ್ಯಸ್ಥರು ಆಗಿದ್ದರು. ಚರ್ಚಿನಲ್ಲಿ ನಡೆದಿರುವ ಅನಾಹುತವನ್ನು ಗ್ರುಬೇರ್ ಮೇಷ್ಟ್ರಿಗೆ ವಿವರಿಸಿದ ಫಾದರ್ ಮೊಹ್ರ್, ತಾನು ಒಂದೆರಡು ವರ್ಷಗಳ ಹಿಂದೆ ಕ್ರಿಸ್ಮಸ್‌ಗಾಗಿ ಗೀಚಿಟ್ಟುಕೊಂಡಿದ್ದ ‘‘ಸ್ಟಿಲ್ಲೇ ನಾಕ್ಟ್, ಹೈಲಿಗೆ ನಾಕ್ಟ್’‘ಎಂಬ ನಾಲ್ಕೈದು ಸಾಲುಗಳ ಪೇಪರನ್ನು ಅವರಿಗೆ ಕೊಟ್ಟು ಅದಕ್ಕೆ ರಾಗ ಸಂಯೋಜಿಸಿ ಕೊಡುವಂತೆ ದುಂಬಾಲು ಬೀಳುತ್ತಾರೆ. ಗ್ರುಬೇರ್ ತಮ್ಮ ಗಿಟಾರನ್ನು ತೆಗೆದುಕೊಂಡು ಗೀತಸಾಹಿತ್ಯದ ಮೇಲೆ ಕಣ್ಣಾಡಿಸುತ್ತಾ, ಯಾವುದೋ ಒಂದು ರಾಗವನ್ನು ಗುನುಗಿದಾಗ, ಆಶ್ಚರ್ಯವೆಂಬಂತೆ ಅಲ್ಲಿನ ಪದಗಳೆಲ್ಲಾ ಸುಲಲಿತವಾಗಿ ರಾಗಕ್ಕೆ ಮಿಳಿತವಾಗಿ ಅದೊಂದು ಸುಂದರ ಹಾಡಾಗಿ ರೂಪುಗೊಂಡಿತು.

ಇದನ್ನೇ ಅಂದು ಒಬೆರ್ನಡಾರ್ ಹಳ್ಳಿಯ ಚರ್ಚಿನಲ್ಲಿ ಕ್ರಿಸ್ತಜಯಂತಿಯ ಮಧ್ಯರಾತ್ರಿ ಹಾಡಿದಾಗ, ಜನರೆಲ್ಲರೂ ಈ ಹಾಡನ್ನು ಮನದುಂಬಿ ಹಾಡಿ ಪುನೀತರಾದರು. ನಾವು ಈ ಹಾಡನ್ನು ಎಂದೂ ಮರೆಯಲಾರೆವು ಎಂದು ಹೇಳಿ ಮತ್ತೊಮ್ಮೆ ಗುನುಗಿದರು. ಅಲ್ಲಿಂದ ಎಷ್ಟೋ ದಿನಗಳವರೆಗೆ ಹಳ್ಳಿಯ ಜನರು ಈ ಹಾಡನ್ನು ಗುನುಗಿದ್ದೇ ಗುನುಗಿದ್ದು. ಈ ಮೊದಲೇ ಹೇಳಿದಂತೆ ಈ ಸುಂದರ ಸುಮಧುರ ಗೀತೆ ಪ್ರಪಂಚದ ಸುಮಾರು ಮುನ್ನೂರಕ್ಕೂ ಹೆಚ್ಚು ಭಾಷೆ, ಉಪಭಾಷೆಗಳಿಗೆ ಅನುವಾದಗೊಂಡಿದೆ.

ಇದಾಗಿ ಸುಮಾರು ನೂರು ವರ್ಷಗಳು ಕಳೆದವು. ಅದು 1914ನೇ ಇಸವಿ. ಮೊದಲ ಮಹಾಯುದ್ಧ ಪ್ರಾರಂಭ ವಾಗಿ ನಾಲ್ಕೈದು ತಿಂಗಳಾಗಿತ್ತು. ಜರ್ಮನ್ ಸಶಸ್ತ್ರ ಪಡೆಗಳು ಅದಾಗಲೇ ಯೂರೋಪಿನ ಬಹುಭಾಗವನ್ನು ಆಕ್ರಮಿಸಿ ಕೊಂಡಿದ್ದವು. ಇತ್ತ ಬ್ರಿಟಿಷ್ ಹಾಗೂ ಫ್ರೆಂಚ್ ಪಡೆಗಳು ಜಂಟಿ ಯಾಗಿ ಜರ್ಮನ್ ಸೇನೆಯನ್ನು ಹಿಮ್ಮೆಟ್ಟಿಸಲು ಹರಸಾಹಸ ಪಡುತ್ತಿದ್ದವು. ಈ ಸಂದರ್ಭದಲ್ಲಿ ಯುದ್ಧ್ದದಲ್ಲಿ ನಿರತರಾಗಿದ್ದ ಸಾವಿರಾರು ಸೈನಿಕರ ಪತ್ನಿಯರು ಕ್ರಿಸ್ಮಸ್ ಹಬ್ಬಕ್ಕಾದರೂ ತಮ್ಮ ಗಂಡಂದಿರನ್ನು ಮನೆಗೆ ಕಳುಹಿಸಬೇಕೆಂದು ಸೇನಾಧಿಪತಿಗಳಿಗೆ ಪತ್ರ ಬರೆದರೂ ಅವರ ಕೋರಿಕೆಯನ್ನು ಮನ್ನಿಸಲಿಲ್ಲ. ನೆನಪಿಡಿ, ಯುದ್ಧದಲ್ಲಿ ಭಾಗವಹಿಸಿದ ಸಾವಿರಾರು ಸೈನಿಕರಲ್ಲಿ ಬಹುಪಾಲು ಚಿಗುರು ಮೀಸೆಯ, ಹದಿನೆಂಟು ತುಂಬದ ಹುಡುಗರೇ ಇದ್ದರು. ಇದಾಗ್ಯೂ ಅಂದಿನ ವಿಶ್ವಗುರುಗಳಾಗಿದ್ದ ಪೋಪ್ ಹದಿನೈದನೇ ಬೆನೆಡಿಕ್ಟರು ಕಡೇ ಪಕ್ಷ ಸಮ್ಮನಸ್ಸುಗಳು ಹಾಡುವ ಕ್ರಿಸ್ಮಸ್ ರಾತ್ರಿಯಲ್ಲಾದರೂ ಕದನ ವಿರಾಮ ಘೋಷಿಸಬೇಕು ಎಂದು ಮನವಿ ಮಾಡಿಕೊಂಡರೂ ಉಭಯ ಸೇನಾನಾಯಕರು ಅವರ ಮನವಿಯನ್ನು ತಳ್ಳಿಹಾಕಿದರು.

ಎರಡೂ ಸೇನಾ ಪಡೆಗಳ ನಡುವೆ ಒಂದು ವಿಶಾಲ ಯುದ್ಧ ಭೂಮಿ. ಎರಡೂ ಬದಿಯ ಸೈನಿಕರು ಟ್ರೆಂಚ್‌ಗಳನ್ನು (ಕಂದಕ) ಅಗೆದು ಅದರಲ್ಲಿ ಹುದುಗಿಕೊಂಡು ವಿರೋಧಿ ಪಡೆಗಳತ್ತ ಬಂದೂಕನ್ನು ಮುಖಮಾಡಿದ್ದರು. ಕಂದಕದಿಂದ ಕೊಂಚ ಮೇಲೆ ತಲೆ ಎತ್ತಿದರೂ ಸರಿಯೇ ಹಾರಿ ಬರುವ ಬಂದೂಕಿನ ಗುಂಡುಗಳಿಗೆ ಬಲಿಯಾಗಿಬಿಡುತ್ತಿದ್ದರು. ಇಂತಹ ವಿಷಮ ಸನ್ನಿವೇಷದಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಕೆಲವೇ ತಾಸುಗಳು ಬಾಕಿ ಇದ್ದವು. ಇನ್ನೇನು ಕ್ರಿಸ್ಮಸ್ ಘಳಿಗೆ ಬಂತು ಎನ್ನುವಷ್ಟರಲ್ಲಿ, ಯುದ್ಧಭೂಮಿಯ ನೀರವ ಮೌನದ ನಡುವೆ, ಬೀಸುತ್ತಿದ್ದ ಚುಮುಚುಮು ಕುಳಿರ್ಗಾಳಿಯ ಅಲೆಗಳಲ್ಲಿ ತೇಲಿಕೊಂಡು ಬಂದ ಒಂದು ರಾಗ ಬ್ರಿಟಿಷ್ - ಫ್ರೆಂಚ್ ಪಡೆಗಳ ಕಿವಿ ನಿಮಿರುವಂತೆ ಮಾಡಿತ್ತು. ಜರ್ಮನ್ ಕ್ಯಾಂಪ್‌ನಿಂದ ಸೈನಿಕನೊಬ್ಬ ತನ್ನೆಲ್ಲಾ ಧೈರ್ಯವನ್ನು ಒಟ್ಟುಮಾಡಿ ಕಂದಕದಿಂದ ಎದ್ದು ‘‘ಸ್ಟಿಲ್ಲೇ ನಾಕ್ಟ್... ಹೈಲಿಗೆ ನಾಕ್ಟ್’‘ಎಂದು ಭಾವಪರವಶನಾಗಿ ಹಾಡುತ್ತಿದ್ದ. ಇದಾದ ಕೆಲ ಕ್ಷಣಗಳಲ್ಲೇ ಅಚ್ಚರಿ ಎಂಬಂತೆ ಬ್ರಿಟಿಷ್ - ಫ್ರೆಂಚ್ ಪಡೆಗಳ ಕಂದಕದಿಂದ ‘‘ಆಲ್ ಇಸ್ ಕಾಮ್... ಆಲ್ ಇಸ್ ಬ್ರೈಟ್...’’ ಎಂಬ ಉತ್ತರ ಅದೇ ರಾಗದಲ್ಲಿ ಬಂತು. ಇದರ ಬೆನ್ನಲ್ಲೇ ಜರ್ಮನ್ ಸೈನಿಕರು ಹ್ಯಾಪಿ ಕ್ರಿಸ್ಮಸ್ ಎಂದು ಕೂಗಿದರೆ, ಬ್ರಿಟಿಷ್ ಸೈನಿಕರು ಪ್ರತ್ಯುತ್ತರವಾಗಿ ಮೆರ್ರಿ ಕ್ರಿಸ್ಮಸ್ ಎಂದು ಕೂಗಿದರು. ಆಗ ಉಭಯ ಸೇನೆಗಳ ಸೈನಿಕರು ಕಂದಕಗಳಿಂದ ಆಚೆಗೆ ಜಿಗಿದು ಪರಸ್ಪರ ಕ್ರಿಸ್ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರಲ್ಲದೆ ತಮ್ಮಲ್ಲಿದ್ದ ಸಿಹಿಯನ್ನು ಹಂಚಿಕೊಂಡರು. ಎರಡೂ ಸೇನೆಗಳ ಸೇನಾಧಿಪತಿಗಳು ಪ್ರೀತಿ ಮತ್ತು ಶಾಂತಿಯ ಗುರುತಾಗಿ ತಮ್ಮ ಕೋಟಿನ ಎರಡು ಗುಂಡಿಗಳನ್ನು ಕಿತ್ತು ಪರಸ್ಪರರ ಕೈಗಿತ್ತರು. ಇದೇ ಸಮಯದಲ್ಲಿ ಯುದ್ಧ ಕೈದಿಗಳನ್ನು ಪರಸ್ಪರರಿಗೆ ಗೌರವಪೂರ್ವಕವಾಗಿ ಮರಳಿಸಲಾಯಿತು, ಯುದ್ಧದಲ್ಲಿ ಗಾಯಗೊಂಡವರಿಗೆ ಉಪಶಮನ ದೊರೆಯಿತು ಹಾಗೂ ಎರಡೂ ಕಡೆ ಸತ್ತು ಅನಾಥರಾಗಿ ಬಿದ್ದಿದ್ದ ಸೈನಿಕರ ಶವಗಳಿಗೆ ಗೌರವಪೂರ್ವಕ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಯಿತು. ಹೀಗೆ ಇದುವರೆಗೂ ಕೇವಲ ಬಂದೂಕು ಮತ್ತು ಫಿರಂಗಿಗಳೇ ಬೆಂಕಿಕಾರುತ್ತಿದ್ದ ರಣಾಂಗಣದಲ್ಲಿ ಶಾಂತಿ ಮತ್ತು ಪ್ರೀತಿಯ ಸಂಕೇತವಾದ ಮೇಣದ ಬತ್ತಿಗಳು ಹೊತ್ತಿಕೊಂಡವು. ಕ್ರಿಸ್ತನ ಜನನದ ಸಂದೇಶ ಅವರಲ್ಲಿ ಪ್ರತಿಧ್ವನಿಸಿತ್ತು. ಅಲ್ಲಿಗೆ ಸೈಲೆಂಟ್ ನೈಟ್ ಎಂಬ ಹಾಡು ಮೊದಲನೇ ವಿಶ್ವಯುದ್ಧವನ್ನು ತನ್ನ ಹೃದಯಸ್ಪರ್ಶಿ ಆಲಾಪನೆಯ ಮೂಲಕ ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಇಂದಿಗೂ ಸಹ ಈ ಸುಪ್ರಸಿದ್ಧ ಹಾಡನ್ನು ವಿಶ್ವದೆಲ್ಲೆಡೆ ಅತ್ಯಂತ ಉಲ್ಲಾಸದಿಂದ ಹಾಡಲಾಗುತ್ತದೆ. ದೇಶ, ಆಚಾರ - ವಿಚಾರ, ಧರ್ಮ - ಸಂಸ್ಕೃತಿಗಳೆಲ್ಲವನ್ನು ಮೀರಿ ಕೇಳಿದವರಿಗೆ ಭರವಸೆಯನ್ನು, ಸುಪ್ತ ಸಾಂತ್ವನವನ್ನು ನೀಡುತ್ತಿರುವ ಈ ಸುಮಧುರ ಗೀತೆಗೆ ಕಳೆದ ವರ್ಷವಷ್ಟೇ 200 ವರ್ಷ ತುಂಬಿತು.

ಈ ಹಾಡು ಕನ್ನಡದಲ್ಲಿಲ್ಲವೇ ಎಂಬ ಕುತೂಹಲ ನಿಮಗೆ ಇರಬಹುದು. ಹೌದು, ಈ ಹಾಡು ಕನ್ನಡಕ್ಕೂ ಸಹ ಅನುವಾದಗೊಂಡಿದೆ. ಸುಮಾರು 40 ವರ್ಷಗಳ ಹಿಂದೆ ಶ್ರೀಮತಿ ಸರಳ ಬ್ಲೇರ್ ಅವರು ಅನುವಾದಿಸಿದ ಈ ಸುಮಧುರ ಗೀತೆ ಇಗೋ ನಿಮಗಾಗಿ! ಬನ್ನಿ, ನಾವೂ ಸೇರಿ ಹಾಡೋಣ..

ಮಂಗಳಶ್ರೀ ರಾತ್ರಿಯಲಿ ಬೆತ್ಲೆಹೇಮ್ ಚತ್ರದಿ

ವರಕನ್ಯೆಯಲಿ ಜನಿಸಿದ

ದೇವಪುತ್ರನಂ ವಂದಿಸುವ

ವಂದನೆ ರಕ್ಷಕನೇ ವಂದನೆ ರಕ್ಷಕನೇ

ಮಂಗಳಶ್ರೀ ರಾತ್ರಿಯಲಿ ದೂತರು ಹೊಲದಿ

ಹಿಂಡುಕಾಯುವ ಕುರುಬರ್ಗೆ

ತಂದ ವಾರ್ತೆಯು ಶ್ರೇಷ್ಠವೇ

ಸ್ವಾಗತ ರಕ್ಷಕನೇ ಸ್ವಾಗತ ರಕ್ಷಕನೇ

share
ಅಜಯ್ ರಾಜ್ ಡಿ
ಅಜಯ್ ರಾಜ್ ಡಿ
Next Story
X