ಕಾಪು: ಪ್ರತಿಭಟನಾ ಸಭೆ ಮುಂದೂಡಿಕೆ
ಕಾಪು, ಡಿ.22: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೇಂದ್ರ ಸರಕಾರ ಇತ್ತೀಚೆಗೆ ತಿದ್ದುಪಡಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೊಂದಾವಣಿ (ಎನ್ಆರ್ಸಿ) ಕಾಯ್ದೆಯನ್ನು ನಾಗರಿಕರ ಮೇಲೆ ಅಸಾಂವಿಧಾನಿಕವಾಗಿ ಹೇರುವ ಹುನ್ನಾರವನ್ನು ವಿರೋಧಿಸಿ ಇದೇ ಡಿ.23ರ ಸೋಮವಾರ ಕಾಪುನಲ್ಲಿ ನಡೆಸಲುದ್ದೇಶಿಸಿರುವ ‘ಭಾರತ ಬಚಾವೋ’ ಪ್ರತಿಭಟನಾ ಸಭೆಯನ್ನು ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿ ದೊರಕದಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
ಇಲಾಖೆ ಪ್ರತಿಭಟನೆಗೆ ಅನುಮತಿ ನೀಡದಿರುವುದರಿಂದ ಕಾನೂನು ಉಲ್ಲಂಘನೆ ಮಾಡುವುದು ಬೇಡವೆಂಬ ಸದುದ್ದೇಶದಿಂದ ಈ ಮುಂದೂಡಿಕೆ ಮಾಡಲಾಗಿದೆ ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನಚಂದ್ರ ಸುವರ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು ಸಹಕರಿಸುವಂತೆ ಅವರು ಕೋರಿದ್ದಾರೆ.
Next Story