Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ22 Dec 2019 11:56 PM IST
share
ಓ ಮೆಣಸೇ...

*ರಾಹುಲ್ ಗಾಂಧಿಯಿಂದಲೇ ಕಾಂಗ್ರೆಸ್ ಸರ್ವ ನಾಶ - ಜಗದೀಶ್ ಶೆಟ್ಟರ್, ಸಚಿವ.
ಬಿಜೆಪಿಯಿಂದ ದೇಶವೇ ಸರ್ವನಾಶ.

---------------------
  
ಬುದ್ಧ್ದಿವಂತಿಕೆಯ ವಿಚಾರದಿಂದಾಗಿ ಬ್ರಾಹ್ಮಣರು ಅತ್ಯುನ್ನತ ಸ್ಥಾನದಲ್ಲಿ ನಿಲ್ಲುತ್ತಾರೆ - ರಘುಪತಿ ಭಟ್, ಶಾಸಕ.
ನೂರಕ್ಕೆ ನೂರರಷ್ಟು ಸತ್ಯ.

---------------------
ರಾಹುಲ್ ಗಾಂಧಿ ಉದ್ಧವ್ ಠಾಕ್ರೆ ಆಗಬಹುದೇ ಹೊರತು, ದೇಶಭಕ್ತ ಸಾವರ್ಕರ್ ಆಗಲು ಸಾಧ್ಯವಿಲ್ಲ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ.
ಆಗಲೂ ಬಾರದು. ಆದರೆ, ಸದ್ಯಕ್ಕೆ ಉದ್ಧವ್ ಠಾಕ್ರೆಯವರು ದೇಶ ಕಟ್ಟಿದ ನೆಹರೂ ಆಗುವ ಉತ್ಸಾಹದಲ್ಲಿದ್ದಾರೆ.

---------------------

ದೇಶದ ಜನರು ಮೋದಿಯನ್ನು ನಂಬಿದಷ್ಟು ಬೇರೆ ಯಾರನ್ನೂ ನಂಬಲಿಲ್ಲ. ಅದೇ, ಮೋದಿ ಮಾಡಿದಷ್ಟು ನಂಬಿಕೆ ದ್ರೋಹ ಬೇರೆ ಯಾರೂ ಮಾಡಲಿಲ್ಲ - ದೇವನೂರ ಮಹಾದೇವ, ಸಾಹಿತಿ.
ಅನಿಲ್ ಅಂಬಾನಿ ಇದನ್ನು ಒಪ್ಪುತ್ತಿಲ್ಲ.

---------------------

ಪೌರತ್ವ ತಿದ್ದುಪಡಿ ಕಾಯ್ದ್ದೆ ಸಾವರ್ಕರ್‌ಗೆ ಮಾಡಿದ ಅವಮಾನ - ಉದ್ಧವ್‌ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ.
 ಸಂವಿಧಾನ ಬರೆದಿರುವುದು ಸಾವರ್ಕರ್ ಆಗಿರಬಹುದೇ?

---------------------

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯಾರು ಹಿಂಸಾಚಾರ ಹರಡುತ್ತಿದ್ದಾರೆ ಎಂಬುದನ್ನು ಅವರು ಧರಿಸಿರುವ ಬಟ್ಟೆಗಳಿಂದ ಸುಲಭವಾಗಿ ಪತ್ತೆ ಮಾಡಬಹುದು - ನರೇಂದ್ರ ಮೋದಿ, ಪ್ರಧಾನಿ.
ಪೊಲೀಸರ ಬಟ್ಟೆಗಳ ಕುರಿತಂತೆ ಹೇಳುತ್ತಿರಬೇಕು.

---------------------

ನನಗೆ ಉಪಮುಖ್ಯಮಂತ್ರಿ ಹುದ್ದೆ ಸಿಗಬೇಕು ಎಂಬುದು ಜನರ ಬೇಡಿಕೆ - ಶ್ರೀರಾಮುಲು, ಸಚಿವ.
ಬಳ್ಳಾರಿಯನ್ನು ಪ್ರತ್ಯೇಕ ರಾಜ್ಯ ಮಾಡಿದರೆ, ಮುಖ್ಯಮಂತ್ರಿಯೇ ಆಗಬಹುದು.

---------------------

ಮೂಲ ಬಿಜೆಪಿಗರು, ವಲಸೆ ಬಂದವರು ಎಂಬ ಭೇದ ಬಿಜೆಪಿಯಲ್ಲಿ ಇಲ್ಲ - ಸಿದ್ದೇಶ್ವರ, ಸಂಸದ.
ವಲಸೆ ಬಂದ ಆರ್ಯರು, ಮೂಲ ದ್ರಾವಿಡರು ಎಂಬ ಭೇದ ಮಾತ್ರ.

---------------------

ಇಂದಿನ ಜಗತ್ತಿನಲ್ಲಿ ಹೆಚ್ಚಿನ ಸಮಸ್ಯೆಗಳು ಅಧಿಕಾರಕ್ಕೆ ಅಂಟಿಕೊಂಡಿರುವ ಮುದುಕರಿಂದಾಗಿ ಹುಟ್ಟಿಕೊಂಡಿದೆ - ಬರಾಕ್ ಒಬಾಮ, ಅಮೆರಿಕ ಮಾಜಿ ಅಧ್ಯಕ್ಷ.  
ಪ್ರಶಸ್ತಿಗೆ ಅಂಟಿಕೊಂಡಿರುವ ಹಿರಿಯ ಸಾಹಿತಿಗಳಿಂದ ಎನ್ನುವ ಆರೋಪವೂ ಇದೆ.

---------------------

ನಾನೇ ಕಾಂಗ್ರೆಸ್‌ಗೆ ಕರೆತಂದು, ನಾನೇ ಸಚಿವರನ್ನಾಗಿಸಿದ್ದವರು ನನಗೇ ಟೋಪಿ ಹಾಕಿದರು - ಮಾರ್ಗರೆಟ್ ಆಳ್ವಾ, ಕಾಂಗ್ರೆಸ್ ನಾಯಕಿ.
ಜನರಿಗೆ ಟೋಪಿ ಹಾಕುವುದಕ್ಕಿಂತ ವಾಸಿ.

---------------------

ಕಾಂಗ್ರೆಸ್‌ನಲ್ಲಿರುವ ಎಲ್ಲರೂ ಸಮರ್ಥ ನಾಯಕರೇ ಆಗಿದ್ದಾರೆ - ಡಿ.ಕೆ. ಶಿವಕುಮಾರ್, ಮಾಜಿ ಸಚಿವ.
ಸಮರ್ಥ ಕಾರ್ಯಕರ್ತರ ಕೊರತೆ ಇದೆ.

---------------------

ಉಗ್ರಗಾಮಿ ಮನಸ್ಥಿತಿಯವರಿಗೆ ದೇಶವನ್ನು ಸ್ವಾಧೀನ ಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ
 - ಇಮ್ರಾನ್ ಖಾನ್, ಪಾಕ್ ಪ್ರಧಾನಿ.
ಮೊದಲು ಅವರಿಂದ ದೇಶವನ್ನು ಬಿಡಿಸಿಕೊಳ್ಳುವ ದಾರಿ ನೋಡಿ.

---------------------

ರಾಜ್ಯದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಅವಶ್ಯಕತೆ ಇಲ್ಲ - ರೇಣುಕಾಚಾರ್ಯ, ಶಾಸಕ.
ಮುಖ್ಯಮಂತ್ರಿ ಸ್ಥಾನದ ಅಗತ್ಯ ಇದೆಯೇ ಎಂದು ದಿಲ್ಲಿ ವರಿಷ್ಠರು ಕೇಳುತ್ತಿದ್ದಾರಂತೆ.

---------------------

ಯಾರೂ ಯಾರಿಗೂ ನೋವು ಕೊಡದ ಆಡಳಿತ ರಾಮ ರಾಜ್ಯದಲ್ಲಿತ್ತು - ರಾಘವೇಂದ್ರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ.
ಶಂಬೂಕನ ತಲೆಯನ್ನು ನೋವಾಗದ ರೀತಿಯಲ್ಲಿ ಕತ್ತರಿಸಲಾಯಿತಂತೆ.

---------------------

ಮಂತ್ರಿ ಸ್ಥಾನಕ್ಕೆ ಲಾಬಿ ಮಾಡಿಲ್ಲ. ಆದರೆ ಆಸೆ ಇದೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಯತ್ನಾಳ್ ಹೆಸರಿಗೆ ತಕ್ಕಂತೆ ಮರಳಿ ಯತ್ನ ಮಾಡಿ.

---------------------

ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ - ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ.
ಉಪಚುನಾವಣೆಯ ಫಲಿತಾಂಶವೇ ಅವರಿಗೆ ಆ ಅಧಿಕಾರ ನೀಡಿತು.

----------------  

ಮುಸ್ಲಿಮರನ್ನು ಕಾಂಗ್ರೆಸ್ ನಿರ್ಲಕ್ಷಿಸಿದ್ದರಿಂದಲೇ ಅವರು ಬಿಜೆಪಿಯತ್ತ ಒಲವು ಬೆಳೆಸಿಕೊಂಡಿದ್ದಾರೆ - ಸಿ.ಎಂ. ಇಬ್ರಾಹೀಂ, ವಿ.ಪ. ಸದಸ್ಯ.
ತಾವು ಬಿಜೆಪಿಯ ಕಡೆಗೆ ಒಲವು ತೋರಿಸುತ್ತಿದ್ದೀರಿ ಎಂದಾಯಿತು.

---------------------

ಪಾಕಿಸ್ತಾನ ಕಾಂಗ್ರೆಸ್‌ನ ಪಾಪದ ಕೂಸು - ಸಿ.ಟಿ.ರವಿ, ಸಚಿವ.
ಆರೆಸ್ಸೆಸ್ ಪಾಕಿಸ್ತಾನದ ಪಾಪದ ಕೂಸು ಎನ್ನುವ ಮಾತಿದೆ.

---------------------

ಮುಸ್ಲಿಮರಿಗೆ ವಿಶ್ವದಲ್ಲಿ ಅನೇಕ ದೇಶಗಳಿವೆ. ಹಿಂದೂಗಳಿಗೆ ಒಂದೇ ಒಂದು ದೇಶವೂ ಇಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ.
ಬೇರೆ ದೇಶ ಇಲ್ಲ ಎನ್ನುವ ಕಾರಣಕ್ಕೆ ನೀವು ಈ ದೇಶದಲ್ಲಿದ್ದೀರಿ ಎಂದಾಯಿತು.

---------------------

ಉಪಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ, ಇನ್ನೂ ಸತ್ತಿಲ್ಲ - ಎಚ್. ವಿಶ್ವನಾಥ್, ಮಾಜಿ ಶಾಸಕ.

ಕೆಲವೊಮ್ಮೆ ಸೋಲು ಸಾವಿಗಿಂತ ಹೀನಾಯವಾಗಿರುತ್ತದೆ.

---------------------

ಮಂಗಳೂರಿನಲ್ಲಿ ಗೋಲಿಬಾರ್‌ಗೆ ಸರಕಾರ ಅನುಮತಿ ನೀಡಿರಲಿಲ್ಲ - ಯಡಿಯೂರಪ್ಪ, ಮುಖ್ಯಮಂತ್ರಿ.
ಬಹುಶಃ ಕಲ್ಲಡ್ಕ ಭಟ್ಟರು ಅನುಮತಿ ನೀಡಿರಬಹುದೇ?

---------------------

ಭಾರತದ ಶೇ.90ರಷ್ಟು ಮುಸ್ಲಿಮರು ಮೂಲತಃ ಮತಾಂತರಗೊಂಡ ಹಿಂದೂಗಳು - ಅಬ್ದುಲ್ ಅಝೀಂ, ಕರ್ನಾಟಕ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ

ಆದರೆ, ಅವರಲ್ಲಿ ಆರ್ಯನ್ನರ ಡಿಎನ್‌ಎ ಇಲ್ಲದಿರುವುದೇ ಸಮಸ್ಯೆ.

---------------------

ವಿನಾಶದತ್ತ ಸಾಗುತ್ತಿದ್ದ ಭಾರತೀಯ ಆರ್ಥಿಕತೆಯನ್ನು ಕೇಂದ್ರ ಸರಕಾರ ರಕ್ಷಿಸಿದೆ - ನರೇಂದ್ರ ಮೋದಿ, ಪ್ರಧಾನಿ.
ಬಹುಶಃ ರಾಮ್‌ದೇವ್ ಅವರ ಪತಂಜಲಿ ಕಂಪೆನಿಯ ಆರ್ಥಿಕ ಸ್ಥಿತಿಯ ಬಗ್ಗೆ ಹೇಳುತ್ತಿರಬೇಕು.

---------------------

ಎದೆ ಸೀಳಿದರೆ ನಾಲ್ಕಕ್ಷರ ಇಲ್ಲದ ಪಂಕ್ಚರ್ ಹಾಕುವವರು ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಾರೆ - ತೇಜಸ್ವಿ ಸೂರ್ಯ, ಸಂಸದ
ಅಕ್ಕರೆಯಿಲ್ಲದ ಎದೆಯೊಳಗೆ ಅಕ್ಷರ ವಿದ್ದರೆ ಅವರು ಎದೆ ಸೀಳುವವರಾಗುತ್ತಾರೆಯೇ ಹೊರತು, ಜೋಡಿಸುವವರಲ್ಲ.

share
ಪಿ.ಎ.ರೈ
ಪಿ.ಎ.ರೈ
Next Story
X