ಸಚಿನ್ ತೆಂಡುಲ್ಕರ್ ಗೆ ನೀಡಲಾಗಿದ್ದ x ಭದ್ರತೆ ವಾಪಸ್ , ಆದಿತ್ಯ ಠಾಕ್ರೆ ಗೆ z ಭದ್ರತೆ
ಮುಂಬೈ, ಡಿ.25: ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರಿಗೆ ನೀಡಲಾಗಿದ್ದ x ದರ್ಜೆ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ, ಆದಾಗ್ಯೂ ಅವರು ಬೆಂಗಾವಲು ಹೊಂದಿರುತ್ತಾರೆ.
ಇದೇ ವೇಳೆ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಅವರ ಭದ್ರತಾ ವ್ಯಾಪ್ತಿಯನ್ನು Y + ನಿಂದ Z ಗೆ ಹೆಚ್ಚಿಸಲಾಗಿದೆ.
ಬೆಂಗಾವಲು ಹೊಂದಿರುವ y ವಿಭಾಗದಲ್ಲಿ ಬಿಜೆಪಿ ನಾಯಕ ಏಕನಾಥ್ ಖಡ್ಸೆ ಅವರ ಭದ್ರತಾ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ. ಅವರು ಇನ್ನು ಮುಂದೆ ಬೆಂಗಾವಲು ಹೊಂದಿರುವುದಿಲ್ಲ.
ಮಾಜಿ ಬಿಜೆಪಿ ಮುಖಂಡ ಮತ್ತು ಯುಪಿ ಗವರ್ನರ್ ರಾಮ್ ನಾಯಕ್ ಅವರ ಭದ್ರತಾ ವ್ಯಾಪ್ತಿಯನ್ನು z + ನಿಂದ x ಗೆ ಮತ್ತು ವಿಶೇಷ ಸಾರ್ವಜನಿಕ ಅಭಿಯೋಜಕ ಉಜ್ವಾಲ್ ನಿಕಮ್ ಅವರ ಭದ್ರತಾ ವ್ಯಾಪ್ತಿಯನ್ನು z+ ನಿಂದ y ದರ್ಜೆಗೆ ಇಳಿಸಲಾಗಿದೆ.
ಮಹಾರಾಷ್ಟ್ರದಲ್ಲಿ 97 ಮಂದಿಗೆ ಭದ್ರತಾ ರಕ್ಷಣೆಯನ್ನು ಒದಗಿಸಲಾಗಿದ್ದು, ಈ ಪೈಕಿ 29 ಮಂದಿಗೆ ಭದ್ರತಾ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ ಅಥವಾ ಹೆಚ್ಚಿಸಲಾಗಿದೆ.
Next Story