ಡಿ.29: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸಂವಾದ
ಮಂಗಳೂರು, ಡಿ.25: ರಾಷ್ಟ್ರೀಯವಾದ, ಸಾಮಾಜಿಕ, ರಾಜಕೀಯೇತರ ಸಂಘಟನೆ ಸಿಟಿಜನ್ ಕೌನ್ಸಿಲ್ನ ಮಂಗಳೂರು ಚಾಪ್ಟರ್ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಡಿ.29ರಂದು ಬೆಳಗ್ಗೆ 10 ಗಂಟೆಗೆ ನಗರದ ಉರ್ವದ ಕೆನರಾ ಪ್ರೌಢಶಾಲೆಯ ಮಿಜಾರ್ ಗೋವಿಂದ ಪೈ ಮೆಮೋರಿಯಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಭಾಷಣಕಾರರಾಗಿ ಚಿಂತಕ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story