ಜಂಇಯ್ಯತುಲ್ ಮುಅಲ್ಲಿಮೀನ್ 60ನೇ ವಾರ್ಷಿಕ ಮಹಾ ಸಮ್ಮೇಳನ
![ಜಂಇಯ್ಯತುಲ್ ಮುಅಲ್ಲಿಮೀನ್ 60ನೇ ವಾರ್ಷಿಕ ಮಹಾ ಸಮ್ಮೇಳನ ಜಂಇಯ್ಯತುಲ್ ಮುಅಲ್ಲಿಮೀನ್ 60ನೇ ವಾರ್ಷಿಕ ಮಹಾ ಸಮ್ಮೇಳನ](https://www.varthabharati.in/sites/default/files/images/articles/2019/12/28/225476-1577512726.jpeg)
ಕೊಲ್ಲಂ: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು 10,000 ಮದ್ರಸಗಳಲ್ಲಿ ಸೇವೆಗೈಯುತ್ತಿರುವ 1 ಲಕ್ಷಕ್ಕೂ ಮಿಕ್ಕಿದ ಮದ್ರಸ ಅಧ್ಯಾಪಕರ ಒಕ್ಕೂಟ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ 60ನೇ ವಾರ್ಷಿಕ ಮಹಾ ಸಮ್ಮೇಳನ ಕೊಲ್ಲಂ ನಲ್ಲಿ ಚಾಲನೆಗೊಂಡಿತು.
ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಬೆಂಗಳೂರು ಜಾಮಿಯಾ ರಝ್ವಿಯಾಳಿಯಾ ಉಲ್ ಖುರ್ಆನ್ ಪ್ರಿನ್ಸಿಪಾಲ್ ಮೌಲಾನಾ ಮುಫ್ತಿ ಶರೀಫುರ್ರಹ್ಮಾನ್ ರಝ್ವಿ ಅಲ್ ಖಾದಿರಿ ಉದ್ಘಾಟಿಸಿದರು.
3 ದಿನಗಳಲ್ಲಿ ನಡೆಯುವ ಪ್ರತಿನಿಧಿ ಸಂಗಮದಲ್ಲಿ 40 ರಷ್ಟು ವಿವಿಧ ವಿಷಯಗಳಲ್ಲಿ ಚರ್ಚೆ ನಡೆಯಲಿದ್ದು ರವಿವಾರ ಸಮಾರೋಪಗೊಳ್ಳಲಿದೆ.
Next Story