ಕಿಸೆಯಿಂದ ಹಣ ಕಳವುಗೈದ ಆರೋಪಿಯ ಬಂಧನ
ಕುಂದಾಪುರ, ಡಿ.29: ಕರ್ಕುಂಜೆ ಗ್ರಾಮದ ನೆಂಪು ಕರ್ನಾಟಕ ಪಬ್ಲಿಕ್ ಹೈಸ್ಕೂಲ್ನಲ್ಲಿ ಡಿ.28ರಂದು ನಡೆದ ಮುಖ್ಯಮಂತ್ರಿ ಭೇಟಿಯ ಕಾರ್ಯಕ್ರಮ ದಲ್ಲಿ ವ್ಯಕ್ತಿಯೊಬ್ಬರ ಪರ್ಸ್ ಕಳವು ಮಾಡಿದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಬಗ್ಗೆ ವರದಿಯಾಗಿದೆ.
ಬಂಧಿತನನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಿವಾಸಿ ಗುರುಮೂರ್ತಿ (40) ಎಂದು ಗುರುತಿಸಲಾಗಿದೆ. ಉಡುಪಿಯ ರಮೇಶ ಕೋಟ್ಯಾನ್(61) ಎಂಬವರು ಕಾರ್ಯಕ್ರಮ ಮುಗಿಸಿ ಸಂಜೆ ಪಾರ್ಕಿಂಗ್ ಸ್ಥಳದ ಕಡೆಗೆ ಹೋಗು ತ್ತಿದ್ದು, ಗೇಟಿನ ಬಳಿ ಜನರ ನೂಕು ನುಗ್ಗಲಿನಲ್ಲಿ ಹಿಂಬದಿಯಲ್ಲಿದ್ದ ವ್ಯಕ್ತಿ ಪ್ಯಾಂಟಿನ ಹಿಂಬದಿ ಕಿಸೆಗೆ ಕೈ ಹಾಕಿದನು. ಕೂಡಲೇ ರಮೇಶ್ ಕಿಸೆ ನೋಡಿದಾಗ ಕಿಸೆಯಲ್ಲಿ ಇದ್ದ 18 ಸಾವಿರ ರೂ. ಕಳವಾಗಿರುವುದು ಕಂಡುಬಂತು. ತಕ್ಷಣ ಅವರು ಬೊಬ್ಬೆ ಹಾಕಿದಾಗ ಅಲ್ಲಿದ್ದ ಜನರು ಕಳವು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story