ಮಂಗಳೂರು: ಲ್ಯಾಂಡ್ ಟ್ರೇಡ್ಸ್ನ ‘ಸಾಲಿಟೇರ್’ ವಸತಿ ಸಮುಚ್ಚಯ ಉದ್ಘಾಟನೆ
![ಮಂಗಳೂರು: ಲ್ಯಾಂಡ್ ಟ್ರೇಡ್ಸ್ನ ‘ಸಾಲಿಟೇರ್’ ವಸತಿ ಸಮುಚ್ಚಯ ಉದ್ಘಾಟನೆ ಮಂಗಳೂರು: ಲ್ಯಾಂಡ್ ಟ್ರೇಡ್ಸ್ನ ‘ಸಾಲಿಟೇರ್’ ವಸತಿ ಸಮುಚ್ಚಯ ಉದ್ಘಾಟನೆ](https://www.varthabharati.in/sites/default/files/images/articles/2019/12/29/225688-1577639517.jpg)
ಮಂಗಳೂರು, ಡಿ.29: ನಗರದ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯು ನಗರದ ಉರ್ವ-ಚಿಲಿಂಬಿ ಸಮೀಪದ ಹ್ಯಾಟ್ಹಿಲ್ನಲ್ಲಿ ನಿರ್ಮಿಸಿದ ವಿಶಿಷ್ಟವಾದ ‘ಸಾಲಿಟೇರ್’ ಬಹು ಅಂತಸ್ತುಗಳ ವಸತಿ ಸಮುಚ್ಚಯವನ್ನು ರವಿವಾರ ಸಂಜೆ ಯೆನೆಪೋಯ ವಿವಿಯ ಕುಲಾಧಿಪತಿ ಯೆನಪೊಯ ಅಬ್ದುಲ್ಲಾ ಕುಂಞಿ ಉದ್ಘಾಟಿಸಿದರು. ಮಣಿಪಾಲ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎಂ. ಹೆಗ್ಡೆ ಕ್ಲಬ್ ಹೌಸ್ನ್ನು ಲೋಕಾರ್ಪಣೆ ಗೊಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಯೆನೆಪೊಯ ವಿವಿಯ ಕುಲಾಧಿಪತಿ ಯೆನಪೊಯ ಅಬ್ದುಲ್ಲಾ ಕುಂಞಿ ಮಾತನಾಡಿ, ಜನಸೇವೆಯಲ್ಲಿ ತೊಡಗಿರುವ ಶ್ರೀನಾಥ್ ಹೆಬ್ಬಾರ್ ಹಲವು ಸಾಧನೆಗಳನ್ನು ದಾಖಲಿಸಿದ್ದಾರೆ. ಹ್ಯಾಟ್ಹಿಲ್ನಲ್ಲಿ ಸುಂದರ ಬೃಹತ್ ಕಟ್ಟಡ ನಿರ್ಮಿಸಿದ್ದಾರೆ. ಮಂಗಳೂರು ಬೆಳೆಯುತ್ತಿರುವುದಕ್ಕೆ ನಿದರ್ಶನ ವೇ ಇಂತಹ ಗಗನಚುಂಬಿ ಕಟ್ಟಡಗಳಾಗಿವೆ. ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಸೌಲಭ್ಯಗಳನ್ನು ಕಟ್ಟಡ ಹೊಂದಿದೆ ಎಂದು ಶುಭ ಹಾರೈಸಿದರು.
ಮಣಿಪಾಲ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎಂ. ಹೆಗ್ಡೆ ಮಾತನಾಡಿ, ಹೆಬ್ಬಾರರಿಂದ ಇನ್ನು ಹಲವು ಕಟ್ಟಡಗಳ ಲೋಕಾರ್ಪಣೆ ಯಾಗಲಿ ಎಂದು ಶುಭ ಹಾರಿಸಿದರು.
ಕರ್ನಾಟಕ ಬ್ಯಾಂಕ್ನ ಅಧ್ಯಕ್ಷ ಪಿ.ಜಯರಾಮ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಹೆಬ್ಬಾರ್ ಅಂತಹ ಗ್ರಾಹಕರು ಎಲ್ಲ ಬ್ಯಾಂಕ್ಗಳಿಗೂ ಬೇಕಾಗುತ್ತಾರೆ. ಯಾವುದೆ ಕಪ್ಪು ಚುಕ್ಕೆ ಇಲ್ಲದ ಉದ್ಯಮಿ ಶ್ರೀನಾಥ್ ಹೆಬ್ಬಾರ್. ಮಂಗಳೂರಿ ನಲ್ಲಿ ಇನ್ನು ಹಲವು ಗಗನಚುಂಬಿ ಕಟ್ಟಡಗಳು ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸಲರ್ ಅಧ್ಯಕ್ಷ ಡಾ.ಎಂ.ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಲ್ಯಾಂಡ್ ಟ್ರೇಡ್ಸ್ನ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಮಾತನಾಡಿ, ಕ್ರಿಸಿಲ್ ಅಂತಾರಾಷ್ಟ್ರೀಯ ಮಾನ್ಯತಾ ಸಂಸ್ಥೆಯಿಂದ ‘7 ಸ್ಟಾರ್ಸ್’ ಪುರಸ್ಕಾರಕ್ಕೆ ಪಾತ್ರವಾಗಿರುವ ಸಾಲಿಟೇರ್, ಕ್ರೆಡಾಯ್ನಿಂದ 50ಕ್ಕಿಂತ ಹೆಚ್ಚು ವಸತಿಗಳ ವಿಭಾಗದಲ್ಲಿ ‘ಕೇರ್ ಅವಾರ್ಡ್ 2019’ ಪ್ರಶಸ್ತಿಯನ್ನು ಕೂಡ ಪಡೆದಿದೆ. ಆರ್ಕಿಟೆಕ್ಟ್ ಪೀಟರ್ ಮಸ್ಕರೇನಸ್ ಅವರು ಈ ಯೋಜನೆಯ ಅತ್ಯಾಕರ್ಷಕ ವಿನ್ಯಾಸವನ್ನು ರೂಪಿಸಿದ್ದಾರೆ ಎಂದರು.
ಲ್ಯಾಂಡ್ಟ್ರೇಡ್ಸ್ನಿಂದ ಸುರತ್ಕಲ್ ಲೈಟ್ಹೌಸ್ ಬಳಿ ‘ಎಮೆರಾಲ್ಡ್ ಬೇ’ ಎಂಬ ಸುಸಜ್ಜಿತ ನಿವೇಶನಗಳು, ದೇರೆಬೈಲ್ ಚರ್ಚ್ ಬಳಿ ‘ಹ್ಯಾಬಿಟಟ್ 154’ ಎಂಬ ಬಜೆಟ್ ಅಪಾರ್ಟ್ಮೆಂಟ್ಗಳು, ಬಲ್ಮಠದಲ್ಲಿ ‘ಮೈಲ್ಸ್ಟೋನ್-25’ ಎಂಬ ಅತ್ಯಾಧುನಿಕ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುತ್ತದೆ. 32 ಅಂತಸ್ತುಗಳಲ್ಲಿ 143 ಅಪಾರ್ಟ್ಮೆಂಟ್: ಲ್ಯಾಂಡ್ಟ್ರೇಡ್ಸ್ನ ‘ಸಾಲಿಟೇರ್’ನಲ್ಲಿ ವಾಸ್ತು ವೈಭವ ಸಹಿತವಾದ 32 ಅಂತಸ್ತುಗಳಲ್ಲಿ 2-3-4 ಬಿಎಚ್ಕೆಗಳ ಮತ್ತು 5 ಬಿಎಚ್ಕೆ ಡೂಪ್ಲೆಕ್ಸ್ಗಳ 143 ಅಪಾರ್ಟ್ಮೆಂಟ್ಗಳಿವೆ ಎಂದು ಲ್ಯಾಂಡ್ಟ್ರೇಡ್ಸ್ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜೆ.ಕೃಷ್ಣ ಪಾಲೇಮಾರ್, ಲಕ್ಷ್ಮೀ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ, ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ, ಮಾಜಿ ಶಾಸಕ ಜೆ.ಆರ್.ಲೋಬೊ, ಕರ್ನಾಟಕ ಬ್ಯಾಂಕ್ನ ಜಿ.ಎಂ. ಚಂದ್ರಶೇಖರ್ ರಾವ್. ಬಿ. ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಪ್ರಿಯಾ ಪ್ರಾರ್ಥಿಸಿದರು. ಲ್ಯಾಂಡ್ಟ್ರೇಡ್ಸ್ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಸ್ವಾಗತಿಸಿದರು. ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಲ್ಯಾಂಡ್ ಟ್ರೇಡ್ಸ್ನ ಕ್ರಿಸ್ಟಿನಾ ವಂದಿಸಿದರು.
ಆಕರ್ಷಕ ಪರಿಸರ: ಆಕರ್ಷಕ ಮತ್ತು ಸುಂದರವಾದ ಪರಿಸರದಲ್ಲಿ ಸಾಲಿಟೇರ್ ನಿರ್ಮಾಣವಾಗಿದೆ. ಪರಿಸರ ಸ್ನೇಹಿ ಜೀವನ ಶೈಲಿಗೆ ಪೂರಕವಾದ ವಾತಾವರಣವನ್ನು ಸಾಲಿಟೇರ್ ಹೊಂದಿದೆ. ನಿಸರ್ಗದತ್ತ ಸಂಪನ್ಮೂಲಗಳನ್ನು ರಕ್ಷಿಸಲಾಗುತ್ತಿದೆ. ಮಳೆನೀರು ಕೊಯ್ಲು ಇಲ್ಲಿನ ಪ್ರಮುಖ ಯೋಜನೆಗಳಲ್ಲೊಂದಾಗಿದೆ.
ಲ್ಯಾಂಡ್ ಟ್ರೇಡ್ಸ್ ಪರಂಪರೆ: 1992ರಲ್ಲಿ ಕೆ.ಶ್ರೀನಾಥ್ ಹೆಬ್ಬಾರ್ ಅವರು ಸ್ಥಾಪಿಸಿದ ಲ್ಯಾಂಡ್ಟ್ರೇಡ್ಸ್ ಸಂಸ್ಥೆಯು ಈಗಾಗಲೇ ವಸತಿಯುತ ಮತ್ತು ವಾಣಿಜ್ಯ ಸಂಬಂಧಿತ 37 ಯೋಜನೆಗಳನ್ನು ಯಶಸ್ವಿಯಾಗಿ ನಿರ್ಮಿಸಿದೆ. ಶ್ರೇಷ್ಠ ಗುಣಮಟ್ಟ ಗ್ರಾಹಕರ ಸಂಪೂರ್ಣ ವಿಶ್ವಾಸದಿಂದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ರೂಪುಗೊಂಡಿದೆ. ಐಎಸ್ಒ.9001:2015 ಮಾನ್ಯತೆಯ ಜತೆಗೆ ಕ್ರಿಸಿಲ್ನ ಗರಿಷ್ಠ ರೇಟಿಂಗ್ ಸಹಿತ ಅನೇಕ ಪ್ರಥಮಗಳಿಗೆ ಪಾತ್ರವಾಗಿರುವ ಏಕೈಕ ಬಿಲ್ಡರ್ಸ್ ಸಂಸ್ಥೆಯಾಗಿದೆ.