ಪಂಜಾಬ್ ನಲ್ಲಿ, ವಿಭಜನಕಾರಿ ಸಿಎಎ ಅನುಷ್ಠಾನವಿಲ್ಲ: ಅಮರಿಂದರ್ ಸಿಂಗ್
ಲುಧಿಯಾನಾ (ಪಂಜಾಬ್)ಡಿ.30: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ವಿಭಜನಕಾರಿ ಮತ್ತು ದೇಶಕ್ಕೆ ಅಪಾಯಕಾರಿ ಎಂದು ಸೋಮವಾರ ಇಲ್ಲಿ ಬಣ್ಣಿಸಿದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು,ತನ್ನ ಸರಕಾರವು ರಾಜ್ಯದಲ್ಲಿ ಈ ಕಾಯ್ದೆಯ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು.
ಇಲ್ಲಿ ಪ್ರತಿಭಟನಾ ಜಾಥಾದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಈ ಕರಾಳ ಶಾಸನದ ವಿರುದ್ಧ ಒಗ್ಗಟ್ಟಾಗುವಂತೆ ಜನರನ್ನು ಆಗ್ರಹಿಸಿದರು. ಕಾಯ್ದೆಯ ವಿರುದ್ಧ ತನ್ನ ಪಕ್ಷವು ಪಟ್ಟು ಬಿಡದೆ ಹೋರಾಡಲಿದೆ ಎಂದರು.
ಬಿಜೆಪಿಯ ವಿಭಜನಕಾರಿ ಮತ್ತು ದೇಶದ ಜಾತ್ಯತೀತ ಸ್ವರೂಪವನ್ನು ನಾಶಗೊಳಿಸುವ ಅಪಾಯಕಾರಿ ಪ್ರಯತ್ನಗಳ ವಿರುದ್ಧ ಭಾರತೀಯರು ಒಂದಾಗಬೇಕು ಎಂದು ಹೇಳಿದ ಅವರು,ಬಿಜೆಪಿಯ ದುಷ್ಟ ತಂತ್ರಗಳು ಯಶಸ್ವಿಯಾಗುವುದಿಲ್ಲ. 16 ರಾಜ್ಯಗಳಲ್ಲಿ ಸಿಎಎ ವಿರುದ್ಧ ಪ್ರತಿಭಟನೆಗಳು ಮುಂದುವರಿದಿವೆ ಎಂದರು.
Next Story