Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ​ಕೆಮ್ತೂರು ತುಳುನಾಟಕ ಸ್ಪರ್ಧೆ:...

​ಕೆಮ್ತೂರು ತುಳುನಾಟಕ ಸ್ಪರ್ಧೆ: ‘ಕೆಂಡೋನಿಯನ್ಸ್’ ನಾಟಕ ಪ್ರಥಮ

ವಾರ್ತಾಭಾರತಿವಾರ್ತಾಭಾರತಿ30 Dec 2019 9:54 PM IST
share

ಉಡುಪಿ, ಡಿ.30: ತುಳುಕೂಟ ಉಡುಪಿ ವತಿಯಿಂದ ಡಿ.23ರಿಂದ ಡಿ.29 ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ 18ನೆ ಕೆಮ್ತೂರು ದೊಡ್ಡಣ ಶೆಟ್ಟಿ ತುಳುನಾಟಕ ಸ್ಪರ್ಧೆಯಲ್ಲಿ ಮಂಗಳೂರು ಪಾದುವರಂಗ ಅಧ್ಯಯನ ಕೇಂದ್ರದ ಅರುಣ್‌ಲಾಲ್ ನಿರ್ದೇಶನದ ‘ಕೆಂಡೋನಿ ಯನ್ಸ್’ ನಾಟಕವು 20,000ರೂ. ನಗದು ಬಹುಮಾನ ಸಹಿತ ಶ್ರೇಷ್ಠ ನಾಟಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯ ಸಂತೋಷ್ ನಾಯಕ್ ಪಟ್ಲ ನಿರ್ದೇಶನದ ನೆತ್ತರ ಕಲ್ಯಾಣ ನಾಟಕವು 15,000ರೂ. ನಗದು ಸಹಿತ ದ್ವಿತೀಯ ಪ್ರಶಸ್ತಿ ಮತ್ತು ಮಂಗಳೂರು ಜರ್ನಿ ಥೇಟರ್ಸ್ ಗ್ರೂಪ್‌ನ ವಿದ್ದು ಉಚ್ಚಿಲ್ ನಿರ್ದೇಶನದ ‘ಗೋಂದೊಳು’ ನಾಟಕವು 10ಸಾವಿರ ರೂ. ನಗದು ಸಹಿತ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಶ್ರೇಷ್ಠ ನಿರ್ದೇಶನದಲ್ಲಿ ಕೆಂಡೋನಿಯನ್ಸ್ ನಾಟಕ ನಿರ್ದೇಶಕ ಅರುಣ್ ಲಾಲ್ ಪ್ರಥಮ , ನೆತ್ತೆರ ಕಲ್ಯಾಣ ನಾಟಕ ನಿರ್ದೇಶಕ ಸಂತೋಷ್ ನಾಯಕ್ ಪಟ್ಲ ದ್ವಿತೀಯ ಹಾಗೂ ಪತ್ತ್ ತರೆತ್ತಾಯನ ಕನತ್ತ ಕತೆ ನಾಟಕ ನಿರ್ದೇಶಕ ಮೈಮ್ ರಮೇಶ್ ತೃತೀಯ, ಶ್ರೇಷ್ಠ ರಂಗಪರಿಕರ ಪ್ರಸಾದನದಲ್ಲಿ ಕೆಂಡೋನಿ ಯನ್ಸ್ ಪ್ರಥಮ, ಪತ್ತ್ ತರೆತ್ತಾಯನ ಕಥೆ ದ್ವಿತೀಯ, ಪಗರಿದ ಸುಡುಕಳ ತೃತೀಯ, ಶ್ರೇಷ್ಠ ಬೆಳಕಿನಲ್ಲಿ ಕೆಂಡೋನಿಯನ್ಸ್ ನಾಟಕದ ಕ್ರಿಸ್ಟೋಪರ್ ಡಿಸೋಜ ಪ್ರಥಮ, ಇಲ್‌ಲ್ ಇಲ್‌ಲ್ದ ಕಥೆ ನಾಟಕದ ಬಾಸುಮ ಕೊಡಗು ದ್ವಿತೀಯ, ಗೊಂದೊಳು ನಾಟಕದ ಪ್ರವೀಣ್ ಜಿ.ಕೊಡವೂರು ತೃತೀಯ ಸ್ಥಾನ ಗಳಿಸಿದ್ದಾರೆ.

ಶ್ರೇಷ್ಠ ಸಂಗೀತದಲ್ಲಿ ಗೋಂದೊಳು ನಾಟಕದ ಮೇಘನಾ ಕುಂದಾಪುರ, ಅರ್ಜುನ್ ಆಚಾರ್ಯ ಪ್ರಥಮ, ಕೆಂಡೋನಿಯನ್ಸ್ ನಾಟಕದ ವೇಣು ಥೇಮುಂಡೆ, ಉದಯ್ ಕುಮಾರ್, ಮನೀಶ್ ದ್ವಿತೀಯ ಸ್ಥಾನ, ಪತ್ತ್ ತರೆತ್ತಾಯನ ಕತೆ ನಾಟಕದ ಸುಧೀಂದ್ರ ಮೋಹನ್, ಆಶಿತ್ ತೃತೀಯ, ಶ್ರೇಷ್ಠ ನಟರಾಗಿ ಕೆಂಡೋನಿಯನ್ಸ್ ನಾಟಕದ ದಾಮಣ್ಣ ಪಾತ್ರದ ಕ್ಲಾನ್‌ವಿನ್ ಫೆರ್ನಾಂಡಿಸ್ ಪ್ರಥಮ, ಗೋಂದೊಳು ನಾಟಕದ ಪೆರ್ಗಡೆ ಪಾತ್ರದ ಸುನಿಲ್ ಪಲ್ಲಮಜಲು ದ್ವಿತೀಯ, ಮರಣದ ಲೆಪ್ಪುನಾಟಕದ ನರಸಿಂಹ ರಾವ್ ಪಾತ್ರದ ಕೆ.ರಾಜಗೋಪಾಲ ಶೇಟ್ ತೃತೀಯ, ಶ್ರೇಷ್ಠ ನಟಿಯಾಗಿ ಇಲ್‌ಲ್ ಇಲ್‌ಲ್ದ ಕತೆ ನಾಟಕದ ವಾರಿಜ ಪಾತ್ರದ ಕಾವ್ಯ ವಾಣಿ ಕೊಡಗು ಪ್ರಥಮ, ಮರಣದ ಲೆಪ್ಪುನಾಟಕದ ತಾರ ಪಾತ್ರದ ಚಂದ್ರಾವತಿ ಪಿತ್ರೋಡಿ ದ್ವಿತೀಯ, ಗೋಂದೊಳು ನಾಟಕದ ದೇಬೆ ಪಾತ್ರದ ಸತ್ಯಾ ಜೀವನ್ ಸೋಮೇಶ್ವರ ತೃತೀಯ ಸ್ಥಾನ ಗಳಿಸಿದ್ದಾರೆ.

ತೀರ್ಪುಗಾರರ ಮೆಚ್ಚುಗೆ ಪಡೆದ ನಟ-ನಟಿಯರಲ್ಲಿ ಇಲ್‌ಲ್ ಇಲ್‌ಲ್ದ ಕತೆಯ ವಿಶುರಾವ್ ಹಾವಂಜೆ, ನೆತ್ತೆರ ಕಲ್ಯಾಣ ನಾಟಕದ ಬಿಜ್ಜಳ ಪಾತ್ರದ ಸಂತೋಷ್ ಪಟ್ಲ, ಬಸವಣ್ಣನ ಪಾತ್ರದ ನಾಗೇಶ್ ಮರ್ಣೆ, ಪಗರಿದ ಸುಡುಕಳ ನಾಟಕದ ವರಕಂಠ ಪಾತ್ರದ ನೂತನ್ ಕುಮಾರ್ ಕೊಡವೂರು, ಪತ್ತ್ ತರೆತ್ತಾಯನ ಕನತ ಕತೆ ನಾಟಕದ ರಾವಣ ಪಾತ್ರದ ಸುಕುಮಾರ್ ಮೋಹನ್, ಮಂಡೋದರಿ ಪಾತ್ರದ ವಾಣಿ ಸುಕುಮಾರ್, ಮರಣದ ಲೆಪ್ಪುನಾಟಕದ ಬೈರ ಪಾತ್ರದ ಬಾಲಕೃಷ್ಣ ಕೊಡವೂರು, ಡಾಕ್ಟರ್ ಪಾತ್ರದ ಸುಶಾಂತ್ ಪೂಜಾರಿ, ಕೆಂಡೋನಿಯನ್ಸ್ ನಾಟಕದ ದಿನೇಶಣ್ಣ ಪಾತ್ರದ ಸಂದೀಪ್ ಟೆಲ್ಲಿಸ್, ಪುಷ್ಪ ಪಾತ್ರದ ಝೀನಾ ಬ್ರಾಗ್ಸ್, ಇಲ್‌ಲ್ ಇಲ್‌ಲ್ದ ಕತೆ ನಾಟಕದ ಪಲ್ಲವಿ ಕೊಡಗು, ನೆತ್ತೆರ ಕಲ್ಯಾಣದ ರಂಬಾವತಿ ಪಾತ್ರದ ರಂಜಿತಾ ಆಚಾರ್ಯ, ಪಗರಿದ ಸುಡಕಳದ ರಂಜಿತ್ ಶೇಟ್ ಮೆಚ್ಚುಗೆ ಪಡೆದಿದ್ದಾರೆ. ಇಲ್ಲ್ ಇಲ್‌ಲ್ದ ಕತೆಯ ನಿರೂಪಕ ಹಾಗೂ ಮುನ್ನಿ ಪಾತ್ರದ ದೃಶಾ ಕೊಡಗು ಬಾಲನಟನಾಗಿ ತೀರ್ಪು ಗಾರರ ಮೆಚ್ಚುಗೆ ಪಡೆದಿದ್ದಾನೆ.

ಈ ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ರಂಗಕರ್ಮಿಗಳಾದ ಜಯರಾಮ್ ನೀಲಾವರ, ಪ್ರಭಾಕರ ಜಿ.ಪಿ., ಪ್ರದೀಪ್‌ಚಂದ್ರ ಕುತ್ಪಾಡಿ ಸಹಕರಿಸಿದ್ದರು. ನಾಟಕ ಸ್ಪರ್ಧೆಯ ಪ್ರಶಸ್ತಿ ಪ್ರಧಾನ ಸಮಾರಂಭವು ಜ.12ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣಮಂಟಪದಲ್ಲಿ ಜರುಗಲಿದ್ದು, ಅಂದು ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ಮತ್ತು ಕೆಮ್ತೂರು ತುಳುನಾಟಕ ಸ್ಪರ್ಧೆಯ ಸಂಚಾಲಕ ಬಿ.ಪ್ರಭಾಕರ ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X