Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪೌರತ್ವ ಕಾಯ್ದೆ ಬಗ್ಗೆ ಟ್ವಿಟರ್ ಪೋಲ್...

ಪೌರತ್ವ ಕಾಯ್ದೆ ಬಗ್ಗೆ ಟ್ವಿಟರ್ ಪೋಲ್ ನಡೆಸಿ ಮುಖಭಂಗಕ್ಕೊಳಗಾದ ಜಗ್ಗಿ ವಾಸುದೇವ್ 'ಇಶಾ ಫೌಂಡೇಶನ್'

ಟ್ವೀಟ್ ಡಿಲಿಟ್, ಸ್ಕ್ರೀನ್ ಶಾಟ್ ಗಳು ವೈರಲ್!

ವಾರ್ತಾಭಾರತಿವಾರ್ತಾಭಾರತಿ31 Dec 2019 2:40 PM IST
share
ಪೌರತ್ವ ಕಾಯ್ದೆ ಬಗ್ಗೆ ಟ್ವಿಟರ್ ಪೋಲ್ ನಡೆಸಿ ಮುಖಭಂಗಕ್ಕೊಳಗಾದ ಜಗ್ಗಿ ವಾಸುದೇವ್ ಇಶಾ ಫೌಂಡೇಶನ್

ಹೊಸದಿಲ್ಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‍ಆರ್‍ ಸಿ ವಿರುದ್ಧ ದೇಶದ ವಿವಿಧೆಡೆಗಳಲ್ಲಿ ಪ್ರತಿಭಟನೆಗಳು ಮುಂದುವರಿದಿರುವಂತೆಯೇ ಕೆಲವರು  ಟ್ವಿಟರ್ ಪೋಲ್‍ ಗಳನ್ನು ನಡೆಸಿ ಜನರ ಅಭಿಪ್ರಾಯವನ್ನು ತಿಳಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಕೆಲವೊಂದು ಪೋಲ್‍ ಗಳನ್ನು ಇದನ್ನು ಆರಂಭಿಸಿದವರೇ ಡಿಲಿಟ್ ಮಾಡಿರುವುದೂ ಹಲವರ ಗಮನಕ್ಕೆ ಬಂದಿದೆ.

ಜಗ್ಗಿ ವಾಸುದೇವ್ ಅವರ 'ಇಶಾ ಫೌಂಡೇಶನ್' ಸೋಮವಾರ ಟ್ವಿಟರ್ ಪೋಲ್ ನಡೆಸಿ ಸಿಎಎ ಹಾಗೂ ಎನ್‍ಆರ್‍ ಸಿ ವಿರುದ್ಧ ಪ್ರತಿಭಟನೆಗಳು ಸಮರ್ಥನೀಯವೇ ಎಂದು ಕೇಳಿತ್ತು. ಈ ಪೋಲ್ ಜತೆಗೆ ಈ ವಿಚಾರದ ಕುರಿತು ಸದ್ಗುರು ಅಭಿಪ್ರಾಯ ತಿಳಿಸುವ ವೀಡಿಯೋ ಕೂಡ ಪೋಸ್ಟ್ ಮಾಡಲಾಗಿತ್ತು.

ಆದರೆ ನಂತರ ಈ ಪೋಲ್ ಕುರಿತಾದ ಟ್ವೀಟ್ ಮಾಯವಾಗಿತ್ತು. ಆದರೆ ಟ್ವಿಟರ್‍ನಲ್ಲಿ ಕೆಲವರು ಅದರ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿ 62 ಶೇ. ಜನರು ಪ್ರತಿಭಟನೆಗಳು ಸರಿ ಎಂದು ಹೇಳಿದ್ದಕ್ಕೆ ಅದನ್ನು ತೆಗೆದು ಹಾಕಲಾಗಿದೆ ಎಂದು ಬೊಟ್ಟು ಮಾಡಿ ತೋರಿಸಿದ್ದಾರೆ.

ಸಿಎನ್‍ಬಿಸಿ ಆವಾಝ್ ಟಿವಿ ವಾಹಿನಿ ಕೂಡ ಮೋದಿ ಸರಕಾರದ ಕಾರ್ಯನಿರ್ವಹಣೆ ಕುರಿತಾದ ಒಂದು ಪೋಲ್ ನಡೆಸಿದ್ದರೂ ಅದನ್ನು ನಂತರ ಡಿಲೀಟ್ ಮಾಡಿದೆ. ಶೇ.62ರಷ್ಟು ಮಂದಿ ತಮಗೆ ಮೋದಿ ಸರಕಾರದ ಎರಡನೇ ಅವಧಿಯ ಕಾರ್ಯನಿರ್ವಹಣೆ ಖುಷಿ ನೀಡಿಲ್ಲ ಎಂದು ಹೇಳಿದ್ದೇ ಅದನ್ನು ಡಿಲೀಟ್ ಮಾಡಲು ಕಾರಣವೆಂದು ತಿಳಿಯಲಾಗಿದೆ.

ದೈನಿಕ್ ಜಾಗರಣ್ ಹಿಂದಿ ಪತ್ರಿಕೆ ಕೂಡ ಟ್ವಿಟರ್ ಪೋಲ್ ನಡೆಸಿ ಸಿಎಎ ಪ್ರತಿಭಟನೆಗಳು ಮತ ಬ್ಯಾಂಕ್ ರಾಜಕೀಯದ ಪರಿಣಾಮವೇ ಎಂದು ಪ್ರಶ್ನಿಸಿತ್ತು. ಈ ಪೋಲ್ ಫಲಿತಾಂಶದಲ್ಲಿ ಶೇ 54.1ರಷ್ಟು ಮಂದಿ ಮತ ಬ್ಯಾಂಕ್ ರಾಜಕೀಯವಲ್ಲ ಎಂದರೆ ಶೇ 44.1ರಷ್ಟು ಮಂದಿ ಹೌದು ಎಂದಿದ್ದರು.

ಝೀ ನ್ಯೂಸ್ ಮುಖ್ಯ ಸಂಪಾದಕ ಸುಧೀರ್ ಚೌಧುರಿ ಕೂಡ ಡಿಸೆಂಬರ್ 24ರಂದು ಟ್ವಿಟರ್ ಪೋಲ್ ನಡೆಸಿ ಜನರು ಸಿಎಎ ಬೆಂಬಲಿಸುತ್ತಾರೆಯೇ ಅಥವಾ ಇಲ್ಲವೇ ಎಂದು ಕೇಳಿದ್ದರು. ಸೋಮವಾರದ ತನಕ ಶೇ. 47.7ರಷ್ಟು ಮಂದಿ ಬೆಂಬಲಿಸುವುದಾಗಿ ಹೇಳಿದ್ದರೆ ಶೇ. 52.3ರಷ್ಟು ಮಂದಿ ಇಲ್ಲ ಎಂದು ಉತ್ತರಿಸಿದ್ದರು. ಇದೇ ವಿಚಾರದಲ್ಲಿ ಚೌಧುರಿ ನಡೆಸಿದ ಫೇಸ್ ಬುಕ್ ಪೋಲ್‍ನಲ್ಲಿ ಶೇ. 64ರಷ್ಟು ಮಂದಿ  ಬೆಂಬಲಿಸುವುದಿಲ್ಲ ಹಾಗೂ ಶೇ 36ರಷ್ಟು ಮಂದಿ ಬೆಂಬಲಿಸುವುದಾಗಿ ಹೇಳಿದ್ದರು.

ಆದರೆ ತಮ್ಮ ಟ್ವಿಟ್ಟರ್ ಪೋಲ್ ಅನ್ನು ಟ್ರೋಲ್ ಗಳು ದುರುಪಯೋಗ ಪಡಿಸಿ ಸಿಎಎ ವಿರುದ್ಧ ಮತ ನೀಡಿದ್ದರು ಎಂದು ಚೌಧುರಿ ನಂತರ ಆರೋಪಿಸಿದ್ದರು.

ಕೃಪೆ: thequint.com

Polls being conducted on social media on #CAA_NRC_Protest are proving to be quite revealing (and some are now being deleted) pic.twitter.com/fmsWQlX2Br

— Saikat Datta (saikatd@mstdn.social) (@saikatd) December 30, 2019
share
ವಾರ್ತಾಭಾರತಿ
ವಾರ್ತಾಭಾರತಿ
Next Story
X