ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು: ಸಾರ್ವಜನಿಕರಿಂದ ಲಾರಿ ಚಾಲಕನಿಗೆ ಥಳಿತ
ಶಿವಮೊಗ್ಗ, ಡಿ. 31: ವೇಗವಾಗಿ ಆಗಮಿಸಿದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಎಂಆರ್ಎಸ್ ವೃತ್ತದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ನಗರದ ಎಲ್ಬಿಎಸ್ ನಗರದ ನಿವಾಸಿ ಪ್ರಸಾದ್ ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಲಾರಿ ಚಾಲಕನಿಗೆ ಥಳಿಸಿದ ಘಟನೆ ನಡೆಯಿತು.
ನಂತರ ಪೊಲೀಸರು ಆರೋಪಿತ ಲಾರಿ ಚಾಲಕನನ್ನು ರಕ್ಷಿಸಿ, ಠಾಣೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story