ಜೆಎನ್ ಯು ಉಪ ಕುಲಪತಿ ‘ಗಲಭೆಕೋರ’ ನಂತೆ ವರ್ತಿಸುತ್ತಿದ್ದಾರೆ: ಜೆಎನ್ಯುಎಸ್ಯು ಆರೋಪ
ಹೊಸದಿಲ್ಲಿ, ಜ.6: ಜವಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಉಪಕುಲಪತಿ ಮಾಮಿಡಾಲ ಜಗದೇಶ್ ಕುಮಾರ್ ಅವರು "ಗಲಭೆಕೋರ" ನಂತೆ ವರ್ತಿಸುತ್ತಿದ್ದಾರೆ ಎಂದು ಜೆ ಎನ್ಯುಎಸ್ಯು ಆರೋಪಿಸಿದೆ
ಉಪಕುಲಪತಿ ಗಲಭೆಗೆ ಕಾರಣರಾಗಿದ್ದಾರೆ. ಜೆಎನ್ಯುಎಸ್ಯು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರತಿಭಟನೆಯನ್ನು ತಡೆಯಲು ಎಲ್ಲಾ ವಿಧಾನಗಳನ್ನು ಅವರು ಬಳಸಿದ್ದಾರೆ ಎಂದು ಹೇಳಿದೆ.
ಹಿಂಸಾಚಾರವನ್ನು ನಡೆಸಲು ಹೊರಗಿನವರನ್ನು ಲಾಠಿ ಮತ್ತು ರಾಡ್ ಗಳೊಂದಿಗೆ ಕರೆತರಲಾಗಿದೆ ಎಂದು ಅದು ಆಪಾದಿಸಿದೆ.
ಉಪಕುಲಪತಿ ಅವರು ಹೇಡಿಯಾಗಿದ್ದು, ಅವರು ಹಿಂಬಾಗಿಲಿನ ಮೂಲಕ ಕಾನೂನುಬಾಹಿರ ನೀತಿಗಳನ್ನು ರೂಪಿಸುತ್ತಾರೆ, ವಿದ್ಯಾರ್ಥಿಗಳು ಅಥವಾ ಶಿಕ್ಷಕರ ಪ್ರಶ್ನೆಗಳಿಂದ ಜಾರಿಕೊಳ್ಳುತ್ತಾರೆ ಎಂದು ಆರೋಪಿಸಿದೆ
ಇದೀಗ ಸುಮಾರು 70 ದಿನಗಳಿಂದ ಜೆಎನ್ಯು ವಿದ್ಯಾರ್ಥಿಗಳು ಹಾಸ್ಟೆಲ್ ಶುಲ್ಕ ಹೆಚ್ಚಳದ ವಿರುದ್ಧ ಮುಷ್ಕರ ನಡೆಸುತ್ತಿದ್ದಾರೆ.
ಇಲ್ಲಿ ನಡೆದ ಹಿಂಸಾಚಾರವು ವಿಸಿ ಮತ್ತು ಅವರ ಸಹಚರರ ಹತಾಶೆ ಮತ್ತು ಹತಾಶೆಯ ಪರಿಣಾಮವಾಗಿದೆ.
" ಹಿಂಚಾರದ ಘಟನೆ ದಿಲ್ಲಿ ಪೊಲೀಸರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ, ಅವರು ಹೊರಗಿನಿಂದ ಕರೆಸಿಕೊಂಡ ಎಬಿವಿಪಿ ಗೂಂಡಾಗಳಿಗೆ ಸುರಕ್ಷಿತ ಮಾರ್ಗವನ್ನು ನೀಡಿದರು" ಎಂದು ಜೆಎನ್ಯುಎಸ್ಯು ಆರೋಪಿಸಿದೆ.
ಉಪಕುಲಪತಿಗಳು ತಮ್ಮ ರಾಜೀನಾಮೆ ನೀಡಬೇಕೆಂದು ಅಥವಾ ಮಾನವ ಸಂಪನ್ಮೂಲ ಸಚಿವಾಲಯ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದೆ