ಎಂಪಿ-ಎಂಎಲ್ಎ ನ್ಯೂಸ್ನ ‘ಸೌಹಾರ್ದ ಸಂಗಮ’ ಕಾರ್ಯಕ್ರಮ

ಮಂಗಳೂರು, ಜ.9: ನಾವೆಲ್ಲರೂ ಜಾತ್ಯತೀತರಾಗಿ ಬದುಕಬೇಕು. ಸೌಹಾರ್ದತೆ ಎನ್ನುವುದು ನಮ್ಮ ಉಸಿರಾಗಿ ಇಡೀ ಭಾರತ ದೇಶ ಹಸಿರಾಗಿ ಪ್ರಜ್ವಲಿಸಬೇಕು. ಶಾಂತಿ, ಸರ್ವ ಧರ್ಮಗಳ ತವರೂರಾಗಿ ನಲಿದಾಡಬೇಕು. ನಾಡು ನುಡಿ ಸಂಸ್ಕೃತಿಗೆ ಒತ್ತು ನೀಡಿದ ಸಾಧಕರನ್ನು ಗುರುತಿಸಿ, ಸೌಹಾರ್ದವಾಗಿ ಸಾಗುವ ಸೌಹಾರ್ದ ಸಂಗಮವು ಎಲ್ಲರಿಗೂ ಮಾದರಿಯಾಗಿ ಸಹಬಾಳ್ವೆಯ ಸಂದೇಶ ಸಾರಲಿ ಎಂದು ಕಸಾಪ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ನಗರದ ಪುರಭವನದಲ್ಲಿ ಇತ್ತೀಚೆಗೆ ನಡೆದ ಎಂಪಿ-ಎಂಎಲ್ಎ ನ್ಯೂಸ್ 11ನೇ ಸೌಹಾರ್ದ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರೊಟೇರಿಯನ್ ಕೆ. ಸೀತಾರಾಮ ರೈ ಸವಣೂರು (ಸೌಹಾರ್ದ ಪ್ರಶಸ್ತಿ), ಡಾ. ಎಸ್.ಎಂ. ಗೋಪಾಲಕೃಷ್ಣ ಆಚಾರ್ಯ ಮತ್ತು ಗೌತಮ್ ಶೆಟ್ಟಿ (ಸಮಾಜ ರತ್ನ), ಸುಧೀರ್ ಶೆಟ್ಟಿ ಕಣ್ಣೂರು (ಉತ್ತಮ ಜನ ಪ್ರತಿನಿಧಿ), ಡಾ. ಡಿ. ಶಿವಾನಂದ ಪೈ ಮತ್ತು ಡಾ. ಸದಾನಂದ ಪೂಜಾರಿ (ಬೆಸ್ಟ್ ಡಾಕ್ಟರ್ಸ್ೂ ಅವಾರ್ಡ್), ಪಿ. ಜಯರಾಮ ರೈ (ಬೆಸ್ಟ್ ಲಾಯರ್ಸ್ ಅವಾರ್ಡ್), ಜಗನ್ನಾಥ್ ಶೆಟ್ಟಿ ಬಾಳ (ಮೀಡಿಯಾ ಅವಾರ್ಡ್), ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ಪೇಟೆ (ಕ್ರೀಡಾ ವರದಿಗಾರ ರಾಜ್ಯ ಪ್ರಶಸ್ತಿ) ಎನ್. ಕೃಷ್ಣಾನಂದ ಮತ್ತು ವಿಜಯಕುಮಾರ್ ಎನ್. (ಉತ್ತಮ ಅಧಿಕಾರಿ ಪ್ರಶಸ್ತಿ), ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್, ಡಾ. ರಾಜೇಶ್ ಕದ್ರಿ ಮತ್ತು ಪ್ರದೀಪ್ ಕುಮಾರ್ ಶೆಟ್ಟಿ (ಸಾಧನಶ್ರಿ ಪ್ರಶಸ್ತಿ), ದಿನೇಶ್ ಅತ್ತಾವರ (ರಂಗಭೂಮಿ ಅವಾರ್ಡ್), ಅರುಣ್ ಶೆಟ್ಟಿ ಕೋಡಿಬೆಟ್ಟು, ಪೊಳಲಿ (ಯುವರತ್ನ), ಜೇಸಿ ಕೆ.ಎಸ್. ಸುಧೀರ್ಕೃಷ್ಣ ಪಾಲ್ತಾಡಿ ಮತ್ತು ಯು.ಆರ್. ಶೆಟ್ಟಿ (ಯುವ ಪುರಸ್ಕಾರ), ಶಿವಾನಂದ ಕರ್ಕೇರ, ನರಸಿಂಹ ಹೆಗ್ಡೆ, ಪದ್ಮನಾಭ ನರಿಂಗಾನ, ವಿದ್ಯಾಧರ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಇಂದುಶೇಖರ್ ಎಸ್, ಅಶ್ವಿನಿ ಅರಳ ಮತ್ತು ಕೇಶವ ಶಾಂತಿ (ಸಾರ್ವಜನಿಕ ಸನ್ಮಾನ), ಅಬ್ದುಲ್ ರವೂಫ್, ಅನಿಲ್ ಕುಮಾರ್, ಅಬ್ದುಲ್ ರಹಿಮಾನ್, ಪಕೀರಪ್ಪಮರೋಡಿ, ಶಿವಪ್ರಕಾಶ್ ಪೂಂಜ ಹರೇಕಳ, ಇಸ್ಮಾಯೀಲ್ ಮೂಡುಶೆಡ್ಡೆ, ಬಿ. ಶೇಷಪ್ಪಬಂಬಿಲ, ಹೊನ್ನಯ್ಯ ಕಾಟಿಪಳ್ಳ, ಶರತ್ ಶೆಟ್ಟಿ ಕಿನ್ನಿಗೋಳಿ, ರಂಜಿತ್ ಶೆಟ್ಟಿ ಕಾವೂರು, ಸೂರಜ್ ಸಾಗರ್ ಕುಂಪಲ, ರಾಜೇಶ್ ಅಮೀನ್, ಜ್ಯೋತಿ ಜೈನ್, ಹರೀಶ್, ಮಂಜುನಾಥ್, ಉದಯ ಮಂಜನಾಡಿ (ಸೌಹಾರ್ದ ಪುರಸ್ಕಾರ) ಸಹಿತ 40 ಮಂದಿ ಸಾಧಕರನ್ನು ಗೌರವಿಸಲಾಯಿತು.
ಅತಿಥಿಯಾಗಿ ವೆನ್ಲಾಕ್ ಆಸ್ಪತ್ರೆಯ ಆರ್ಎಂಒ ಡಾ. ಜೂಲಿಯನ್ ಸಲ್ದಾನ, ಹೃದಯ ತಜ್ಞ ಡಾ. ಡಿ. ನರಸಿಂಹ ಪೈ ಭಾಗವಹಿಸಿದ್ದರು. ಐಎಂಎ ಮಂಗಳೂರು ಘಟಕದ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ.ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾ ಶೆಟ್ಟಿ ಮತ್ತು ನರೇಶ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.







