Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ​ಇದರ ಮುಂದಿನ ಹಂತಗಳೇನು?

​ಇದರ ಮುಂದಿನ ಹಂತಗಳೇನು?

-ಸದಾಶಿವ ಮಂಗಳೂರು-ಸದಾಶಿವ ಮಂಗಳೂರು9 Jan 2020 11:42 PM IST
share

ಮಾನ್ಯರೇ,

ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳಾದ ಮೇಲೆ ಈ ದೇಶದ ಪ್ರತಿಯೊಬ್ಬ ನಾಗರಿಕ, ತಾನು ಈ ದೇಶದವನೆಂದು ದಾಖಲೆ ಸಲ್ಲಿಸಬೇಕಾಗಿ ಬರುವುದೂ, ಅದಕ್ಕಾಗಿ ಸರಕಾರಿ ಕಚೇರಿಗಳಿಗೆ ಎಡತಾಕುವುದೂ ಎಂತಹ ದುರ್ದೈವ. ಹುಟ್ಟಿದಾಗಿನಿಂದ ಆರಂಭವಾಗುವ ಅನೇಕ ಅರ್ಜಿ ಫಾರ್ಮುಗಳಲ್ಲಿ, ಅದು ಶಾಲಾ ಕಾಲೇಜುಗಳದ್ದಾಗಿರಲಿ ಅಥವಾ ಇತರ ಅನೇಕ ಸಂದರ್ಭಗಳದ್ದಾಗಿರಲಿ, ಪ್ರತಿಯೊಂದರಲ್ಲೂ ‘ರಾಷ್ಟ್ರೀಯತೆ’ ಎಂಬ ಅಂಕಣದಲ್ಲಿ ‘ಭಾರತೀಯ’ ಎಂದೇ ದಾಖಲಿಸಿಕೊಂಡು ಬಂದ ವ್ಯಕ್ತಿಗೆ, ಈಗ ಮತ್ತೆ ತಾನು ಭಾರತೀಯ ಎಂಬುದನ್ನು ಖಚಿತಪಡಿಸಿಕೊಡಬೇಕಾದ ಪ್ರಶ್ನೆ ಎದುರಾಗಿದೆ. ಹಾಗಿದ್ದರೆ ಇಷ್ಟೂ ವರ್ಷಗಳ ಕಾಲ ತಾನು ಆ ಫಾರ್ಮುಗಳಲ್ಲಿ ‘ಭಾರತೀಯ’ ಎಂದು ನಮೂದಿಸಿದ್ದಕ್ಕೆ ಯಾವ ಬೆಲೆಯೂ ಇಲ್ಲವೇ?

ಹೇಳಿ ಕೇಳಿ ಈ ಎನ್‌ಆರ್‌ಸಿಯನ್ನು ವಿದೇಶೀ ನುಸುಳುಕೋರರನ್ನು ಪತ್ತೆ ಹಚ್ಚಲು ಜಾರಿಗೆ ತರಲಾಗುತ್ತಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ನುಸುಳುಕೋರರಿದ್ದಾರೆ, ಅದೊಂದು ಗಂಭೀರ ಸವಸ್ಯೆ ಎಂದು ಸರಕಾರ ಭಾವಿಸುವುದಾದರೆ, ಅಂತಹ ನುಸುಳುಕೋರರ ಸಂಖ್ಯೆಯಾದರೂ ಸರಕಾರಕ್ಕೆ ಗೊತ್ತಿರಬೇಕಲ್ಲವೇ? ಅವರನ್ನು ಪತ್ತೆ ಹಚ್ಚುವುದು ಸರಕಾರಿ ಯಂತ್ರಕ್ಕೆ ಸಾಧ್ಯವಿಲ್ಲವೇ? ಅದಕ್ಕೋಸ್ಕರ ದೇಶದ 130 ಕೋಟಿ ಜನರೂ ಸರಕಾರಿ ಕಚೇರಿಗಳ ಮುಂದೆ ದಾಖಲೆ ಸಲ್ಲಿಸಲು ಅಲೆದಾಡಬೇಕೇ? ಕಡಿಮೆ ಸಂಖ್ಯೆಯ ಅಪರಾಧಿಗಳನ್ನು ಪತ್ತೆಹಚ್ಚಲು ದೊಡ್ಡ ಸಂಖ್ಯೆಯ, ನಿರಪರಾಧಿಗಳಾದ ಪ್ರಾಮಾಣಿಕ ನಾಗರಿಕರು ಪರದಾಡಬೇಕೇ?

 ದಾಖಲೆ ಸಲ್ಲಿಸಲಾಗದ ಈ ಮಂದಿ, ಅವರು ಹಿಂದೂಗಳಿರಲಿ ಅಥವಾ ಇತರ ಸಮುದಾಯಗಳಿಗೆ ಸೇರಿದವರಾಗಿರಲಿ, ಮುಂದೆ ಈ ದೇಶದಲ್ಲಿ ಎರಡನೇ ದರ್ಜೆ ನಾಗರಿಕರಾಗಿ ಪರಿಗಣಿತರಾಗುವ ಸಾಧ್ಯತೆಗಳಿಲ್ಲವೇ? ಮತ್ತು ಆ ಕಾರಣಕ್ಕೆ ಇವರಿಗೆ ಮತದಾನದ ಹಕ್ಕು, ಪಡಿತರ ಚೀಟಿ, ಇನ್ನಿತರ ನಾಗರಿಕ ಸೌಲಭ್ಯಗಳಿಗೆ ಅನರ್ಹತೆಯನ್ನು ತರುವ ಕಾನೂನುಗಳು ಮುಂದಿನ ದಿನಗಳಲ್ಲಿ ಬರುವ ಸಾಧ್ಯತೆ ಇರಬಹುದಲ್ಲವೇ? ಶಿಕ್ಷಣ ಪಡೆದಿರದ ಅಥವಾ ಅಲ್ಪಶಿಕ್ಷಣ ಹೊಂದಿರುವ ಈ ದೇಶದ ದೊಡ್ಡ ಸಂಖ್ಯೆಯ ಬಡವರು, ದಲಿತರು ಎರಡನೆಯ ದರ್ಜೆ ನಾಗರಿಕರಾಗಿರುತ್ತಾ; ವಿದ್ಯೆ ಹೊಂದುವ ಅವಕಾಶ ಪಡೆದು ಸಮಾಜದ ಇಲೈಟ್ ವರ್ಗಕ್ಕೆ ಸೇರಿದವರು ಮಾತ್ರ ಪ್ರಥಮ ದರ್ಜೆಯ ನಾಗರಿಕರಾಗಿ, ಮತದಾನ ಹಕ್ಕನ್ನು ಪಡೆದು ತವಗೆ ಬೇಕಾದ ಸರಕಾರವೇ ಇರುವಂತೆ ನೋಡಿಕೊಳ್ಳುವ ಒಂದು ವರ್ಗ ತಾರತಮ್ಯದ ಸಮಾಜ ನಿರ್ಮಾಣಕ್ಕೆ ಇದು ನಾಂದಿಯಾಗಬಹುದಲ್ಲವೇ?

share
-ಸದಾಶಿವ ಮಂಗಳೂರು
-ಸದಾಶಿವ ಮಂಗಳೂರು
Next Story
X