Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಸೀಳಿಬಿಡು ನನ್ನೆದೆಯ

ಸೀಳಿಬಿಡು ನನ್ನೆದೆಯ

ಭಾವನಾ

ಹಡವನಹಳ್ಳಿ ವೀರಣ್ಣಗೌಡಹಡವನಹಳ್ಳಿ ವೀರಣ್ಣಗೌಡ12 Jan 2020 12:08 PM IST
share

ನಿನ್ನಜ್ಜನ ಹೊಲದೊಳಗೆ

ಬೆವರ ಮಳೆ ಸುರಿಸುವಾಗ

ನಿನ್ನಪ್ಪನ ದನದ ದೊಡ್ಡಿಯಲಿ

ಸಗಣಿ ಗಂಜಳವ ಬಳಿವಾಗ

ನಿನ್ನಮ್ಮನಿಗೆ ಹಾಲು ಬೆಣ್ಣೆಯ

ಹೊತ್ತು ತರುವಾಗ

ಅಕ್ಷರವ ಕಲಿಯಬೇಕೆಂದು ನಿವ್ಯಾರು ಹೇಳಲೆ ಇಲ್ಲ !,

 ನಿಮ್ಮಪ್ಪಣೆಯಿಲ್ಲದೆ ಅಕ್ಷರವ ಕಲಿಯಲಾದೀತೆ ಒಡೆಯ?

ಇಷ್ಟಕ್ಕೂ ಅಕ್ಷರವ ತಿದ್ದಲು

ನನಗೆಲ್ಲಿತ್ತೊ ಸಮಯ?...

ಉತ್ತು ಬಿತ್ತಿ ಬೆಳೆದು

ಒಕ್ಕು ಚೊಕ್ಕವ ಮಾಡಿ

ನೆಟ್ಟು ನೀರುಣಿಸಿ ಬೆಳೆತೆಗೆದು ಹೊತ್ತು ಹೊತ್ತಿಗೆ ತುತ್ತುಣಲು

ನಿನ್ನ ಅನ್ನದ ತಟ್ಟೆ ತುಂಬಬೇಕಿತ್ತಲ್ಲ

ಇಷ್ಟಕ್ಕೂ ಅಕ್ಷರವ ತಿದ್ದಲು

ನನಗೆಲ್ಲಿತ್ತೊ ಸಮಯ?....

ನೀ ನಡೆವ ಹಾದಿಬೀದಿಯ ಗುಡಿಸಿ

ಶುಚಿಗೊಳಿಸಬೇಕಿತ್ತು

ನಿನ್ನ, ನಿನ್ನಜ್ಜನ, ಮುತ್ತಜ್ಜನ ಮಾರುದ್ದ ಬೆಳೆದಿದ್ದ ತಲೆಗೂದಲ

ಜೊತೆಗೆ ಸಹ್ಯವಲ್ಲದ ವಾಸನೆಯ

ಕಂಕುಳ ಕೂದಲನು ಕತ್ತರಿಸಿ ಒಪ್ಪಮಾಡಬೇಕಿತ್ತು

ನಿನ್ನ, ನಿನ್ನ ಪರಿವಾರದವರ

ಪಾದಗಳಿಗೆ ಮುಳ್ಳು ಕಲ್ಲುಗಳು

ತಾಕದಿರಲೆಂದು ಚಪ್ಪಲಿ ಹೊಲಿಯಬೇಕಿತ್ತು

ಇಷ್ಟಕ್ಕೂ ಅಕ್ಷರವ ತಿದ್ದಲು

ನನಗೆಲ್ಲಿತ್ತೊ ಸಮಯ?....

ನನಗೆ ಹೆಮ್ಮೆಯಿದೆ ಒಡೆಯ

ಕೆಟ್ಟು ಮೂಲೆ ಸೇರಬೇಕಿದ್ದ

ನಿಮ್ಮ ವಾಹನಗಳ ರಿಪೇರಿಮಾಡದ್ದಕ್ಕೆ

ಪಂಕ್ಚರ್ ಹಾಕಿದ್ದಕ್ಕೆ

ನಿಮ್ಮನೆಯ ಕುದುರೆಗಳಿಗೆ

ಲಾಳ ಕಟ್ಟಿದ್ದಕ್ಕೆ

ನಂಬು ನನ್ನನ್ನ

ತಾಸಿನ ಲೆಕ್ಕವಿಡದ ಶ್ರಮದೊಳಗೆ

ನಿನ್ನ ಮೂರುಕಾಸಿನಕ್ಷರವ

ನಾ ಕದ್ದು ಎದೆಯೊಳಗೆ

ಬಚ್ಚಿಟ್ಟು ಕೊಳ್ಳಲಿಲ್ಲ

ಭಯವಿದೆ ನನಗೆ

ಒಮ್ಮೆ ನಿಮ್ಮವರ್ಯಾರೊ

ಓದುವುದ ಕೇಳಿದ

ನಮ್ಮಣ್ಣ-ತಮ್ಮರ ಕಿವಿಗೆ

ಕಾದ ಸೀಸವ ಸುರಿದಿದ್ದರಂತೆ ಎರಡಕ್ಷರವ ಉಚ್ಚರಿಸಿದ

ತಪ್ಪಲ್ಲದ ತಪ್ಪಿಗೆ

ಕಮ್ಮಾರನ ಕುಲುಮೆಯಲಿ

ಬೆಂದ ಸರಳಿಂದ ನಾಲಿಗೆಯ ಸುಟ್ಟಿದ್ದರಂತೆ

ಹೀಗಿದ್ದು ನಿಮ್ಮ ಬದುಕುವ ಆಯುಧಗಳಾದ ಅಕ್ಷರಗಳ

ಹಂಗ್ಯಾಕೊ ನನಗೆ?

ಹಾಗೂ ಅನುಮಾನವಿದ್ದರೆ

ಸಿಗಿದುಬಿಡು ನನ್ನೆದೆಯ

ಅಲ್ಲಿ ಹಿಂದೂ, ಮುಸ್ಲಿಮ್,

ಕ್ರಿಸ್ತ, ಬೌದ್ಧ, ಜೈನ, ಪಾರಸಿ

ವಿಶ್ವದೊಳಿರುವ ಯಾವ

ಜಾತಿ-ಧರ್ಮಗಳೂ ಇಲ್ಲ

ಮನುಷ್ಯ ಪ್ರೀತಿಯ ಬಿಟ್ಟು

ಸಾಕ್ಷೀಕರಿಸಲಿ ಇದನು

ಕರೆಸು ಆ ನಿನ್ನ ರಾಮನ

ಬೇರೇನಾದರೂ ಇದ್ದರೆ

ನನ್ನ ರುಂಡವ ತುಂಡರಿಸಲಿ

ಅಂತೂ-ಇಂತೂ

ನಿನ್ನ ಕೃತಜ್ಞತೆಗೆ

ಈ ಸೇವಾನಿರತನ ಧನ್ಯವಾದಗಳು.

share
ಹಡವನಹಳ್ಳಿ ವೀರಣ್ಣಗೌಡ
ಹಡವನಹಳ್ಳಿ ವೀರಣ್ಣಗೌಡ
Next Story
X