ಸಿಎಎ ವಿರೋಧಿಸಿ ಕೇರಳದ ಮೀನುಗಾರರಿಂದ ಬೋಟುಗಳಲ್ಲಿ 'ಜಲಯಾತ್ರೆ': ವಿಡಿಯೋ ವೈರಲ್

ತಿರುವನಂತಪುರಂ: ಕೇಂದ್ರ ಸರಕಾರ ಜಾರಿಗೊಳಿಸಿರುವ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಕೇರಳದ ಮೀನುಗಾರರು ತಮ್ಮ ಬೋಟುಗಳಲ್ಲಿ ರ್ಯಾಲಿ ನಡೆಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ.
ಮೀನುಗಾರರ `ಜಲ ಯಾತ್ರೆ' ಕೋಯಿಕ್ಕೋಡ್ ನ ಚಲಿಯಂ ಪ್ರದೇಶದಲ್ಲಿ ನಡೆದಿದೆ. ಚಲಿಯಂ ಜಂಜರ್ ಜೆಟ್ಟಿಯಿಂದ ಫೊರೋಕ್ ಸೇತುವೆ ತನಕ ತಮ್ಮ ಬೋಟು ಯಾತ್ರೆ ಕೈಗೊಂಡ ಮೀನುಗಾರರು ಸಿಎಎ ವಿರೋಧಿ ಬ್ಯಾನರುಗಳು, ಪೋಸ್ಟರುಗಳನ್ನು ಹಾಗೂ ಭಾರತದ ರಾಷ್ಟ್ರಧ್ವಜವನ್ನೂ ಕೈಗಳಲ್ಲಿ ಹಿಡಿದುಕೊಂಡಿದ್ದರು.
ಮೀನುಗಾರರ ಈ ವಿಶಿಷ್ಟ ಪ್ರತಿಭಟನೆಯ ವೀಡಿಯೋಗಳು ವೈರಲ್ ಆಗಿವೆ.
ಕೇರಳದಲ್ಲಿ 2018ರಲ್ಲಿ ಉಂಟಾದ ಭಾರೀ ಪ್ರವಾಹದ ಸಂದರ್ಭ ರಾಜ್ಯದ ಮೀನುಗಾರರು ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Kerala fishermen demonstrating "Water March", a distinct protest against CAA & NRC.#unityindiversity#againstcaa#आज़ादी pic.twitter.com/ofBHoBIK9w
— Noufal (@noufal_in) January 10, 2020
Water march by fishworkers against CAA NRC NPR at Chaliyam, Kerala#rejectcaa #rejectnrc #IndiaDoesNotSupportCAA_NRC pic.twitter.com/TLzpi0ToHW
— Nazeem Kottalath (@NazeemKottalath) January 10, 2020







