ಕಾರ್ಕಳ, ಜ.15: ಕಾಬೆಟ್ಟು ಬಸ್ ನಿಲ್ದಾಣದ ಬಳಿ ಜ.14ರಂದು ಬೆಳಗ್ಗೆ ತನ್ನ ಅಳಿಯ ಪ್ರಸಾದ್ ಎಂಬವರ ಬೈಕಿನಿಂದ ಇಳಿದು ಹೋದ ಕುಕ್ಕುಂದೂರು ಗ್ರಾಮದ ದುರ್ಗಾನಗರ ನಿವಾಸಿ ಕುಟ್ಟಿ ಪೂಜಾರಿ(48) ಎಂಬವರು ಈವರೆಗೆ ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.