Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪೇಜಾವರ ಸ್ವಾಮೀಜಿಯ ಪಲ್ಲಕ್ಕಿಗೆ...

ಪೇಜಾವರ ಸ್ವಾಮೀಜಿಯ ಪಲ್ಲಕ್ಕಿಗೆ ಕಲಾತ್ಮಕತೆಯ ಸ್ಪರ್ಶ

ಸಾಧು ಪಾಣರಿಂದ ಪಲ್ಲಕ್ಕಿಗೆ ತೆಂಗಿನ ಸಿರಿಯಿಂದ ಅಲಂಕಾರ

ವಾರ್ತಾಭಾರತಿವಾರ್ತಾಭಾರತಿ17 Jan 2020 7:54 PM IST
share
ಪೇಜಾವರ ಸ್ವಾಮೀಜಿಯ ಪಲ್ಲಕ್ಕಿಗೆ ಕಲಾತ್ಮಕತೆಯ ಸ್ಪರ್ಶ

 ಉಡುಪಿ, ಜ.17: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಮೆರವಣಿಗೆಯಲ್ಲಿ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಏರಿ ಬರುವ ಪಲ್ಲಕ್ಕಿಗೆ ಕಲಾತ್ಮಕತೆಯ ಸ್ಪರ್ಶವನ್ನು ನೀಡಲಾಗಿದೆ.

ಈ ಹಿಂದೆ ಪಲ್ಲಕಿಯನ್ನು ಜರಿ ಬಟ್ಟೆಯಿಂದ ಅಲಂಕೃತಗೊಳಿಸಿ ಅದರಲ್ಲಿ ಸ್ವಾಮೀಜಿ ಕುಳಿತು ಮೆರವಣಿಗೆಯಲ್ಲಿ ಸಾಗಿಬರುತ್ತಿದ್ದರು. ಆದರೆ ಈ ಬಾರಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಕೃತಿಯ ಮೇಲಿನ ತನ್ನ ಒಲವನ್ನು ಪಲ್ಲಕ್ಕಿಯನ್ನು ತೆಂಗಿನ ಸಿರಿಯಿಂದ ಅಲಂಕೃತಗೊಳಿಸುವ ಮೂಲಕ ವಿಶಿಷ್ಟತೆ ಮೆರೆದಿದ್ದಾರೆ.

ಕಳೆದ 50ವರ್ಷಗಳಿಂದ ದೈವ ನರ್ತನ ಹಾಗೂ ಸಿರಿ ಸಿಂಗಾರದ ಸೇವೆ ಸಲ್ಲಿಸುತ್ತಿರುವ ಅಲೆವೂರು ಮಂಚಿಕೇರಿಯ ಸಾಧು ಪಾಣರ(64) ನೇತೃತ್ವದಲ್ಲಿ ನಾರಾಯಣ ಪಾಣಾರ, ಗಿರೀಶ್ ಪಾಣಾರ, ಪ್ರಜ್ವಲ್ ಪಾಣಾರ, ದಿನೇಶ್ ಪಾಣಾರ ಪಲ್ಲಕ್ಕಿಯನ್ನು ಅಲಂಕಾರಗೊಳಿಸುವ ಕಾರ್ಯವನ್ನು ಮಾಡಿದ್ದಾರೆ.

ಪೇಜಾವರ ಸ್ವಾಮೀಜಿಯ ಮಾರ್ಗದರ್ಶನದಲ್ಲಿ ತೆಂಗಿನ ಸಿರಿ, ಬಾಳೆ ದಿಂಡು, ಬಿದಿರನ್ನು ಬಳಸಿ ಪಲ್ಲಕಿಯನ್ನು ಸಾಂಪ್ರದಾಯಿಕ ವಾಗಿ ಸಜ್ಜುಗೊಳಿಸ ಲಾಗಿದೆ. ಸಿರಿಯಿಂದ ತಯಾರಿಸಿದ ಗಿಳಿ, ನಕ್ಷತ್ರ ಹಾಗೂ ಕದಿರು ಮುಡಿ (ಕಿರೀಟ) ಪಲ್ಲಕ್ಕಿಯ ವೈಭವವನ್ನು ಇನ್ನಷ್ಟು ಹೆಚ್ಚಿಸಿದೆ.

‘ಸ್ವಾಮೀಜಿಯ ಇಚ್ಛೆಯಂತೆ ಜ.17ರಂದು ಬೆಳಗ್ಗೆ 11ಗಂಟೆಗೆ ಪಲ್ಲಕ್ಕಿಯನ್ನು ಅಲಂಕಾರಗೊಳಿಸುವ ಕಾರ್ಯವನ್ನು ಆರಂಭಿಸಿ, ಸಂಜೆ ವೇಳೆ ಪಲ್ಲಕಿಯನ್ನು ಸಜ್ಜುಗೊಳಿಸಲಾಗಿದೆ. ಸುಮಾರು ಐದು ತಾಸುಗಳಲ್ಲಿ ಪಲ್ಲಕ್ಕಿಯನ್ನು ಸಿದ್ಧ ಪಡಿಸ ಲಾಗಿದೆ. ಸಿರಿ ಸಿಂಗಾರ ಸೇವೆ ಮಾಡುತ್ತಿರುವ ನಾವು ಇದೇ ಮೊದಲ ಬಾರಿಗೆ ಪಲ್ಲಕಿಯನ್ನು ಅಲಂಕಾರಗೊಳಿಸುವ ಕಾರ್ಯ ಮಾಡಿದ್ದೇವೆ’ ಎಂದು ಸಾಧು ಪಾಣರ ತಿಳಿಸಿದರು.

‘ಪ್ರಕೃತಿಯ ಮೇಲಿನ ಒಲವಿನಿಂದ ಕಲಾವಿದರನ್ನು ಕರೆಸಿ ತೆಂಗಿನ ಸಿರಿಯಲ್ಲಿ ಪಲ್ಲಕ್ಕಿಯನ್ನು ಅಲಂಕಾರಗೊಳಿಸಲಾಗುತ್ತಿದೆ. ಅದನ್ನು ಟ್ಯಾಬ್ಲೋ ಮೇಲೆ ಇರಿಸಿ ಮೆರವಣಿಗೆಯಲ್ಲಿ ಸಾಗಿ ಬರಲಾಗುವುದು. ಈ ಮೂಲಕ ಕಲಾವಿದರಿಗೆ ಅವಕಾಶ ನೀಡುವು ದರೊಂದಿಗೆ ಕಲೆಯನ್ನು ಬೆಳೆಸಿದಂತೆ ಆಗುತ್ತದೆ ಮತ್ತು ಅವರ ಬದುಕಿಗೂ ದಾರಿ ಕಂಡುಕೊಂಡಂತಾಗುತ್ತದೆ. ಮುಂದೆ ಇವರ ಈ ರೀತಿಯ ಅಲಂಕಾರಕ್ಕೆ ಬೇಡಿಕೆ ಬರಬಹುದಾಗಿದೆ’

-ಶ್ರೀವಿಶ್ವಪ್ರಸನ್ನ ತೀರ್ ಸ್ವಾಮೀಜಿ, ಪೇಜಾವರ ಮಠಾಧೀಶ

ಜಾರ್ಖಂಡ್ ಯುವಕನ ಸಿರಿ ಟೋಪಿ!

ಪೇಜಾವರ ಸ್ವಾಮೀಜಿ ಜಾರ್ಖಂಡ್ ಯುವಕನ ತೆಂಗಿನ ಸಿರಿಯ ಟೋಪಿಗೆ ಫಿದಾ ಆಗಿದ್ದಾರೆ. ಇವರು ಬೆಂಗಳೂರಿನಲ್ಲಿದ್ದಾಗ ಈತ ತಯಾರಿಸಿದ ಸಿರಿ ಟೋಪಿಯನ್ನು ನೋಡಿದ್ದು, ಆತನಿಂದ ಈ ರೀತಿಯ 25 ಟೋಪಿಗಳನ್ನು ತಯಾರಿಸಿ ಉಡುಪಿಗೆ ತರಿಸಿಕೊಂಡಿದ್ದಾರೆ.

ವಿಶಿಷ್ಟ ರೀತಿಯ ಈ ಟೋಪಿಯನ್ನು ಭಾವಿ ಪರ್ಯಾಯ ಅದಮಾರು ಸ್ವಾಮೀಜಿ ಸೇರಿದಂತೆ ಎಲ್ಲ ಸ್ವಾಮೀಜಿಗಳಿಗೆ ಕೂಡ ತೊಡಿಸಿದ್ದಾರೆ. ಮುಂದೆ ಈ ಯುವಕನನ್ನು ಉಡುಪಿಗೆ ಕರೆಸಿ ಬೇರೆ ಬೇರೆ ಸಂಘಸಂಸ್ಥೆಗಳ ಮೂಲಕ ಸ್ಥಳೀಯರಿಗೆ ಈ ಟೋಪಿ ತಯಾರಿಸುವ ಕಾರ್ಯಾಗಾರವನ್ನು ನಡೆಸುವ ಇರಾದೆಯನ್ನು ಕೂಡ ಸ್ವಾಮೀಜಿ ಹೊಂದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X