ಜ.20: ಎನ್ಆರ್ ಸಿ ತಿದ್ದುಪಡಿ ಕಾಯ್ದೆ ವಿರುದ್ಧ ಕಿನ್ಯದಲ್ಲಿ ಪ್ರತಿಭಟನೆ
ಉಳ್ಳಾಲ: ಎಸ್ವೈಎಸ್, ಎಸ್ಕೆಎಸ್ಸೆಸ್ಸೆಫ್ ಮತ್ತು ಎಸ್ಸೆಸ್ಸೆಫ್ ಕಿನ್ಯ ಇದರ ಆಶ್ರಯದಲ್ಲಿ ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಕಾಯ್ದೆ ಎನ್ಆರ್ಸಿ , ಸಿಎಎ ಮತ್ತು ಎನ್ಪಿಆರ್ ವಿರುದ್ಧ ಕಿನ್ಯ ಬೆಳರಿಂಗೆಯಲ್ಲಿ ಜ.20ರಂದು ಮಧ್ಯಾಹ್ನ 2 ಗಂಟೆಗೆ ಪ್ರತಿಭಟನೆ ನಡೆಯಲಿದೆ.
ಸಿಪಿಐಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಮತ್ತು ಹೋರಾಟಗಾರ ಪಿ.ವಿ. ಮೋಹನ್ ಮಂಗಳೂರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story