Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ19 Jan 2020 11:54 PM IST
share
ಓ ಮೆಣಸೇ...

  ನಿಂಬೆ ಹಣ್ಣು ಮಾರಿಕೊಂಡಿದ್ದ ನಾನು ಈಗ ಸಿಎಂ ಆಗಿದ್ದೇನೆ
- ಯಡಿಯೂರಪ್ಪ, ಮುಖ್ಯಮಂತ್ರಿ
  ಹಾಲಿಗೆ ಹುಳಿ ಹಿಂಡುವುದನ್ನು ಆಗಲೇ ಕಲಿತಿರಬೇಕು.

---------------------
  ಪಾಕ್ ಮುಖಂಡರ ಹೇಳಿಕೆಗಳೂ ಮತ್ತು ಕಾಂಗ್ರೆಸ್ ಮುಖಂಡರ ಹೇಳಿಕೆಗಳೂ ಒಂದೇ ರೀತಿಯಲ್ಲಿವೆ
- ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ.
  ದೇಶ ಒಡೆಯುವ ವಿಷಯದಲ್ಲಿ ಪಾಕ್ ಉಗ್ರರ ಚಟುವಟಿಕೆಗಳು, ಬಿಜೆಪಿ ಮುಖಂಡರ ಚಟುವಟಿಕೆಗಳು ಒಂದೇ ರೀತಿಯಲ್ಲಿವೆ.

---------------------
  ವೈನ್ ಸ್ಟೋರ್, ಬಾರ್‌ಗಳಿಗೆ ಇಟ್ಟಿರುವ ದೇವರ ಹೆಸರುಗಳನ್ನು ಬದಲಾಯಿಸಿ
- ಕೋಟ ಶ್ರೀನಿವಾಸ ಪೂಜಾರಿ, ಸಚಿವ.
  ಕುಡಿಯುವವರು ದೇವರ ಹೆಸರನ್ನು ಇಟ್ಟುಕೊಂಡರೆ ಸರಿಯೇ?

---------------------
  ತುಳಿತಕ್ಕೊಳಗಾದ ಪ್ರತೀ ಪಾಕಿಸ್ತಾನಿ ನಿರಾಶ್ರಿತರಿಗೆ ಪೌರತ್ವ ನೀಡುವವರೆಗೆ ಸರಕಾರ ವಿಶ್ರಾಂತಿ ಪಡೆಯುವುದಿಲ್ಲ
- ಅಮಿತ್ ಶಾ, ಕೇಂದ್ರ ಸಚಿವ.
  ತುಳಿತಕ್ಕೊಳಗಾಗಿರುವ ಭಾರತೀಯರ ಗತಿಯೇನು?

---------------------
  ಚಾಪೆ ಹಿಡಿದು ಬಂದವರಿಗೆಲ್ಲ ಜಾಗ ಕೊಡಲು ಭಾರತ ‘ಧರ್ಮ ಶಾಲೆ’ ಅಲ್ಲ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ.
ಧರ್ಮಾಧಾರಿತ ಶಾಲೆ ಮಾಡಬೇಡಿ ಎಂದೇ ಪ್ರತಿಭಟನೆ ನಡೆಯುತ್ತಿರುವುದು.

---------------------
ಹಣದಿಂದ ಮಕ್ಕಳನ್ನು ಬೆಳೆಸಲು ಹೋದರೆ ಮಕ್ಕಳು ಗುಣ ಹೀನರಾಗುತ್ತಾರೆ
- ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ.
ಹೆಣದಿಂದ ತಮ್ಮ ಸಂಘಟನೆ ಬೆಳೆಸಿರುವ ಬಗ್ಗೆಯೂ ಏನಾದರೂ ಹೇಳಿ.

---------------------

ಪೌರತ್ವ ಕಾಯ್ದೆಯನ್ನು ಅರ್ಥ ಮಾಡಿಕೊಳ್ಳದವರು ಮೂರ್ಖರು - ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ.
ಬಿಜೆಪಿಯೊಳಗಿರುವ ಎಲ್ಲ ನಾಯಕರೂ ಆ ಪದವಿಗೆ ಅರ್ಹರು.

---------------------

ಅನಿಷ್ಟ ಪದ್ಧತಿ ವಿರುದ್ಧ ಸ್ವಾಮಿ ವಿವೇಕಾನಂದರಂತೆ ಧ್ವನಿ ಎತ್ತಬೇಕು - ಸಿ.ಟಿ. ರವಿ, ಸಚಿವ.
ಅವಿವೇಕಿಯ ಬಾಯಲ್ಲಿ ವಿವೇಕಾನಂದ.

---------------------

ಕಲ್ಲಡ್ಕ ಪ್ರಭಾಕರ ಭಟ್ ಯಾರು ಎಂಬುದೇ ನನಗೆ ಗೊತ್ತಿಲ್ಲ - ಡಿ.ಕೆ.ಶಿವಕುಮಾರ್, ಶಾಸಕ.
ನಿಮಗೆ ಗೊತ್ತಿಲ್ಲ ಎನ್ನುವ ಕಾರಣಕ್ಕಾಗಿ ಅವರ ವಿರುದ್ಧ ಕೇಸು ದಾಖಲಿಸಿಲ್ಲವೇ?

---------------------

ದೇವರ ಹೆಸರಲ್ಲಿ ರಾಜಕಾರಣ ಮಾಡುವುದು ತಪ್ಪು - ಶ್ರೀರಾಮುಲು, ಸಚಿವ.
ಈ ವಿಷಯವನ್ನು ರಾಮಮಂದಿರ ಕಟ್ಟುವವರಿಗೆ ಹೇಳಿ.

---------------------

ನಾನು ಕುರ್ಚಿಗೆ ಅಂಟಿ ಕುಳಿತವನಲ್ಲ, ರಾಜೀನಾಮೆ ಕೊಡಲೂ ಸಿದ್ಧ - ಯಡಿಯೂರಪ್ಪ, ಮುಖ್ಯಮಂತ್ರಿ.
ತಾವು ರಾಜೀನಾಮೆ ಕೊಡುವುದಕ್ಕಾಗಿಯೇ ಆರೆಸ್ಸೆಸ್‌ನೊಳಗೆ ಕಾದು ಕುಳಿತವರಿದ್ದಾರೆ.

---------------------

ಅರ್ಜುನನ ಬಾಣದಲ್ಲಿ ಅಣುಶಕ್ತಿಯ ಅಂಶಗಳಿದ್ದವು - ಜಗದೀಪ್ ಧನ್ಕರ್, ಪ.ಬಂ. ರಾಜ್ಯಪಾಲ.
ಅಣುಒಪ್ಪಂದ ಮುರಿದ ಕಾರಣಕ್ಕಾಗಿ ಕುರುಕ್ಷೇತ್ರ ಯುದ್ಧ ನಡೆಯಿತಂತೆ.

---------------------

ಭಾರತವು ಇರಾನ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ಶಾಂತಿಗೆ ಮೊದಲ ಆದ್ಯತೆ ನೀಡುತ್ತದೆ - ನರೇಂದ್ರ ಮೋದಿ, ಪ್ರಧಾನಿ.
ಭಾರತದೊಳಗಿನ ಶಾಂತಿಗೂ ಒಂದಿಷ್ಟು ಆದ್ಯತೆ ನೀಡಿ.

---------------------

ಕಷ್ಟ ಕಾಲದಲ್ಲಿ ಸಹಾಯಕ್ಕೆ ಬಂದಿರುವವರ ಕೈ ಬಿಡುವ ಪ್ರಶ್ನೆಯೇ ಇಲ್ಲ - ಆರ್. ಅಶೋಕ್, ಸಚಿವ.
  ಕೈ ಕೊಡುವ ಪ್ರಶ್ನೆಯೇನಾದರೂ ಇದೆಯೇ

---------------------

ಬಿಜೆಪಿಯಲ್ಲಿ ನನ್ನಂತಹ ಕಾರ್ಯಕರ್ತನೂ ಅಧ್ಯಕ್ಷನಾಗಬಹುದು
- ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ.
 ಹೌದು. ನಿಮ್ಮಂತಹ ಸೂತ್ರದ ಗೊಂಬೆಗಳೇ ಅವರಿಗೆ ಬೇಕಾಗಿರುವುದು.

---------------------

ರಾಜ್ಯವನ್ನು ಲೂಟಿ ಮಾಡಲು ರಾಜ್ಯದ ಎಲ್ಲ ಸಚಿವರು ಅಂಗಡಿ ತೆರೆದು ಕುಳಿತು ಕೊಂಡಿದ್ದಾರೆ - ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.
ಹೌದು, ಈಗ ಲಾಭದಲ್ಲಿರುವುದು ಅವರ ಅಂಗಡಿಗಳು ಮಾತ್ರ. ಜನಸಾಮಾನ್ಯರ ಎಲ್ಲ ಅಂಗಡಿಗಳೂ ಮುಚ್ಚಿವೆ.

---------------------

ಸ್ವಾಮೀಜಿಗಳು ರಾಜಕಾರಣಿಗಳಿಗೆ ಬೆದರಿಕೆ ಹಾಕುವುದು ಒಳ್ಳೆಯದಲ್ಲ - ಎಚ್.ನಾಗೇಶ್, ಸಚಿವ.
ರಾಜಕಾರಣಿಗಳು ಚುನಾವಣೆಯಲ್ಲಿ ಸ್ವಾಮೀಜಿಗಳ ಬೆಂಬಲ ಪಡೆಯುವುದು ಸರಿಯೇ

---------------------

ಇನ್ನು 5 ವರ್ಷಗಳಲ್ಲಿ ಜನರು ಗಂಗೆಯಂತೆ ಯಮುನಾ ನದಿಯಲ್ಲೂ ಮುಳುಗೇಳುವಂತೆ ಮಾಡುತ್ತೇನೆ - ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ.
 ಕೊನೆಗೂ ಜನರಿಗೆ ಮುಳುಗುವುದೇ ಗತಿಯೇ

---------------------
ಭಯೋತ್ಪಾದನೆಯ ಭವಿಷ್ಯವು ಸಾಂಪ್ರದಾಯಿಕ ಯುದ್ಧದಂತೆಯೇ ಕೊಳಕಾಗಿರಲಿದೆ - ಜ.ಬಿಪಿನ್ ರಾವತ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ.
 ಹೌದು ಅವರೀಗ ಪೊಲೀಸರ, ಸೈನಿಕರ ವೇಷದಲ್ಲೂ ಪತ್ತೆಯಾಗುತ್ತಿದ್ದಾರೆ.

---------------------

ಜಗತ್ತೇ ಕುಟುಂಬ ಎಂಬುದು ಬಿಜೆಪಿಯ ಸಿದ್ಧಾಂತ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ.
ಕುಟುಂಬ ಒಡೆಯುವ ವಿಷಯದಲ್ಲಿ ಜಗತ್ತನ್ನೇ ಗುರಿ ಮಾಡಿದ್ದೀರಿ ಎಂದಾಯಿತು.

---------------------

ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವದ ಪಾಲು ಇನ್ನಷ್ಟು ಹೆಚ್ಚಾಗಿಸಲು ಎಲ್ಲ ಅಡಚಣೆಗಳನ್ನು ತೆರವುಗೊಳಿಸಲಾಗುವುದು - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಅಂದರೆ ಅದಾನಿಯನ್ನೂ ಸೇರಿಸಿಕೊಳ್ಳುವ ಉದ್ದೇಶವಿದೆ ಎಂದಾಯಿತು.

---------------------

ನಾನು ಕೇರಳ ಸರಕಾರದ ರಬ್ಬರ್ ಸ್ಟಾಂಪ್ ಅಲ್ಲ - ಆರಿಫ್ ಮುಹಮ್ಮದ್ ಖಾನ್, ಕೇರಳ ರಾಜ್ಯಪಾಲ.
ಕೇಂದ್ರ ಸರಕಾರದ ರಬ್ಬರ್ ಸ್ಟಾಂಬ್ ಎನ್ನುವುದು ನಮಗೂ ಗೊತ್ತಿದೆ.

---------------------

ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ 17 ಶಾಸಕರ ತ್ಯಾಗವನ್ನು ನಾವೆಂದೂ ಮರೆಯುವಂತಿಲ್ಲ - ಯಡಿಯೂರಪ್ಪ, ಮುಖ್ಯಮಂತ್ರಿ.
ಸ್ವಾತಂತ್ರಕ್ಕಾಗಿ ಹೋರಾಡಿದವರ ತ್ಯಾಗಕ್ಕಿಂತಲೂ ಮಿಗಿಲಾಗಿರಬೇಕು.

---------------------

ಕೆಲಸ ಮಾಡಲು ಯಾವ ಖಾತೆ ಆದರೇನು? - ಸಿ.ಟಿ.ರವಿ, ಸಚಿವ.
ಹೌದು, ಪೆಟ್ರೋಲ್ ಬಾಂಬ್ ಮೂಲಕ ಬೆದರಿಸಲು ಯಾವ ಖಾತೆಯಾದರೇನು?

share
ಪಿ.ಎ.ರೈ
ಪಿ.ಎ.ರೈ
Next Story
X