ಬೆಂಗರೆ: ಸಿಎಎ ವಿರುದ್ಧದ ಪ್ರತಿಭಟನೆಗೆ ಉಳ್ಳಾಲದಿಂದ ದೋಣಿಯಲ್ಲಿ ತೆರಳಿದ ಸಾವಿರಾರು ಮಂದಿ
ಬೆಂಗರೆಯಲ್ಲಿಂದು ಸಿಎಎ ವಿರುದ್ಧ ಪ್ರತಿಭಟನೆ
ಮಂಗಳೂರು, ಜ.21: ಕಸಬಾ ಬೆಂಗರೆಯಲ್ಲಿ ಇಂದು(ಜ.21) ಎನ್ಆರ್ಸಿ, ಸಿಎಎ, ಎನ್ಪಿಆರ್ ವಿರುದ್ಧ ಪ್ರತಿಭಟನೆ ನಡೆಯಲಿದೆ. ಇದರಲ್ಲಿ ಭಾಗವಹಿಸಲು ಉಳ್ಳಾಲ ಕೋಟೆಪುರದಿಂದ ಸಾವಿರಾರು ಮಂದಿ ದೋಣಿಯ ಮೂಲಕ ಆಗಮಿಸಿದರು.
ಉಳ್ಳಾಲ ಕೋಟೆಪುರ ಮೀನುಗಾರರ ಸಂಘದ ವತಿಯಿಂದ ಈ ದೋಣಿಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 60ಕ್ಕೂ ಅಧಿಕ ದೋಣಿಗಳಲ್ಲಿ ಸಾವಿರಾರು ಮಂದಿ ಆಗಮಿಸಿದರು.
ಈ ಸಂದರ್ಭ ಕೋಟೆಪುರ ಜುಮಾ ಮಸೀದಿಯ ಯು.ಕೆ.ಅಬ್ಬಾಸ್, ಉಳ್ಳಾಲ ಕೋಡಿ ಮಸೀದಿಯ ಅಬ್ದುಲ್ಹಮೀದ್, ನಾಡದೋಣಿ ಸಂಘಟನೆಯ ಅಧ್ಯಕ್ಷ ಹನೀಫ್ ಮತ್ರಿತರರು ಉಪಸ್ಥಿತರಿದ್ದರು.