Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಇಂಡಿಯಾ ವರ್ಸಸ್ ಇಂಗ್ಲೆಂಡ್: ಎರಡು ದೇಶ...

ಇಂಡಿಯಾ ವರ್ಸಸ್ ಇಂಗ್ಲೆಂಡ್: ಎರಡು ದೇಶ ಮತ್ತು ಒಂದು ಸಂದೇಶ!

ಶಶಿಕರ ಪಾತೂರುಶಶಿಕರ ಪಾತೂರು25 Jan 2020 11:43 PM IST
share
ಇಂಡಿಯಾ ವರ್ಸಸ್ ಇಂಗ್ಲೆಂಡ್: ಎರಡು ದೇಶ ಮತ್ತು ಒಂದು ಸಂದೇಶ!

ಸಿನೆಮಾಗಳನ್ನು ವಿದೇಶಗಳಲ್ಲಿ ಚಿತ್ರೀಕರಿಸುವುದಷ್ಟೇ ಅಲ್ಲ; ಅಲ್ಲಿರುವ ಭಾರತೀಯ ಬದುಕನ್ನು ಕನ್ನಡಿಗರಿಗೆ ಪರಿಚಯಿಸುವಂಥ ಚಿತ್ರಗಳನ್ನು ನೀಡಿದವರು ನಾಗತಿಹಳ್ಳಿ ಚಂದ್ರಶೇಖರ್. ಅಂಥದೇ ಮತ್ತೊಂದು ಹೊಸ ಪ್ರಯತ್ನ ಇದು.

ವಿದೇಶದಲ್ಲೇ ಹುಟ್ಟಿ, ಬೆಳೆದು ಕನ್ನಡಾಭಿಮಾನ ಬೆಳೆಸಿಕೊಂಡ ಯುವಕ ಕನಿಷ್ಕ. ಅದಕ್ಕೆ ಕಾರಣ ಆತನ ತಂದೆತಾಯಿ. ಅವರು ಲಂಡನ್‌ನಲ್ಲಿ ನೆಲೆಸಿದ್ದರೂ ಸಹ ಮಗನಲ್ಲಿ ಭಾರತದ ಕುರಿತಾದ ಅಭಿಮಾನ ಬೆಳೆಸುವಲ್ಲಿ ಯಶಸ್ವಿಯಾಗಿರುತ್ತಾರೆ. ತಮ್ಮದೇ ಅಸೋಸಿಯೇಷನ್ ಮಕ್ಕಳಿಗೆ ಕನ್ನಡ ಹೇಳಿಕೊಡುವ ತಾಯಿ ಮತ್ತು ಯುವ ಜನಾಂಗದ ಕಾಳಜಿ ಹೊಂದಿರುವ ವೈದ್ಯ ತಂದೆಯ ಕಣ್ಣೋಟದಲ್ಲಿ ಬೆಳೆದವನು. ತನ್ನದೇ ವೀಡಿಯೊ ಬ್ಲಾಗ್ ಮೂಲಕ ಹಲವಾರು ಅಭಿಮಾನಿಗಳನ್ನು ಪಡೆದುಕೊಂಡವನು. ಹೀಗಿರುವಾಗ ಒಮ್ಮೆ ಭಾರತದ ಪ್ರವಾಸಿತಾಣಗಳ ಕುರಿತಾದ ಕಾರ್ಯಕ್ರಮಕ್ಕಾಗಿ ಆತ ವಿದೇಶದಿಂದ ಭಾರತಕ್ಕೆ ಬರುತ್ತಾನೆ. ಭಾರತದಲ್ಲಿ ಆತನನ್ನು ಸ್ವಾಗತಿಸಲು ಜೆಮಾಲಜಿಸ್ಟ್ ಒಬ್ಬರು ತಯಾರಾಗಿರುತ್ತಾರೆ. ಅವರ ಮೊಮ್ಮಗಳು ಮೇದಿನಿಯ ಜತೆ ಭಾರತೀಯ ಐತಿಹಾಸಿಕ ತಾಣಗಳಿಗೆ ಭೇಟಿ ನೀಡುತ್ತಾನೆ. ಇದರ ನಡುವೆ ಲಂಡನ್‌ನಲ್ಲಿರುವ ತಂದೆ ತಾಯಿಗೆ ವೀಡಿಯೊ ಕಾಲ್ ಮೂಲಕ ಆಕೆಯನ್ನು ತೋರಿಸಿ ತಮಗಿಬ್ಬರಿಗೂ ಪ್ರೀತಿಯಾಗಿದೆ ಎನ್ನುತ್ತಾನೆ. ಇದೇ ವೇಳೆ ವಿದೇಶದಿಂದ ಅಪಹರಿಸಿದ ಬ್ಲೂ ಡೈಮಂಡ್ ಒಂದನ್ನು ಅಪಹರಿಸುವ ಸ್ಮಗ್ಲರ್‌ಗಳು ಅದನ್ನು ಅನಿವಾರ್ಯ ಸಂದರ್ಭವೊಂದರಲ್ಲಿ ಕನಿಷ್ಕನ ಬ್ಯಾಗ್‌ನೊಳಗೆ ಹಾಕಿರುತ್ತಾರೆ. ಮುಂದೆ ಕನಿಷ್ಕನ ಭಾರತೀಯ ಪ್ರೇಮ ಮತ್ತು ಮೇದಿನಿಯೊಂದಿಗಿನ ಪ್ರೇಮ ಎರಡೂ ಕೂಡ ಸಂದೇಹಕ್ಕೆ ಒಳಗಾಗುತ್ತದೆ. ಅವುಗಳಿಂದ ಆತ ಹೇಗೆ ಪಾರಾಗುತ್ತಾನೆ ಎನ್ನುವುದೇ ಚಿತ್ರದ ಪ್ರಮುಖ ಕಥೆ. ಆದರೆ ಮೇಲ್ನೋಟದ ಈ ಕಥೆಯೊಂದಿಗೆ ದೇಶ, ಭಾಷೆ ಮತ್ತು ಇತಿಹಾಸದ ಕುರಿತಾದ ಕಾಳಜಿಯನ್ನು ಎಚ್ಚರಿಸುವಂತೆ ಮಾಡಿರುವುದೇ ಚಿತ್ರದ ವಿಶೇಷ.

ಚಿತ್ರದ ಮೂಲಕ ವಸಿಷ್ಠ ಸಿಂಹ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ. ನಿಜ ಹೇಳಬೇಕೆಂದರೆ ಅವರು ಆರಂಭದ ದಿನಗಳಿಂದಲೂ ಹೀರೋ ಮೆಟೀರಿಯಲ್ಲೇ. ಆದರೂ ಯಾಕೋ ಅವರಿಗೆ ಖಳನ ಪಾತ್ರದಿಂದ ಸರಿಯಾದ ವಿಮೋಚನೆ ನೀಡುವವರೇ ಬಂದಿರಲಿಲ್ಲ. ಈ ಚಿತ್ರ ಅದನ್ನು ಮಾಡಿಕೊಟ್ಟಿದೆ ಅಷ್ಟೇ. ನಾಗತಿಹಳ್ಳಿಯವರ ಚಿತ್ರವಾದ ಕಾರಣ, ಇಲ್ಲಿ ಕಮರ್ಷಿಯಲ್ ನಾಯಕನ ಅಬ್ಬರದ ಸಂಭಾಷಣೆಗಳನ್ನು ನಿರೀಕ್ಷಿಸುವಂತಿಲ್ಲ. ಆದರೆ ಕಥಾ ನಾಯಕನಿಗೆ ಬೇಕಾದ ಎಲ್ಲ ಗುಣಗಳನ್ನು ತೋರಿಸಲಾಗಿದೆ. ಕಂಠಾದಲ್ಲಿನ ಶ್ರೇಷ್ಠತೆಗೆ ಇಲ್ಲಿ ಅವರ ವೃತ್ತಿಯಲ್ಲಿನ ಗಂಭೀರತೆ ಕೂಡ ಸಾಥ್ ನೀಡಿದೆ. ಕನಿಷ್ಕನ ಜೋಡಿ ಮೇಧಿನಿಯಾಗಿ ಮಾನ್ವಿತಾ ಹರೀಶ್ ನಟಿಸಿದ್ದಾರೆ. ಚೆಲ್ಲು ಚೆಲ್ಲು ಹುಡುಗಿಯಾದರೂ, ಭಾರತದ ಮೇಲೆ ಅಭಿಮಾನ ಇರಿಸಿರುವ ಹುಡುಗಿಯ ಪಾತ್ರ. ಭಾವನಾತ್ಮಕ ದೃಶ್ಯಗಳನ್ನು ಅವರು ತಮ್ಮ ಎಂದಿನ ಶೈಲಿಯಲ್ಲೇ ಹೊರಗೆಡಹಿದ್ದಾರೆ. ಕನಿಷ್ಕನ ತಾಯಿಯಾಗಿ ಸುಮಲತಾ ಮತ್ತು ತಂದೆಯಾಗಿ ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದಾರೆ. ಸುಮಲತಾ ಬಿಡುವಿನಲ್ಲಿ ಬೆಂಗಳೂರಿನ ಬಗ್ಗೆ ಮಾತನಾಡಿದರೆ, ಬೆಳವಾಡಿಯವರು ಮೃದಂಗ ನುಡಿಸುತ್ತಾರೆ. ವಿದೇಶದಲ್ಲಿದ್ದರೂ ನಮ್ಮವರು ಹೇಗೆ ಟಿಪಿಕಲ್ ಭಾರತೀಯ ಮೈಂಡ್‌ಸೆಟ್ ನಲ್ಲಿಯೇ ಇರುತ್ತಾರೆ ಎನ್ನುವುದಕ್ಕೆ ಇವರ ಪಾತ್ರಗಳೇ ಕನ್ನಡಿ. ಇವರಿಗೊಬ್ಬರು ಮಗಳೂ ಇರುತ್ತಾಳೆ. ಒಂದಷ್ಟು ತಿರುವುಗಳಿಗೆ ಆಕೆಯೂ ಮುನ್ನುಡಿ. ಅಂದಹಾಗೆ ಸ್ಮಗ್ಲರ್‌ಗಳ ಭಾರತೀಯ ಕೊಂಡಿಯಾಗಿ ಶಿವಮಣಿ ಮತ್ತು ಸಾಧು ಕೋಕಿಲ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿನ ಹಾಡುಗಳು ಅವರ ಹಿಂದಿನ ಶೈಲಿಗಿಂತ ವಿಭಿನ್ನವಾಗಿವೆ.

ಇದು ಎರಡು ದೇಶಗಳ ನಡುವಿನ ಸಂಬಂಧದ ಕಥೆ. ಸಾಮಾಜಿಕ ಜಾಲತಾಣದಲ್ಲಿ ದೇಶ ಭಕ್ತಿಯ ವಿಚಾರ ಬಂದೊಡನೆ ಅಲ್ಲಿ ಮೂಡಿಬರುವ ಎರಡು ಪಂಥಗಳು ಎಡ ಮತ್ತು ಬಲ!

ಹಾಗಾಗಿ ಚಿತ್ರದ ಪ್ರಥಮ ದೃಶ್ಯದಿಂದಲೇ ಗಾಂಧೀಜಿ, ನೆಹರೂ ಫೋಟೊಗಳು, ಸುಮಲತಾ ಅವರ ಕನ್ನಡಾಭಿಮಾನದ ಹಾಡು, ಹಾಡಲ್ಲಿ ಕಾಣಿಸುವ ಗಿರೀಶ್ ಕಾರ್ನಾಡ್, ಅನಂತಮೂರ್ತಿ ಮೊದಲಾದವರ ಚಿತ್ರಗಳು.. ಇವಿಷ್ಟನ್ನು ಕಂಡಾಗ ಇದೊಂದು ಎಡಪಂಥೀಯ ಚಿತ್ರವೇನೋ ಎಂಬ ಸಂದೇಹ ಬಂದರೆ ಚಿತ್ರ ಕೊನೆಯಾಗುತ್ತಾ ಬಂದ ಹಾಗೆ ಬ್ಲೂ ಡೈಮಂಡ್ ಶಿವನ ಮೂರನೇ ಕಣ್ಣಾದ ನೀಲಮಣಿ ಎನ್ನುವುದು, ಮಣಿಯನ್ನು ಅರ್ಚಕನನ್ನು ಬೆದರಿಸಿ ಅಪಹರಿಸಿರುವ ಬಗ್ಗೆ ಹೇಳುವುದು ಮತ್ತು ಅದಕ್ಕಾಗಿ ಬ್ರಿಟನ್ ಇಂದು ಕ್ಷಮೆ ಕೇಳಿ ವಜ್ರವನ್ನು ಮರಳಿಸುವಂತೆ ಮಾಡುವ ದೃಶ್ಯಗಳು ಧರ್ಮದ ವೈಭವೀಕರಣದ ಬಲಪಂಥೀಯ ಪ್ರಯತ್ನಗಳಂತೆ ಗೋಚರಿಸುತ್ತದೆ. ಅವೆಲ್ಲವನ್ನು ಬದಿಗಿಟ್ಟು ನೋಡುವವರಿಗೆ ಇದೊಂದು ದೇಶಪ್ರೇಮದ ಚಿತ್ರವಾಗಿ ಕಂಡರೆ ಅಚ್ಚರಿ ಇಲ್ಲ. ಮುಖ್ಯವಾಗಿ ಚಿತ್ರದಲ್ಲೊಂದು ಕಡೆ ಹೇಳುವಂತೆ ‘ಅಮೂಲ್ಯವಾಗಿದ್ದನ್ನು ಪಡೆಯಲು ಆಳಕ್ಕಿಳಿಯಬೇಕು’. ಮೇಲ್ನೋಟದಲ್ಲಿ ದಕ್ಕುವುದನ್ನೇ ಸಂದೇಶ ಎಂದುಕೊಳ್ಳದೆ, ಗುಣಮಟ್ಟದ ಚಿತ್ರವೊಂದನ್ನು ನೋಡುವ ಕಾತರತೆ ಇರುವವರು ನೋಡಬಹುದಾದ ಚಿತ್ರ ಇದು.

ತಾರಾಗಣ: ವಸಿಷ್ಠ ಸಿಂಹ, ಮಾನ್ವಿತಾ ಹರೀಶ್
ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್
ನಿರ್ಮಾಣ: ವೈ. ಎನ್. ಶಂಕರೇಗೌಡ ಮತ್ತು ಇತರರು

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X