Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. 1991ರ ಆರ್ಥಿಕ ಮುಗ್ಗಟ್ಟಿನಿಂದ ದೇಶವನ್ನು...

1991ರ ಆರ್ಥಿಕ ಮುಗ್ಗಟ್ಟಿನಿಂದ ದೇಶವನ್ನು ರಕ್ಷಿಸಿದ ಮನಮೋಹನ್ ಸಿಂಗ್ ಗೆ ಯಾಕಿಲ್ಲ ಭಾರತ ರತ್ನ, ನೊಬೆಲ್ ಪುರಸ್ಕಾರ?

ವಿಜಯಕುಮಾರ್. ಎಸ್.ಅಂಟೀನವಿಜಯಕುಮಾರ್. ಎಸ್.ಅಂಟೀನ26 Jan 2020 11:19 AM IST
share
1991ರ ಆರ್ಥಿಕ ಮುಗ್ಗಟ್ಟಿನಿಂದ ದೇಶವನ್ನು ರಕ್ಷಿಸಿದ ಮನಮೋಹನ್ ಸಿಂಗ್ ಗೆ ಯಾಕಿಲ್ಲ ಭಾರತ ರತ್ನ, ನೊಬೆಲ್ ಪುರಸ್ಕಾರ?

ವಿಜಯಕುಮಾರ್. ಎಸ್.ಅಂಟೀನ

ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿ ಮಾಜಿ ಪ್ರಧಾನಿ ಪಿ.ವಿ.ಎನ್ ಸಂಪುಟದಲ್ಲಿ 1991ರ ಜೂನ್‌ನಲ್ಲಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡರು. ಈ ಹಂತದಲ್ಲಿ, ನೆಹರೂವಿಯನ್-ಸಮಾಜವಾದಿ ಕಾರ್ಯಸೂಚಿಯ ಪ್ರಕಾರ ಭಾರತೀಯ ಆರ್ಥಿಕತೆಯು ಇನ್ನೂ ಕಾರ್ಯನಿರ್ವಹಿಸುತ್ತಿತ್ತು ಇದು. 1947 ಮತ್ತು 1990ರ ನಡುವೆ ಭಾರತದಲ್ಲಿ ವ್ಯವಹಾರಗಳನ್ನು ಸ್ಥಾಪಿಸಲು ಮತ್ತು ನಡೆಸಲು ಅಗತ್ಯವಾದ ಪರವಾನಿಗೆಗಳು, ನಿಯಮಗಳು ಮತ್ತು ವಿಸ್ತಾರವಾದ ವ್ಯವಸ್ಥೆ - ಲೈಸೆನ್ಸ್ ರಾಜ್ ಎಂಬ ಪರವಾನಿಗೆಯ ಅಸ್ತಿತ್ವದ ಜೊತೆಗೆ ಅರೆ-ಕಲ್ಯಾಣ ರಾಜ್ಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಭಾರತೀಯ ಉದ್ಯೋಗ ದರಗಳು ನಕಾರಾತ್ಮಕ ಮಟ್ಟಕ್ಕೆ ಇಳಿದಿತ್ತು. ಕನಿಷ್ಠ ಆರ್ಥಿಕ ಬೆಳವಣಿಗೆಯೊಂದಿಗೆ ಉತ್ಪಾದನಾ ವಲಯವು ಕೆಟ್ಟ ಸ್ಥಿತಿಯಲ್ಲಿತ್ತು.

ಆರ್ಥಿಕತೆಯ ಸಂಪೂರ್ಣ ಮುಖವನ್ನು ಬದಲಾಯಿಸಲು ತಿಳಿದಿರುವ, ಅನುಭವಿ ವ್ಯಕ್ತಿಯ ಅವಶ್ಯಕತೆಯಿತ್ತು. ಸಿಂಗ್ ಅವರು ವ್ಯವಹಾರ, ಅರ್ಥಶಾಸ್ತ್ರ ಮತ್ತು ಜಾಗತೀಕರಣದಲ್ಲಿ ವ್ಯಾಪಕ ಹಿನ್ನೆಲೆ ಹೊಂದಿದ್ದರು, ಆಕ್ಸ್‌ಫರ್ಡ್‌ನಿಂದ ಡಾಕ್ಟರೇಟ್ ಪಡೆದಿದ್ದರು. ವಿಶ್ವಸಂಸ್ಥೆಯಲ್ಲಿ ಸತತ ಮೂರು ವರ್ಷಗಳ ಕಾಲ ಮತ್ತು ವಿದೇಶಿ ವ್ಯಾಪಾರ ಸಚಿವಾಲಯದಲ್ಲಿ ಸಲಹೆಗಾರರಾಗಿ ಮತ್ತೊಂದು ಸ್ಥಾನವನ್ನು ಪಡೆದಿದ್ದರು. ಅವರು ರಿಸರ್ವ್ ಬ್ಯಾಂಕ್ ಗವರ್ನರ್ (1982-1985) ಹಾಗೂ ಮುಖ್ಯ ಆರ್ಥಿಕ ಸಲಹೆಗಾರ (1972-1976) ಮತ್ತು ಯೋಜನಾ ಆಯೋಗದ ಮುಖ್ಯಸ್ಥ (1985-1987) ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದರು.

 ಡಾ.ಸಿಂಗ್ ಅವರು ಪರಿಸ್ಥಿತಿಯನ್ನು ವೌಲ್ಯಮಾಪನ ಮಾಡಿದ ನಂತರ, ಭಾರತೀಯ ಆರ್ಥಿಕತೆಗೆ ತೀವ್ರವಾಗಿ ಬೇಕಾಗಿರುವುದು - ಆರ್ಥಿಕ ಉದಾರೀಕರಣದತ್ತ ಸಾಗುವುದು ಮತ್ತು ‘ಲೈಸನ್ಸ್ ರಾಜ್’ನ ಅಂತ್ಯ ಎಂದು ಅರಿತುಕೊಂಡರು.

ಅವರು ಆರ್‌ಬಿಐ ಸಹಯೋಗದೊಂದಿಗೆ ಎರಡು-ಹಂತದ ಅಪಮೌಲ್ಯೀಕರಣ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಿದರು. ಇದನ್ನು ಮೊದಲು ಪ್ರಮುಖ ಕರೆನ್ಸಿಗಳ ವಿರುದ್ಧ ಒಂಬತ್ತು ಪ್ರತಿಶತದಷ್ಟು ಅಪಮೌಲ್ಯಗೊಳಿಸಲಾಯಿತು ಮತ್ತು ನಂತರ ಎರಡು ದಿನಗಳ ನಂತರ ಹನ್ನೊಂದು ಪ್ರತಿಶತಕ್ಕೆ ಇಳಿಸಲಾಯಿತು. ಇದು ಸ್ವಾಭಾವಿಕವಾಗಿ ವ್ಯಾಪಾರ ಮತ್ತು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯ ವ್ಯವಹಾರಕ್ಕೆ ಉತ್ತೇಜನ ನೀಡಿತು. ಅವರು ಮಾಡಿದ ಮುಂದಿನ ಕೆಲಸವೆಂದರೆ, ಭಾರತದ ಚಿನ್ನದ ಹಿಡುವಳಿಗಳನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ನೊಂದಿಗೆ ನಾಲ್ಕು ಕಂತುಗಳಲ್ಲಿ ಅಡಮಾನ ಇಟ್ಟು ಅಗತ್ಯವಾದ ಹಣಕಾಸಿನ ನೆರವು ಪಡೆಯುವುದಾಗಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಹಿಂದೆ ಕೈಗೊಂಡ ಇದೇ ರೀತಿಯ ಕ್ರಮಕ್ಕೆ ಬದಲಾಗಿ ಅವರು ಇದನ್ನು ಮಾಡಿದರು. 20 ಟನ್ ಚಿನ್ನವನ್ನು ಯೂನಿಯನ್ ಬ್ಯಾಂಕ್ ಆಫ್ ಸ್ವಿಟ್ಸರ್ಲೆಂಡ್‌ಗೆ ಮಾರಾಟ ಮಾಡಿದರು. ಇದಕ್ಕಾಗಿ ಅವರು ಸುಮಾರು 200 ಮಿಲಿಯನ್ ಡಾಲರ್ ಹಣ ಪಡೆದರು. ಚಿನ್ನದ ನಿರಂತರ ಬೇಡಿಕೆ ಮತ್ತು ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು, ಸಂಪನ್ಮೂಲಗಳನ್ನು ಪಡೆಯಲು ಇದು ಕಾರ್ಯತಂತ್ರದ ಮಾರ್ಗವೆಂದು ತಿಳಿದಿದ್ದರು.

ದೇಶದಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಉತ್ತೇಜಿಸುವ ಮೂಲಕ ಕೈಗಾರಿಕೀಕರಣಕ್ಕೆ ಹೆಚ್ಚು ಅಗತ್ಯವಾದ ಪ್ರೋತ್ಸಾಹವನ್ನು ನೀಡಿದರು.

ದೇಶದ ಶೇರು ಮಾರುಕಟ್ಟೆಯ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯವಾಗುವಂತೆ ಪೂರ್ಣ ಶಾಸನಬದ್ಧ ಅಧಿಕಾರವನ್ನು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ಗೆ ವರ್ಗಾಯಿಸಲು ಸಿಂಗ್ ಕರೆ ನೀಡಿದರು. ಪರಿಣಾಮವಾಗಿ, ಸೆಬಿ ಏಕೈಕ ಮಾರುಕಟ್ಟೆ ನಿಯಂತ್ರಕವಾಯಿತು. ಸಾಫ್ಟ್‌ವೇರ್ ರಫ್ತಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಎಚ್‌ಎಚ್‌ಸಿ ಅಡಿಯಲ್ಲಿ ತೆರಿಗೆ ರಿಯಾಯಿತಿಯನ್ನು ವಿಸ್ತರಿಸಲು ಅವರು ಪ್ರಸ್ತಾಪಿಸಿದರು. ಈ ರಿಯಾಯಿತಿಯ ಪರಿಣಾಮವಾಗಿ, ಭಾರತೀಯ ಸಾಫ್ಟ್‌ವೇರ್ ಕಂಪೆನಿಗಳು ಹೆಚ್ಚು ಸಹಾಯಕವಾದವು.

220 ಮಿಲಿಯನ್ ಡಾಲರ್ ತುರ್ತು ಸಾಲಕ್ಕೆ ಅರ್ಜಿ ಸಲ್ಲಿಸುವ ಮೂಲಕ ಆರ್ಥಿಕತೆಯು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿಯಿಂದ ಪರಿಹಾರವನ್ನು ಪಡೆಯಬೇಕೆಂದು ಅವರು ಕರೆ ನೀಡಿದರು.ಭಾರತೀಯ ಆರ್ಥಿಕತೆಯು ಸುವ್ಯವಸ್ಥಿತವಾಗುತ್ತಿರುವ ನಿಧಾನವಾದ ಆದರೆ ಸ್ಥಿರವಾದ ಆರ್ಥಿಕ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಆರ್ಥಿಕ ಸುಧಾರಣೆಗಳ ಪ್ರಮುಖ ಭಾಗಗಳನ್ನು ಎತ್ತಿ ತೋರಿಸುತ್ತಾ, ಸಿಂಗ್ ಅವರ ಆಮೂಲಾಗ್ರ ಕ್ರಮಗಳನ್ನು ಅನೇಕರು ಮೆಚ್ಚಿದರು. ಭಾರತದ ಪ್ರಧಾನ ಮಂತ್ರಿಯಾಗಿದ್ದ ಅವರ ಎರಡು ಅವಧಿಗಳ ಬಗ್ಗೆ ಜಗತ್ತು ವಿಮರ್ಶಾತ್ಮಕ ದೃಷ್ಟಿಕೋನವನ್ನು ಹೊಂದಿರಬಹುದು, ಆದರೆ ಅವರು 1991 ರಲ್ಲಿ ಭಾರತೀಯ ಆರ್ಥಿಕತೆಯನ್ನು ಮರಳಿ ಉಳಿಸುವಲ್ಲಿ ಯಶಸ್ವಿಯಾದರು ಎಂಬ ಅಂಶವನ್ನು ಯಾರೂ ಅಲ್ಲಗಳೆಯುವಂತಿಲ್ಲ.ಇವರಿಗೇಕಿಲ್ಲ ಭಾರತ ರತ್ನ, ನೊಬೆಲ್ ಪುರಸ್ಕಾರ?.

share
ವಿಜಯಕುಮಾರ್. ಎಸ್.ಅಂಟೀನ
ವಿಜಯಕುಮಾರ್. ಎಸ್.ಅಂಟೀನ
Next Story
X