ಕೃಷ್ಣಾಪುರ: ಗಣರಾಜ್ಯೋತ್ಸವ ಪ್ರಯುಕ್ತ ರಕ್ತದಾನ
ಕೃಷ್ಣಾಪುರ, ಜ.26: ಜಮಾಅತೆ ಇಸ್ಲಾಮಿ ಹಿಂದ್ ಕೃಷ್ಣಾಪುರ ಹಾಗೂ ಹ್ಯುಮೇನಿಟೇರಿಯನ್ ರಿಲೀಫ್ ಸೊಸೈಟಿ ಮಂಗಳೂರು ಇದರ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರವಿವಾರ ಕೃಷ್ಣಾಪುರದಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕೃಷ್ಣಾಪುರ ಕೋಡ್ದಬ್ಬು ದೈವಸ್ಥಾನದ ಮುಖ್ಯಸ್ಥ ಹರೀಶ್ ಕುಮಾರ್ ಒಬ್ಬನ ರಕ್ತದಾನ ಒಂದು ಕುಟುಂಬವನ್ನು ಉಳಿಸಿದಂತಾಗುತ್ತದೆ. ಹಾಗಾಗಿ ನಾವೆಲ್ಲರೂ ಜಾತಿಭೇದ ಮರೆತು ಜೀವ ಉಳಿಸುವ ಕೆಲಸ ಮಾಡಬೇಕು ಎಂದರು.
ಅತಿಥಿಗಳಾಗಿ ಅಬೂಬಕರ್ ಕುಳಾಯಿ, ಹಂಝ ಯು.ಎನ್.ಭಾಗವಹಿಸಿದ್ದರು.
Next Story