ವಿದ್ಯಾರ್ಥಿಗೆ ಹಲ್ಲೆ: ಶಿಕ್ಷಕಿ ವಿರುದ್ಧ ದೂರು
ಬೈಂದೂರು, ಜ.29: ಉಪ್ಪುಂದ ಉರ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬರು, ಓರ್ವ ವಿದ್ಯಾರ್ಥಿಗೆ ಬೇರೆ ವಿದ್ಯಾರ್ಥಿ ಮೂಲಕ ಹೊಡೆಸಿ, ಎರಡೂ ಕೆನ್ನೆ ಚಿವುಟಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪುಂದ ಗ್ರಾಮದ ಆಚಾರಿಕೇರಿ ರಸ್ತೆಯ ಉಮಾದೇವಿ ಎಂಬವರ ಮಗ, ನಾಲ್ಕನೆ ತರಗತಿಯ ಸಂಗ್ರಾಮ್ ರಾಜ್ ಎಂಬಾತನಿಗೆ ಆ ಶಾಲೆಯ ಶಿಕ್ಷಕಿ ಮಲ್ಲಿಕಾ ಶೆಟ್ಟಿ ಎಂಬವರು ಜ.27ರಂದು ಮಧ್ಯಾಹ್ನ 3:50ರ ಸುಮಾರಿಗೆ ಇನ್ನೊಬ್ಬ ವಿದ್ಯಾರ್ಥಿಯ ಮೂಲಕ ಹೊಡೆಸಿದ್ದು, ಈ ವಿಚಾರ ಮನೆಯವರಲ್ಲಿ ಹೇಳಿದರೆ ಬೇರೆ ಮಕ್ಕಳಿಂದ ಹೊಡೆಸುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ಅಲ್ಲದೆ ಸಂಗ್ರಾಮ್ನ ಎರಡೂ ಕೆನ್ನೆಗೆ ಕೈಯಿಂದ ಚಿವುಟಿರುವುದಾಗಿ ಉಮಾದೇವಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Next Story