ಶಾಸಕ ಯು.ಟಿ.ಖಾದರ್ ಗೆ ಜೀವ ಬೆದರಿಕೆ: ಕಾಂಗ್ರೆಸ್ ನಿಂದ ದೂರು
ಉಳ್ಳಾಲ: ಕೇಂದ್ರ ಸರಕಾರದ ಪೌರತ್ವ ಕಾಯ್ದೆ ಬೆಂಬಲಿಸಿ ಬಿಜೆಪಿ ವತಿಯಿಂದ ಮಂಗಳೂರಿನಲ್ಲಿ ನಡೆದಿದ್ದ ಸಮಾವೇಶದ ವೇಳೆ ಶಾಸಕ ಯು.ಟಿ.ಖಾದರ್ ಅವರಿಗೆ ಜೀವ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿ ನೈಜ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಉಳ್ಳಾಲ ಠಾಣೆಯಲ್ಲಿ ದೂರು ನೀಡಲಾಯಿತು.
ಈ ಸಂದರ್ಭ ಅಲ್ಪಸಂಖ್ಯಾತ ಘಟಕದ ಉಳ್ಳಾಲ ಘಟಕಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಎನ್.ಎಸ್.ಕರೀಂ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಮುಖಂಡರಾದ ಜಮಾಲ್ ಅಜ್ಜಿನಡ್ಕ, ಇಸ್ಮಾಯಿಲ್ ದೊಡ್ಡಮನೆ, ಪದ್ಮನಾಭ ನರಿಂಗಾನ, ಬಾತಿಷ್, ಮುನೀರ್ ಬಾವ, ಅಹ್ಮದ್ ಅಜ್ಜಿನಡ್ಕ, ಅಬ್ಬು ದೇರಳಕಟ್ಟೆ, ಹಮೀದ್ ಹಸನ್ ಮಾಡೂರು, ಲ್ಯಾನ್ಸಿ ಡಿಸೋಜ, ಸಿರಾಜ್, ಸುರೇಶ್ ಫೆರಾವೋ ಕಲ್ಲಾಪು ಇನ್ನಿತರರು ಉಪಸ್ಥಿತರಿದ್ದರು.
Next Story