ಐಜಿಪಿ ಅರುಣ್ ಚಕ್ರವರ್ತಿ ವರ್ಗಾವಣೆ

ಮಂಗಳೂರು, ಜ.31: ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅವರನ್ನು ಬೆಂಗಳೂರು ರೈಲ್ವೆಗೆ ಪೊಲೀಸ್ ಹೆಚ್ಚುವರಿ ಮಹಾ ನಿರ್ದೇಶಕರ ಹುದ್ದೆಗೆ (ಡಿಜಿಪಿ) ನಿಯೋಜಿಸಿ ವರ್ಗಾವಣೆಗೊಳಿಸಿ ಶುಕ್ರವಾರ ಸರಕಾರ ಆದೇಶ ಹೊರಡಿಸಿದೆ.
ತೆರವಾದ ಅವರ ಸ್ಥಾನಕ್ಕೆ ಯಾರನ್ನೂ ನಿಯೋಜಿಸಿಲ್ಲ. ಅರುಣ್ ಚಕ್ರವರ್ತಿ ಸುಮಾರು 3 ವರ್ಷಕ್ಕಿಂತಲೂ ಅಧಿಕ ಕಾಲ ಪಶ್ಚಿಮ ವಲಯ ಐಜಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
Next Story





