Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಲವ್ ಮಾಕ್ಟೇಲ್: ಪ್ರೇಮದಾಟದ ಬ್ಲೂವೇಲ್

ಲವ್ ಮಾಕ್ಟೇಲ್: ಪ್ರೇಮದಾಟದ ಬ್ಲೂವೇಲ್

ಶಶಿಕರ ಪಾತೂರುಶಶಿಕರ ಪಾತೂರು1 Feb 2020 11:44 PM IST
share
ಲವ್ ಮಾಕ್ಟೇಲ್: ಪ್ರೇಮದಾಟದ ಬ್ಲೂವೇಲ್

ನಮ್ಮಲ್ಲಿ ಲವ್ ಸ್ಟೋರಿ ಸಿನೆಮಾ ಎಂದೊಡನೆ ಅದು ಸಾಮಾನ್ಯವಾಗಿ ಮದುವೆಗೆ ಮುಂಚಿತವಾಗಿ ನಡೆದಿರುವುದೇ ಆಗಿರುತ್ತದೆ. ಆದರೆ ಒಬ್ಬ ಯುವಕನ ಲವ್ ಪ್ರೌಢ ಶಾಲೆಯಿಂದ ಹಿಡಿದು ದಾಂಪತ್ಯದ ತನಕ ಹೇಗೆ ಬದಲಾಗುತ್ತ ಹೋಗುತ್ತದೆ ಎನ್ನುವುದನ್ನು ತಿಳಿಸುವ ಚಿತ್ರವೇ ಲವ್ ಮಾಕ್ಟೇಲ್.

ಆದಿತ್ಯ ಎಂಬ ಯುವಕ ಬೆಂಗಳೂರಿನಿಂದ ಉಡುಪಿಗೆ ಪ್ರಯಾಣ ಮಾಡುವ ಹಾದಿಯಲ್ಲಿ ಅದಿತಿ ಎಂಬ ಯುವತಿಗೆ ಹೇಳುವ ತನ್ನ ಬದುಕಿನ ಪ್ರೇಮಕತೆಯಾಗಿ ಒಟ್ಟು ಚಿತ್ರ ಇದೆ. ಹಾಗಾಗಿ ಇದು ಪ್ರೌಢಶಾಲೆಯ ನಾಸ್ಟಾಲ್ಜಿಕ್ ದಿನಗಳಿಂದ ಆರಂಭವಾಗುತ್ತದೆ. ಬಾಲ್ಯದ ಕ್ರಶ್, ಲವ್ ಮಾಡಬೇಕು ಎನ್ನುವ ಕಾರಣಕ್ಕೆ ಲವ್ ಮಾಡೋದು, ಕ್ರಿಕೆಟ್ ಹುಚ್ಚು ಮೊದಲಾದ ಸನ್ನಿವೇಶಗಳನ್ನು ತುಂಬ ನೈಜತೆಯಿಂದ ತೋರಿಸಲಾಗಿದೆ. ಆದರೆ ವರ್ಕೌಟ್ ಆಗದ ಲವ್; ಕಾಲೇಜ್ ದಿನಗಳಲ್ಲಿ ಹೇಗೆ ಮತ್ತೆ ಶುರುವಾಗುತ್ತದೆ ಮತ್ತು ಈ ಬಾರಿ ಅದರಲ್ಲಿ ಎಷ್ಟೊಂದು ಉದ್ವೇಗ, ಉತ್ಸಾಹ, ಉನ್ಮಾದ ಇರುತ್ತದೆ ಎನ್ನುವುದನ್ನು ಬಣ್ಣಿಸುತ್ತದೆ. ಆದರೆ ಅದು ಕೂಡ ತುಂಬ ದಿನ ಉಳಿಯುವುದಿಲ್ಲ. ಹಾಗಾದರೆ ನಾಯಕ ಕೊನೆಗೆ ಯಾರನ್ನು ವಿವಾಹವಾಗುತ್ತಾನೆ? ಆ ದಾಂಪತ್ಯ ಹೇಗಿರುತ್ತದೆ ಎನ್ನುವುದನ್ನು ಸ್ವಾರಸ್ಯಕರವಾಗಿ, ಸ್ವಾನುಭವದ ಹಾಗೆ, ಸಂಗೀತಮಯವಾಗಿ ತಿಳಿದುಕೊಳ್ಳಬೇಕಾದರೆ ಚಿತ್ರಮಂದಿರದಲ್ಲಿ ಲವ್ ಮಾಕ್ಟೇಲ್ ನೋಡಬೇಕು.

ಆದಿತ್ಯನಾಗಿ ಡಾರ್ಲಿಂಗ್ ಕೃಷ್ಣ ಅವರ ಪಾತ್ರ ಚಿತ್ರ ಮುಗಿದ ಮೇಲೆಯೂ ಮನದಲ್ಲಿ ಉಳಿಯುವ ಮಾದರಿಯಲ್ಲಿ ಮೂಡಿ ಬಂದಿದೆ. ಆದಿತ್ಯನ ಹೈಸ್ಕೂಲ್ ಪಾತ್ರವನ್ನು ನಿಭಾಯಿಸಿರುವ ಹುಡುಗ ನಿಜಕ್ಕೂ ಕೃಷ್ಣನನ್ನು ಹೋಲುವಂತಿರುವುದು ಪ್ಲಸ್ ಪಾಯಿಂಟ್. ಆದರೆ ಸ್ವತಃ ಕೃಷ್ಣನೇ ನಿಜವಾದ ಟೀನೇಜ್ ಹುಡುಗರ ಜತೆಗೆ ಕ್ಲಾಸ್ಮೇಟ್ ಆಗಿ ನಟಿಸಿದಾಗ ಆತನ ದೇಹವನ್ನು ಒಪ್ಪುವುದು ಕಷ್ಟ. ಹಾಗಿದ್ದರೂ ನಟನೆ ಮಾತ್ರ ಸಹಜತೆಯನ್ನೇ ಮೈಯೊಳಗೆ ತುಂಬಿಸಿಕೊಂಡಂತೆ ಕಾಣಿಸಿದ್ದಾರೆ. ಕಾಲೇಜ್ ದಿನಗಳಲ್ಲಿ ಆತನ ಪ್ರೇಯಸಿಯಾಗಿ ‘ಜ್ಯೋ’ ಎಂದು ಕರೆಸಿಕೊಳ್ಳುವ ಚೆಲುವೆಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಶ್ರೀಮಂತರ ಮನೆಯಲ್ಲಿ ಬೆಳೆದ ಮುದ್ದಾದ ಯುವತಿಯ ಬಿಂಕ, ಬಿನ್ನಾಣ, ಬೇಜವಾಬ್ದಾರಿಗಳನ್ನು ಬಿಂಬಿಸುವಲ್ಲಿ ಗೆದ್ದಿರುವ ಆಕೆ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ದಾಂಪತ್ಯದಲ್ಲಿ ಕೃಷ್ಣನಿಗೆ ಜೋಡಿಯಾಗಿ ನಟಿಸಿರುವ ಮಿಲನಾ ನಾಗರಾಜ್ ನಟನೆಯಲ್ಲಿ ಕೂಡ ಉತ್ತಮ ಪೇರ್ ಎನಿಸಿಕೊಳ್ಳುತ್ತಾರೆ. ಯಾಕೆಂದರೆ ಇಬ್ಬರೂ ಕಣ್ಣುಗಳ ಮೂಲಕವೇ ಭಾವವನ್ನು ಹೊರ ಹಾಕುವ ರೀತಿ ಅಮೋಘ.

ಕೃಷ್ಣ ಓರ್ವ ನಟರಾಗಿ ಮಾತ್ರವಲ್ಲ, ಬಾಲ್ಯದ ಪಾತ್ರಗಳನ್ನು ನಿರ್ದೇಶಿಸುವಲ್ಲಿಂದ ಹಿಡಿದು ಪೂರ್ತಿ ಕತೆಯನ್ನು ಆಲಿಸುವ ಅದಿತಿಯಾಗಿ ನಟಿಸಿರುವ ನವನಟಿ ರಚನಾ ವರೆಗಿನ ಪ್ರತಿಯೊಂದು ಪಾತ್ರಗಳನ್ನು ನಿರ್ದೇಶಿಸಿರುವ ರೀತಿಯಿಂದಲೂ ಮನ ಗೆಲ್ಲುತ್ತಾರೆ. ಹಾಡುಗಳು, ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಕೂಡ ಚಿತ್ರಕ್ಕೆ ಹೊಂದಿಕೊಂಡ ಹಾಗೆ ಇದೆ. ಒಂದೆರಡು ಕಡೆ ಕತೆ ಸಾಗುವ ರೀತಿ ನಿಧಾನವಾಗಿದೆ ಎನಿಸಿದರೂ ಜೀವನದಲ್ಲಿ ಒಮ್ಮೆಯಾದರೂ ಪ್ರೇಮಿಸಿದ ಪ್ರತಿಯೊಬ್ಬರು ಕೂಡ ತಮ್ಮ ಹಳೆಯ ದಿನಗಳನ್ನು ನೆನಪಿಸುವಂತಿದೆ. ಪ್ರೇಮಿಸದವರು ಯಾಕೆ ಪ್ರೇಮಿಸಿಲ್ಲ ಎಂದು ಹಪಹಪಿಸುವಂತಿದೆ. ಅದೇ ಈ ಚಿತ್ರದ ಗೆಲುವು.

ತಾರಾಗಣ: ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್
ನಿರ್ದೇಶನ: ಡಾರ್ಲಿಂಗ್ ಕೃಷ್ಣ

ನಿರ್ಮಾಣ: ಕೃಷ್ಣ ಟಾಕೀಸ್ 

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X