Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದೇಶಾದ್ಯಂತ NRC ಇಲ್ಲ ಎಂಬ ಕೇಂದ್ರ...

ದೇಶಾದ್ಯಂತ NRC ಇಲ್ಲ ಎಂಬ ಕೇಂದ್ರ ಸರಕಾರದ ಮಹಾಸುಳ್ಳಿಗೆ ಬಲಿಬೀಳಬೇಡಿ !

NPR ರದ್ದುಗೊಳಿಸುವತ್ತ ಹೋರಾಟವನ್ನು ಕೇಂದ್ರೀಕರಿಸಿ

ಶಿವಸುಂದರ್ಶಿವಸುಂದರ್4 Feb 2020 3:36 PM IST
share
ದೇಶಾದ್ಯಂತ NRC ಇಲ್ಲ ಎಂಬ ಕೇಂದ್ರ ಸರಕಾರದ ಮಹಾಸುಳ್ಳಿಗೆ ಬಲಿಬೀಳಬೇಡಿ !

ಇಂದು (ಫೆ.4) ರಂದು ಸಂಸತ್ತಿನಲ್ಲಿ ಸರ್ಕಾರವು ಒಂದು ಅಧಿಕೃತ ಹೇಳಿಕೆಯನ್ನು ಪ್ರಕಟಿಸಿ "ದೇಶಾದ್ಯಂತ  NRC ಮಾಡುವ ಬಗ್ಗೆ ಸರ್ಕಾರ ಸದ್ಯಕ್ಕ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ" ಎಂದು ಹೇಳಿದೆ. ಇದು ಜನರನ್ನು ದಾರಿ ತಪ್ಪಿಸುವ ಮತ್ತೊಂದು ಸುಳ್ಳು ಹಾಗು ವಂಚನೆಯಿಂದ ಕೂಡಿದ ಹೇಳಿಕೆಯಾಗಿದೆ.

1. ಮೊದಲನೆಯದಾಗಿ ಸರ್ಕಾರವು ಇದೆ ಎಪ್ರಿಲ್ ನಿಂದ ದೇಶದೆಲ್ಲೆಡೆ ಎನ್ ಪಿ ಆರ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದೆ. ಅದಕ್ಕಾಗಿ ಡಿಸೆಂಬರ್ 24ರಂದೇ 5000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

NPR- ನ್ಯಾಷನಲ್ ಪಾಪ್ಯುಲೇಷನ್ ರಿಜಿಸ್ಟ್ರಿ- ಮಾಡುತ್ತಿರುವುದೇ NRC ಮಾಡಲೆಂದು. NRC ಮಾಡುವುದನ್ನು ಬಿಟ್ಟು NPR ಗೆ ಬೇರೆ ಯಾವುದೇ ಅಸ್ತಿತ್ವವಾಗಲಿ ಬಳಕೆಯಾಗಲಿ ಇಲ್ಲ. NPR ಮಾಡಿದ ನಂತರವೇ ಹಾಗು ಅದನ್ನು ಆಧರಿಸಿಯೇ- ಅಂದರೆ NPR ಪ್ರಕ್ರಿಯೆಯಲ್ಲಿ ಅನುಮಾನಾಸ್ಪದರಾದವರನ್ನು ಅಥವಾ ಸರಿಯಾದ ಮಾಹಿತಿ ಹಾಗು ಕಾಗದ ಪತ್ರಗಳನ್ನು ಕೊಡಲಾಗದವರನ್ನು ಅಕ್ರಮ ವಲಸಿಗರೆಂದು ಬೇರ್ಪಡಿಸುವ ಮೂಲಕ ಮಾತ್ರ ಉಳಿದವರನ್ನು ನಾಗರೀಕರೆಂದು ಘೋಷಿಸುವ ರಾಷ್ಟ್ರೀಯ ನಾಗರಿಕರ ಪಟ್ಟಿ ಅರ್ಥಾತ್ NRC ತಯಾರಾಗುತ್ತದೆ.

ಹೀಗಾಗಿ NPR ಇಲ್ಲದೆ NRC ಮಾಡಲು ಆಗುವುದೇ ಇಲ್ಲ. ಆದ್ದರಿಂದ ಈಗ ಎನ್ ಪಿ ಆರ್ ಮಾಡುತ್ತಿರುವುದೇ ಎನ್ ಆರ್ ಸಿ ಯನ್ನು ತಯಾರಿಸಲು. ಆದರೆ  NRC ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎನ್ನುತ್ತಿರುವ ಸರ್ಕಾರ  NRC ಮೊದಲ ಹಂತವಾದ  NPR ಪ್ರಕ್ರಿಯೆಯನ್ನು ತರಾತುರಿಯಿಂದ ಪ್ರಾರಂಭಿಸಿದ್ದು ಏಕೆ?  

ಹೀಗಾಗಿ  "NRC ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ" ಎನ್ನುವ ಸರ್ಕಾರದ ಹೇಳಿಕೆ ಹೋರಾಟ ನಿರತ ಜನರನ್ನು ದಾರಿ ತಪ್ಪಿಸುವ ಯೋಜನೆಯಾಗಿದೆ. ಇದನ್ನು ಖಂಡಿಸಬೇಕು ಮತ್ತು NPR ರದ್ದಿಗಾಗಿ ಹೋರಾಟವನ್ನು ತೀವ್ರಗೊಳಿಸಬೇಕಿದೆ.

2. ಸರ್ಕಾರ ಹೇಳುತ್ತಿರುವ ಮತ್ತೊಂದು ಸುಳ್ಳು " NPR ಹಾಗು NRC ಗು ಸಂಬಂಧವಿಲ್ಲ. NPR ಒಂದು ರೀತಿಯಲ್ಲಿ ಸೆನ್ಸಸ್ ಇದ್ದ ಹಾಗೆ" ಎಂಬುದಾಗಿದೆ. ಇದು ಮತ್ತೊಂದು ಮಹಾ ಸುಳ್ಳು. ಸೆನ್ಸಸ್ ಎಂಬುದು ಪ್ರತಿ ಹತ್ತು ವರ್ಷಕ್ಕೊಮ್ಮೆ ಭಾರತೀಯ ಸೆನ್ಸಸ್ ಆಕ್ಟ್ ಮೂಲಕ ನಡೆಯುವ ಪ್ರಕ್ರಿಯೆಯಾಗಿದೆ. ಅದನ್ನು ಯಾರು ವಿರೋಧಿಸುತ್ತಿಲ್ಲ. ಆದರೆ NPR ಮತ್ತು ಮತ್ತು NRC ಗಳು ನಡೆಯುವುದು ಭಾರತೀಯ ನಾಗರಿಕತ್ವ ಕಾಯಿದೆ (1955) ಹಾಗು ಅದಕ್ಕೆ ವಾಜಪೇಯಿ ಸರ್ಕಾರ 2004ಕ್ಕೆ ತಂದ ತಿದ್ದುಪಡಿ ಮತ್ತು 2003ರಲ್ಲಿ ರೂಪಿಸಿದ ನಿಯಮಾವಳಿಯ ಅನುಸಾರವಾಗಿ.

3. 2003ರಲ್ಲಿ  ವಾಜಪೇಯಿ ಸರ್ಕಾರ  Citizenship (Registration Of Citizens and Issue Of National Identity Cards) Rules 2003 ನಿಯಮಾವಳಿಗಳನ್ನು ಜಾರಿ ಮಾಡಿದೆ. ಅದರ ಉಪ ನಿಯಮ 3ರ ಕ್ಲಾಸ್ 4 ಮತ್ತು 5 ಹೀಗೆ ಹೇಳುತ್ತದೆ:

(4)  The  Central  Government  may,  by  an  order issued in this  regard, decide a date by which the Population  Register  shall  be prepared  by  collecting  information relating to all persons who are usually residing within the jurisdiction of Local Registrar.

(5) The Local Register of Indian citizens shall contain  details  of persons after due verification made from the Population Register

ಈ ಮೇಲಿನ ನಿಯಮಾವಳಿಗಳು ಸ್ಪಷ್ಟಪಡಿಸುವಂತೆ NPR ಅನ್ನು ಪರಿಶೀಲಿಸಿದ ನಂತರವೇ NRC ಆಗುತ್ತದೆ. ಮತ್ತು NPR ಮಾಡಲು ಸೂಚನೆ ಜಾರಿಯಾದ ಮೇಲೆ NRC ಯ ಮೊದಲ ಹಂತ ಪ್ರಾರಂಭವಾಯಿತೆಂದೇ ಅರ್ಥ.

4. ಈ ನಿಟ್ಟಿನಲ್ಲಿ ಏನ್ ಪಿ ಆರ್ ಮಾಡಲು 2019ರ ಆಗಸ್ಟ್ ತಿಂಗಳಲ್ಲೇ ಮೋದಿ ಸರ್ಕಾರ ನೋಟಿಫಿಕೇಶನ್ ಜಾರಿ ಮಾಡಿದೆ. ಅರ್ಥಾತ್ NRC ಮಾಡುವ ಮೊದಲ ಹಂತದ ಪ್ರಕ್ರಿಯೆಗೆ ಮೋದಿ ಸರ್ಕಾರ ಚಾಲನೆ ಕೊಟ್ಟಾಗಿದೆ. ಆದ್ದರಿಂದ ಈಗ NRC ಮಾಡಲು ಇನ್ನು ತೀರ್ಮಾನ ತೆಗೆದುಕೊಂಡಿಲ್ಲ ಎನ್ನುವ ಹೇಳಿಕೆಗೆ ಅರ್ಥವೇ ಇಲ್ಲ. ಅದು ಜನರನ್ನು ಮೋಸಗೊಳಿಸವ ಮಾರ್ಗವಾಗಿದೆ.

5. ಆದ್ದರಿಂದ ಜನರು ಸರ್ಕಾರದ ಈ ಮೋಸಕ್ಕೆ ಬಲಿಯಾಗದೆ NRCಯ ತಾಯಿಯಾಗಿರುವ NPR ಅನ್ನು ರದ್ದುಗೊಳಿಸಲು ಹೋರಾಟವನ್ನು ತೀವ್ರಗೊಳಿಸಬೇಕಿದೆ. ಏಕೆಂದರೆ ... NPR ಇಲ್ಲದೆ NRC ಇಲ್ಲ. NRC ಇಲ್ಲವೆಂದರೆ CAAಗೆ ಹೆಚ್ಚು ಅರ್ಥವಿಲ್ಲ. ಇದು ಅಸಲಿ ಕ್ರೋನಾಲಜಿ ಯಾಗಿದೆ. ಆದ್ದರಿಂದ ಸರ್ಕಾರದ ಯಾವುದೇ ಸುಳ್ಳುಗಳಿಗೆ ಬಲಿಯಾಗದೆ ನಮ್ಮೆಲ್ಲರ ಹೋರಾಟವನ್ನು NPR  ರದ್ದುಗೊಳಿಸುವತ್ತ ಕೇಂದ್ರೀಕರಿಸಬೇಕೆಂದು ಮನವಿ ಮಾಡುತ್ತೇನೆ.

ಶಿವಸುಂದರ್

share
ಶಿವಸುಂದರ್
ಶಿವಸುಂದರ್
Next Story
X