ಎತ್ತಿನಗಾಡಿಗೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು: ಗಾಬರಿಗೊಂಡ ಎತ್ತಿನಗಾಡಿ ಮಾಲಕ ಆತ್ಮಹತ್ಯೆ
ಮಂಡ್ಯ, ಫೆ.5: ಎತ್ತಿನ ಗಾಡಿಗೆ ಬೈಕ್ ಢಿಕ್ಕಿಯಾಗಿ ಸವಾರ ಸಾವಿಗೀಡಾದ ಹಿನ್ನೆಲೆಯಲ್ಲಿ ಗಾಬರಿಗೊಂಡು ಎತ್ತಿನಗಾಡಿ ಮಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಅಕ್ಮಲ್ ಹುಂಡಿ ಗ್ರಾಮದ ಬಳಿ ನಡೆದಿದೆ.
ಪೂರಿಗಾಲಿ ಗ್ರಾಮದ ಬಳಿ ಎತ್ತಿನಗಾಡಿಗೆ ಬೈಕ್ ಢಿಕ್ಕಿ ಹೊಡೆದಿದ್ದರಿಂದ ಯುವಕ ಮಹೇಶ(23) ಸಾವಿಗೀಡಾಗಿದ್ದ. ಮುಡುಕುತೊರೆ ಜಾತ್ರೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಯುವಕನ ಸಾವಿನಿಂದ ಗಾಬರಿಗೊಂಡ ಎತ್ತಿನಗಾಡಿಯ ಮಾಲಕ ಅಕ್ಮಲ್ ಹುಂಡಿ ಗ್ರಾಮದ ಬಸವಣ್ಣ(55) ಎಂಬವರು ತನ್ನ ಮನೆಯ ಮುಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬೆಳಕವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story