Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸರಕಾರದ ಬೊಕ್ಕಸಕ್ಕೆ ಸಂಘಪರಿವಾರದ ಕಣ್ಣು

ಸರಕಾರದ ಬೊಕ್ಕಸಕ್ಕೆ ಸಂಘಪರಿವಾರದ ಕಣ್ಣು

ಕೃಷಿಕ ಎ.ವಿ. ಶೃಂಗೇರಿಕೃಷಿಕ ಎ.ವಿ. ಶೃಂಗೇರಿ9 Feb 2020 11:53 PM IST
share

ಮಾನ್ಯರೇ,

ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದವರಿಗೆ ಪಿಂಚಣಿ ಕೊಡಲು ರಾಜ್ಯ ಸರಕಾರ ಚಿಂತನೆ ಮಾಡುತ್ತಿದೆಯಂತೆ. ಈ ತರದ ಯೋಜನೆ ಆರೆಸ್ಸೆಸ್ ಬಿಜೆಪಿ ಆಡಳಿತದ ಕೆಲವು ರಾಜ್ಯಗಳದಲ್ಲಿ ಜಾರಿಗೆ ಬಂದಿದೆ. ನಮ್ಮಲ್ಲಿ ಆರೆಸ್ಸೆಸ್‌ನ ಒಂದು ಗುಂಪು ಈ ಪಿಂಚಣಿಗೆ ವಿರೋಧ ಮಾಡಿದೆಯಂತೆ. ನಾವು ಮಾಡಿದ ಹೋರಾಟ ದೇಶಕ್ಕಾಗಿ, ಪಿಂಚಣಿಗಾಗಿ ಅಲ್ಲ ಅನ್ನುವುದು ಅವರ ನಿಲುವು.

ಉತ್ತರ ಪ್ರದೇಶದಲ್ಲಿ ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದರು ಎನ್ನಲಾಗುವ ವ್ಯಕ್ತಿಗಳಿಗೆ 25,000 ರೂ. ಪಿಂಚಣಿ ನೀಡಲಾಗುತ್ತದೆಯಂತೆ. ಜನರ ಹಣವನ್ನು ಸರಕಾರದ ಮೂಲಕ ಆರೆಸ್ಸೆಸ್/ಬಿಜೆಪಿ ಹೇಗೆ ತನ್ನ ಕಾರ್ಯಕರ್ತರು, ನಾಯಕರನ್ನು ಬೆಳೆಸಲು ಬಳಸುತ್ತಿದೆ ಎನ್ನುವುದಕ್ಕೆ ಇದು ಒಳ್ಳೆಯ ಉದಾಹರಣೆ. ಇನ್ನೊಂದು ಉದಾಹರಣೆ, ಸಾವಯವ ಕೃಷಿಗೆ ಬೆಂಬಲವೆಂದು ಕೇಂದ್ರ ಸರಕಾರ ಹಿಂದಿನ ಅವಧಿಯಲ್ಲಿ ಯೋಜನೆಯೊಂದನ್ನು ಜಾರಿಗೆ ತಂದಿದೆ. ಇದು ಪಾರಂಪರಿಕ ಕೃಷಿ ಮಾದರಿಯನ್ನು ಅನುಸರಿಸುವ ರೈತರಿಗೆ ಹಣಕಾಸಿನ ಸಹಾಯಧನ ಕೊಡುವ ಯೋಜನೆ. ಇದಕ್ಕೆ ಪರಂಪರಾಗತ ಕೃಷಿ ಸಂಚಯಿನಿ ಯೋಜನೆ ಅಂತೇನೋ ಹೆಸರು ಇಟ್ಟುಕೊಂಡಿದ್ದಾರೆ. ಆದರೆ ಆ ಯೋಜನೆಯಲ್ಲಿ ಪಟ್ಟಿಮಾಡಿರುವ ಸಾವಯವ ಕೃಷಿ ಮಾದರಿಯನ್ನು ನೀವು ನೋಡಿದರೆ ಅರ್ಥವಾಗುತ್ತದೆ ಅದರಲ್ಲಿರುವ ಯಾವುದೇ ಕೃಷಿ ಮಾದರಿ ಈ ದೇಶದ ಸಾಮಾನ್ಯ ಕೃಷಿಕರು ಪಾಲನೆ ಮಾಡುತ್ತಿಲ್ಲವೆಂದು. ಅದರಲ್ಲಿರುವ ಅವೈಜ್ಞಾನಿಕ ಕೃಷಿ ಪದ್ಧತಿಯನ್ನು ಆರೆಸ್ಸೆಸ್ ಬಿಜೆಪಿ ಬೆಂಬಲಿತ ಅಥವಾ ಆ ಸಿದ್ಧಾಂತದ ಮೇಲೆ ಒಲವಿರುವ ಒಂದಿಷ್ಟು ಆಶ್ರಮ, ದೇವ/ದೆವ್ವ-ಮಾನವ ಗುಂಪುಗಳು ಮಾಡುತ್ತಾ ಇವೆ.

ಕೊಲ್ಲೂರು ಮೂಕಾಂಬಿಕಾ ಮುಜರಾಯಿ ದೇವಸ್ಥಾನದಿಂದ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಶಾಲೆ ಹಾಗೂ ಪುಣಚ ಶ್ರೀ ದೇವಿ ವಿದ್ಯಾಕೇಂದ್ರ ಶಾಲೆಗೆ ಸಹಾಯಧನ ಕೊಡುವ ಒಂದು ಸುತ್ತೋಲೆ ಬಿಜೆಪಿ-ಜೆಡಿಎಸ್ ಸರಕಾರ 2007-08ರಲ್ಲಿ ಬಂದಾಗ ಹೊರಡಿಸಲಾಗಿತ್ತು. ಆ ಸುತ್ತೋಲೆ ಕಾನೂನು ಬಾಹಿರವೆಂದು 2017ರಲ್ಲಿ ಹಿಂದಕ್ಕೆ ಪಡೆಯಲಾಯಿತು. ಈ ಹತ್ತು ವರ್ಷ ಅವಧಿಯಲ್ಲಿ ಎರಡು ಶಾಲೆಗೆ 2.32 ಕೋಟಿ ಹಣ ಹೋಗಿದೆ. ಹೀಗೆ ಸರಕಾರದ ಅನುದಾನ ಪಡೆಯುವ ಶಾಲೆಗಳು, ಬೇರೆ ಬೇರೆ ಹೆಸರಿನ ಸಂಸ್ಥೆಗಳು (ಕಲೆ, ಧಾರ್ಮಿಕ, ಗಿರಿಜನ ಇತ್ಯಾದಿ) ಸಾವಿರಾರು ಇವೆ. ಈ ಸಂಸ್ಥೆಗಳೆಲ್ಲಾ ಒಟ್ಟಾಗಿ ಕೆಲಸ ಮಾಡುವುದು ಹಿಂದೂ ರಾಷ್ಟ್ರದ ಸ್ಥಾಪನೆಗೆ. ಬಿಡಿಬಿಡಿಯಾಗಿ ತಮ್ಮ ಸಂಸ್ಥೆಯ ಗುರಿಗೆ ಶ್ರಮಿಸುತ್ತವೆ ಹಾಗೂ ಬಿಡಿಬಿಡಿ ಉದ್ದೇಶಗಳಿಗೆ ಜನರನ್ನು ಒಟ್ಟುಮಾಡಿ ತಮ್ಮ ದೂರಗಾಮಿ ಉದ್ದೇಶವನ್ನು ಸಾಧಿಸಲು ಪ್ರಯತ್ನಿಸುತ್ತಿವೆ. ಇದನ್ನು ಅರ್ಥಮಾಡಿಕೊಳ್ಳದೆ ಅಂತಹ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಥವಾ ಶಾಲೆಗೆ ಮಕ್ಕಳನ್ನು ಕಳಿಸುವ ಕೆಲಸ ಜನ ಮಾಡುತ್ತಾರೆ. ಈ ಕುರಿತು ಜನಜಾಗೃತಿ ಮುಖ್ಯ.

share
ಕೃಷಿಕ ಎ.ವಿ. ಶೃಂಗೇರಿ
ಕೃಷಿಕ ಎ.ವಿ. ಶೃಂಗೇರಿ
Next Story
X