Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ9 Feb 2020 11:58 PM IST
share
ಓ ಮೆಣಸೇ...

ಸಿಎಎ ವಿರೋಧಿ ಪ್ರತಿಭಟನೆ ಆಕಸ್ಮಿಕ ಅಲ್ಲ, ವ್ಯವಸ್ಥಿತ - ನರೇಂದ್ರ ಮೋದಿ, ಪ್ರಧಾನಿ.
ಹೌದು. ಅದಕ್ಕಾಗಿ ತಾವು ತುಂಬಾ ಶ್ರಮ ಪಟ್ಟಿದ್ದೀರಿ.

---------------------

ರಾಷ್ಟ್ರ ಭಕ್ತಿ ಜಾಗೃತಗೊಳಿಸುವ ಶಕ್ತಿ ಯೋಗಕ್ಕಿದೆ - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ.

ಶವಾಸನಗಳ ಮೂಲಕವೇ ದೇಶಭಕ್ತಿಯನ್ನು ಹರಡಿ ಪ್ರಧಾನಿಯಾದವರು ನಮ್ಮಲ್ಲಿದ್ದಾರೆ.

---------------------

 ದಿಲ್ಲಿ ಮುಖ್ಯಮಂತ್ರಿ, ಅರವಿಂದ ಕೇಜ್ರಿವಾಲ್ ಓರ್ವ ಭಯೋತ್ಪಾದಕ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ - ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ.
ಬಹುಶಃ ಮೋದಿಯ ಎದೆಯೊಳಗೆ ಭಯ ಹುಟ್ಟಿಸಿದ ಕಾರಣಕ್ಕಿರಬೇಕು.

---------------------

ಮೂರು ದಿನದೊಳಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಗುಣಮುಖರಾಗದಿದ್ದರೆ ಕುದ್ರೋಳಿ ದೇಗುಲ ಪ್ರವೇಶಿಸುವುದಿಲ್ಲ - ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ.
ಒಟ್ಟಿನಲ್ಲಿ ನೀವಿನ್ನೂ ಗುಣಮುಖರಾಗಿಲ್ಲ ಎನ್ನುವುದನ್ನು ಇದು ತಿಳಿಸುತ್ತದೆ.

---------------------

ಕೊರೋನ ರೋಗಕ್ಕೆ ಆಯುರ್ವೇದದಲ್ಲಿ ಔಷಧವಿದೆ - ಶ್ರೀರಾಮುಲು, ಸಚಿವ.
ನೀವು ಚೀನಾಕ್ಕೆ ಹೋಗಿ ಯಾಕೆ ಒಂದು ಆಸ್ಪತ್ರೆ ತೆರೆಯಬಾರದು?

---------------------

ವಸಂತ ಕಾಲ ಬಂದಾಗಲೇ ಕಾಗೆಯೋ ಕೋಗಿಲೆಯೋ ಎಂದು ಗೊತ್ತಾಗೋದು - ಸಿ.ಟಿ.ರವಿ, ಸಚಿವ
ಆದರೆ ರಣಹದ್ದುಗಳಿಗೆ ವಸಂತಕಾಲವೇ ಬರಬೇಕು ಎಂದಿಲ್ಲ

---------------------

ಸದ್ಯದಲ್ಲೇ ಬಿಜೆಪಿಗೆ ಮಾರಿಹಬ್ಬ ಕಾದಿದೆ - ಕುಮಾರಸ್ವಾಮಿ, ಮಾಜಿಮುಖ್ಯಮಂತ್ರಿ.
ಬಲಿಕೊಡುವುದಕ್ಕೆ ಕುರಿಯೊಂದು ಬೇಕಾಗಿದೆಯಂತೆ. ಹೋಗುತ್ತೀರಾ?

---------------------

ನಮ್ಮ ಸಿನೆಮಾ ನಟ-ನಟಿಯರು ಮನಸ್ಸು ಮಾಡಿದರೆ ಕನ್ನಡ ಶಾಲೆಗಳಿಗೆ ಮರುಜೀವ ನೀಡಬಹುದು - ಎಚ್.ಎಸ್ ವೆಂಕಟೇಶ ಮೂರ್ತಿ, ಸಾಹಿತಿ.
ಸಂಸ್ಕೃತದಲ್ಲಿ ಸಿನೆಮಾ ಮಾಡುವ ಮೂಲಕವಾಗಿರಬಹುದೇ?

---------------------

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿಚಾರದಲ್ಲಿ ಯಾರಿಗಾದರೂ ಅನ್ಯಾಯವಾದರೆ ನಾನು ಬಾಧಿತರ ಪರ ನಿಲ್ಲುವೆ - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ.
ಅಂದರೆ ಅನ್ಯಾಯವಾಗುವವರಿಗೆ ಕಾಯಿರಿ ಎಂದು ಹೇಳುತ್ತಿದ್ದೀರಿ.

---------------------

ಗೋವು ಹತ್ಯೆ ಗೈಯುವ ಮನುಷ್ಯರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಅದೇ ರೀತಿ ಗೋವನ್ನು ಕೊಲ್ಲುವ ಹುಲಿಗೂ ಶಿಕ್ಷೆ ಕೊಡಿ - ಚರ್ಚಿಲ್ ಅಲೆಮಾವೊ, ಗೋವಾ ಶಾಸಕ.
ಒಬ್ಬೊಬ್ಬರಾಗಿ ಗೋರಕ್ಷಕರನ್ನು ಹುಲಿಗಳಿರುವ ಕಾಡಿಗೆ ಕಳುಹಿಸಿಕೊಟ್ಟರೆ ಹೇಗೆ?

---------------------

ಆರ್ಥಿಕ ಅಸಮಾನತೆಯೇ ಇಲ್ಲದ ರಾಮ ರಾಜ್ಯದತ್ತ ಪಯಣ ಆರಂಭಿಸುವ ಸಮಯ ಈಗ ಶುರುವಾಗಿದೆ - ಉಮಾಭಾರತಿ, ಬಿಜೆಪಿ ನಾಯಕಿ.
ಪುಷ್ಪಕ ವಿಮಾನದ ಟಿಕೆಟ್ ದರ ಎಷ್ಟು?

---------------------

ಸಿಎಎ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಿ ಮುಸ್ಲಿಮರಲ್ಲಿ ಭಯ ಹುಟ್ಟಿಸಲಾಗಿದೆ - ರಜನಿಕಾಂತ್, ನಟ.

ಐಟಿ ದಾಳಿಯ ಕುರಿತಂತೆ ನಿಮ್ಮಳಗೆ ಸೃಷ್ಟಿಸಿರುವ ಭಯದ ಬಗ್ಗೆ ಮೊದಲು ಮಾತನಾಡಿ.

---------------------

ಜಮ್ಮು- ಕಾಶ್ಮೀರದ 370 ವಿಧಿ ರದ್ದತಿಯಿಂದ ಪ್ರಧಾನಿ ಮೋದಿ ಮಾರಕ ತಪ್ಪು ಎಸಗಿದ್ದಾರೆ - ಇಮ್ರಾನ್ ಖಾನ್, ಪಾಕ್ ಪ್ರಧಾನಿ.
ಅವರನ್ನು ಪ್ರಧಾನಿ ಮಾಡಿದ ತಪ್ಪಿಗೆ ತೆತ್ತ ಬೆಲೆ.

---------------------

ಸೋತವರಿಗೆಲ್ಲ ಮಂತ್ರಿ ಸ್ಥಾನ ನೀಡುತ್ತಾ ಹೋದರೆ ಬಿಜೆಪಿಗೆ ಮುಜುಗರವಾಗುತ್ತದೆ - ರೇಣುಕಾಚಾರ್ಯ, ಶಾಸಕ.
ಮುತ್ತಿಟ್ಟವರಿಗೆಲ್ಲ ಸಚಿವ ಸ್ಥಾನಕೊಟ್ಟರೆ ಮುಜುಗರವಾಗುವುದಿಲ್ಲವೇ?

---------------------

ಕನ್ನಡಾಂಬೆಯನ್ನು ತಾಯಿ ಭಾರತೀಯ ವಿರುದ್ಧ ಎತ್ತಿ ಕಟ್ಟುವ ಷಡ್ಯಂತ್ರವನ್ನು ಸಹಿಸಲು ಸಾಧ್ಯವಿಲ್ಲ - ಸಿ.ಟಿ.ರವಿ, ಸಚಿವ.
ಕನ್ನಡಾಂಬೆಯ ವಿರುದ್ಧ ಪೆಟ್ರೋಲ್ ಬಾಂಬ್ ಹಾಕಿದವರನ್ನು ಸಹಿಸಬಹುದೇ?

---------------------

ಜನರು ಸಹಕರಿಸದಿದ್ದರೆ ಕನ್ನಡ ಶಾಲೆಗಳ ಉಳಿವು ಕಷ್ಟ - ಯಡಿಯೂರಪ್ಪ, ಮುಖ್ಯಮಂತ್ರಿ.
ಮೊದಲು ಸರಕಾರ ಉಳಿಸಲು ಸಚಿವರು ಸಹಕರಿಸುತ್ತಾರೆಯೇ ಎನ್ನುವುದರ ಬಗ್ಗೆ ಯೋಚನೆ ಮಾಡಿ.

---------------------

ಲವೊಮ್ಮೆ ನಾವು ರಾಜಕೀಯ ಸನ್ಯಾಸವನ್ನು ಸ್ವೀಕರಿಸಬೇಕಾಗುತ್ತದೆ - ರೇಣುಕಾಚಾರ್ಯ, ಶಾಸಕ.
ಕಳ್ಳಬೆಕ್ಕು ಸ್ವೀಕರಿಸಿದ ಹಾಗೆ.

---------------------  

ಮುಂದೆ ನಾನು ಕರ್ನಾಟಕದ ಮುಖ್ಯಮಂತ್ರಿಯಾಗುತ್ತೇನೆ - ಉಮೇಶ್ ಕತ್ತಿ, ಶಾಸಕ.
ಯಾರ ಕುತ್ತಿಗೆಗೆ ಕತ್ತಿ ಇಡಲು ಹೊರಟಿದ್ದೀರಿ?

--------------------

ಇಂಟರ್‌ನೆಟ್ ಜನರ ಮೂಲಭೂತ ಹಕ್ಕಲ್ಲ - ರವಿಶಂಕರ ಪ್ರಸಾದ್, ಕೇಂದ್ರ ಸಚಿವ.
  ಕನಿಷ್ಠ ಬದುಕುವ ಹಕ್ಕನ್ನಾದರೂ ಉಳಿಸಿ.

---------------------
ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕಾಂಗ್ರೆಸ್-ಆಪ್‌ನ ಪಾಲುದಾರಿಕೆ ಇದೆ - ಅಮಿತ್ ಶಾ, ಕೇಂದ್ರ ಸಚಿವ.
ಸಿಎಎ ಕಾಯ್ದೆ ತರುವ ಮೂಲಕ ನಿಮ್ಮ ಪಾಲುದಾರಿಕೆಯೂ ಇದೆಯಲ್ಲವೆ?

---------------------
ಅಧಿಕಾರಿಗಳು ಹಳ್ಳಿಗಳಿಗೆ ಹೋಗದಿದ್ದರೆ ಮನೆಗೆ ಹೋಗಲಿ - ಆರ್.ಅಶೋಕ್, ಸಚಿವ.
ಹಳ್ಳಿಗಳಲ್ಲಿ ಜನರೇ ಇಲ್ಲ ಎನ್ನುವಾಗ ಅವರು ಹೋಗಿ ಏನು ಮಾಡುವುದು?

---------------------

ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಭಾರದಿಂದಲೇ ಕುಸಿಯುವುದು ಖಂಡಿತ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.
ಆರೆಸ್ಸೆಸ್‌ನ ಭಾರವೇ ಸಾಕು.

---------------------

ಶೃಂಗೇರಿ ಸಾಹಿತ್ಯ ಸಮ್ಮೇಳನದ ಅಹಿತಕರ ಘಟನೆಗಳ ಬಗ್ಗೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ - ಮನು ಬಳಿಗಾರ್, ಕಸಾಪ ಅಧ್ಯಕ್ಷ.
ಅಂದರೆ ಪೆಟ್ರೋಲ್ ಬಾಂಬ್ ಬೆದರಿಕೆ ಬಂದಿದ್ದು ನಿಮಗೆ ಅಂತೀರಾ?

---------------------

ಪಕ್ಷಾಂತರ ಮಾಡಿದ ಶಾಸಕರೆಲ್ಲರೂ ಜೊತೆಗಿದ್ದೇವೆ ಎಂದು ತೋರಿಸಲು ಯಾವಾಗಲೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಇರಲಿಕ್ಕೆ ಆಗುತ್ತದೆಯೇ? - ಎಚ್.ವಿಶ್ವನಾಥ್, ಮಾಜಿ ಶಾಸಕ.
ರೆಸಾರ್ಟ್‌ನಲ್ಲಿ ಮಾತ್ರ ತಬ್ಬಿಕೊಳ್ಳುವುದು ಎಂದು ಒಪ್ಪಂದ ಆಗಿರಬೇಕು.

---------------------
ಡಿಸಿಎಂ ಹುದ್ದೆ ಬಗ್ಗೆ ನಾನು ಇನ್ನು ಮಾತನಾಡೋಲ್ಲ - ಶ್ರೀರಾಮುಲು, ಸಚಿವ
ನೇರವಾಗಿ ಸಿಎಂ ಹುದ್ದೆ ಬಗ್ಗೆ ಮಾತನಾಡಿ

share
ಪಿ.ಎ.ರೈ
ಪಿ.ಎ.ರೈ
Next Story
X