Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ದೇಶದ ಒಳದನಿಯ ಆಲಿಸುವ ಪ್ರಯತ್ನ

ದೇಶದ ಒಳದನಿಯ ಆಲಿಸುವ ಪ್ರಯತ್ನ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ10 Feb 2020 12:16 AM IST
share
ದೇಶದ ಒಳದನಿಯ ಆಲಿಸುವ ಪ್ರಯತ್ನ

ಕಾಲಕ್ಕೆ ಒಂದು ಅಭೂತಪೂರ್ವ ಶಕ್ತಿಯಿದೆ. ದಮನಗಳು ಆರಂಭವಾದಂತೆಯೇ ಅದರೊಳಗಿಂದಲೇ ಪ್ರತಿರೋಧದ ಶಕ್ತಿಗಳು ಹುಟ್ಟುತ್ತವೆ. ಇಂತಹವರು ಅದರ ನಾಯಕರಾಗಿದ್ದರೆ ಚೆನ್ನಾಗಿತ್ತು ಎಂದು ನಾವು ಅವರೆಡೆಗೆ ಕತ್ತು ಮಾಡಿ ನೋಡುತ್ತಿದ್ದಂತೆಯೇ, ದಮನಗಳೇ ಹೊಸ ನಾಯಕರನ್ನು ಸೃಷ್ಟಿಸುತ್ತದೆ. ಹತಾಶೆಯಿಂದ ಎಲ್ಲ ಮುಗಿಯಿತೇನೋ ಎಂದು ಕುಳಿತವರನ್ನು ಅಚ್ಚರಿಗೆಗೆೆಡಹುವಂತೆ ನಾಲ್ದಿಕ್ಕಿನಿಂದ ಪ್ರತಿರೋಧಗಳ ಧ್ವನಿ ಮೊಳಗುತ್ತವೆ ಮತ್ತು ಸರ್ವಾಧಿಕಾರಿಯೇ ಆ ಬೆಳವಣಿಗೆಯಿಂದ ಬೆಚ್ಚಿ ಬೆರಗಾಗಬೇಕಾಗುತ್ತದೆ. ಯುಪಿಎ ಆಡಳಿತ ಕಾಲದಲ್ಲಿ ಹುಟ್ಟಿದ ಅಂತಹದೊಂದು ಅನಿರೀಕ್ಷಿತ ನಾಯಕ ಕೇಜ್ರಿವಾಲ್. ಇನ್ನೇನು ಅವರು ಈ ದೇಶದ ವಿರೋಧ ಪಕ್ಷದ ನಾಯಕತ್ವದ ಮುಂದಾಳು ಆಗಿ ಬಿಡುತ್ತಾರೆಯೋ ಎನ್ನುವಾಗ, ದಿಲ್ಲಿಯ ಮುಖ್ಯಮಂತ್ರಿಗಳಾಗಿ ಅದರ ಜಂಜಾಟದೊಳಗೇ ಕಳೆದುಹೋಗುವ ಸನ್ನಿವೇಶ ನಿರ್ಮಾಣವಾಯಿತು. ಆದರೂ ಕಾಂಗ್ರೆಸ್‌ಗಿಂತ ಪ್ರಬಲವಾಗಿ ಪ್ರಧಾನಿ ಮೋದಿಯನ್ನು ಎದುರಿಸಿದ್ದು ಕೇಜ್ರಿವಾಲ್ ಎನ್ನುವುದನ್ನು ಮರೆಯಲಾಗುವುದಿಲ್ಲ. ಆದರೆ ಮುಖ್ಯಮಂತ್ರಿ ಸ್ಥಾನ ಅವರಿಗೆ ಕೆಲವು ಮಿತಿಗಳನ್ನು ಕಟ್ಟಿ ಹಾಕಿತು.

 ಮೋದಿ ಆಡಳಿತ ಪರೋಕ್ಷ ತುರ್ತು ಪರಿಸ್ಥಿತಿಯನ್ನು ಹೇರಿ ದೇಶವನ್ನು ನಿಯಂತ್ರಿಸ ತೊಡಗಿದಂತೆಯೇ, ಹಿರಿಯ ರಾಜಕಾರಣಿಗಳೆಲ್ಲ ಬಾಯಿ ಕಟ್ಟಿ ಕುಳಿತುಕೊಳ್ಳಬೇಕಾದ ಸನ್ನಿವೇಶ ನಿರ್ಮಾಣವಾಯಿತು. ಇದೇ ಸಂದರ್ಭದಲ್ಲಿ ‘ರೋಹಿತ್ ವೇಮುಲಾ’ ಆತ್ಮಹತ್ಯೆ ಪ್ರಕರಣವೊಂದು ಇಡೀ ದೇಶವನ್ನು ತಲ್ಲಣಗೊಳಿಸಿತು. ಆತನ ಪರವಾಗಿ ಜೆಎನ್‌ಯುವಿನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ದೇಶದ್ರೋಹದ ಆರೋಪದಲ್ಲಿ ಜೈಲು ಸೇರಿಸಿದ್ದೇ ತಡ, ಆ ಜೈಲಿನಿಂದ ಒಬ್ಬ ನಾಯಕ ಹುಟ್ಟಿದ. ಆತನೇ ಕನ್ಹಯ್ಯ. ವಿಶೇಷವೆಂದರೆ ಈ ತರುಣನ ಮೂಲಕ ದೇಶಾದ್ಯಂತ ಮೂಲೆ ಮೂಲೆಗಳಲ್ಲಿ ಯುವನಾಯಕರು ಹುಟ್ಟ ತೊಡಗಿದರು. ಉನಾ ದಲಿತರ ದೌರ್ಜನ್ಯ ಜಿಗ್ನೇಶ್ ಮೇವಾನಿಯಂತಹ ನಾಯಕನನ್ನು ಹುಟ್ಟಿಸಿತು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಇಡೀ ದೇಶ ಬಂಡೆದ್ದಿರುವುದು ಇಂತಹ ಯುವಕರ ನೇತೃತ್ವದಲ್ಲಿ ಎನ್ನುವುದೇ ಭಾರತದ ರಾಜಕೀಯಕ್ಕೆ ಸಿಕ್ಕಿದ ಅಚ್ಚರಿಯ ತಿರುವು. ಹಿರಿಯ ಲೇಖಕರಾಗಿರುವ ಎನ್. ಎಸ್. ಶಂಕರ್ ಅವರು ಆ ಇಬ್ಬರು ತರುಣರನ್ನು ಸಂದರ್ಶನ ಮಾಡುವ ಮೂಲಕ, ಇಂದಿನ ರಾಜಕೀಯ ಸಂದಿಗ್ಧತೆಯನ್ನು ಬಿಚ್ಚಿಡುವ ಪ್ರಯತ್ನವನ್ನು ಮಾಡಿದ್ದಾರೆ. ಆ ಸಂದರ್ಶನವನ್ನು ಕಿರುಕೃತಿಯಾಗಿ ಬಹುರೂಪಿ ಪ್ರಕಾಶನ ಹೊರತಂದಿದೆ.

  ಕೃತಿಯಲ್ಲಿ ಕನ್ಹಯ್ಯ ಮತ್ತು ಜಿಗ್ನೇಶ್ ಅವರ ಹೋರಾಟ ದಾರಿಯ ಕಿರು ಪರಿಚಯ ಇದೆ. ಬಳಿಕ ಅವರ ಮುಂದೆ ವರ್ತಮಾನದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂದರ್ಶನ ಮಾಡಲಾಗಿದೆ. ಇಬ್ಬರು ಯುವ ನಾಯಕರ ಒಳದನಿಗಳು ಮಾತ್ರವಲ್ಲ, ಈ ದೇಶದ ಒಳದನಿಯನ್ನು ಆಲಿಸುವುದಕ್ಕಾಗಿಯೂ ನಾವು ಈ ಕಿರುಕೃತಿಯನ್ನು ಓದಬೇಕಾಗಿದೆ. ಪುಟ್ಟ ಕೃತಿಯಾದರೂ, ಇದು ಕೊಡುವ ರಾಜಕೀಯ ಒಳನೋಟ ಬಹುದೊಡ್ಡದು.

ಕೃತಿಯ ಒಟ್ಟು ಪುಟಗಳು 52. ಮುಖಬೆಲೆ 50 ರೂಪಾಯಿ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X