ಎಸ್ಸೆಸ್ಸೆಫ್ ಕೊಳಂಬೆ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ
![ಎಸ್ಸೆಸ್ಸೆಫ್ ಕೊಳಂಬೆ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ ಎಸ್ಸೆಸ್ಸೆಫ್ ಕೊಳಂಬೆ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ](https://www.varthabharati.in/sites/default/files/images/articles/2020/02/12/231481-1581514508.jpeg)
ವಿಟ್ಲ, ಫೆ.10: ಎಸ್ಸೆಸ್ಸೆಫ್ ಕೊಳಂಬೆ ಶಾಖೆಯ ಮಹಾಸಭೆ ಕೊಳಂಬೆ ಮದ್ರಸ ಹಾಲ್ ನಲ್ಲಿ ನಡೆಯಿತು.ನಿಕಟಪೂರ್ವ ಅಧ್ಯಕ್ಷ ಅನ್ಸಾರ್ ಟಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನು ಖಾಸಿಂ ಸಖಾಫಿ ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ಶಾಹೀರ್ ಕೊಳಂಬೆ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳನ್ನು ವಾಚಿಸಿದರು. ವೀಕ್ಷಕರಾಗಿ ರಹೀಮ್ ಸಖಾಫಿ, ಮುಖ್ಯ ಅತಿಥಿಯಾಗಿ ಅಬ್ದುರ್ರಝಾಕ್ ಮುಸ್ಲಿಯಾರ್ ಭಾಗವಹಿಸಿದ್ದರು.
ಇದೇ ವೇಳೆ 2020-21ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅನ್ಸಾರ್ ಟಿ.ಕೆ., ಪ್ರಧಾನ ಕಾರ್ಯದರ್ಶಿಯಾಗಿ ಶಾಹೀರ್ ಕೊಳಂಬೆ, ಕೋಶಾಧಿಕಾರಿಯಾಗಿ ಫಾರಿಸ್ ದಾಸರಬೆಟ್ಟು, ಉಪಾಧ್ಯಕ್ಷರಾಗಿ ಇಕ್ಬಾಲ್ ಕೊಳಂಬೆ, ಫಾರೂಕ್ ದಾಸರಬೆಟ್ಟು, ಜೊತೆ ಕಾರ್ಯದರ್ಶಿಗಳಾಗಿ ಫಯಾಝ್ .ಡಿ, ಸ್ವರೂಪ್ ಡಿ., ಸೆಕ್ಟರ್ ಕೌನ್ಸಿಲರ್ ಗಳಾಗಿ ಶಾಕೀರ್ ಕೊಳಂಬೆ, ರಮೀಝ್ ಟಿ.ಕೆ., ಆಸೀರ್ ಕೊಳಂಬೆ, ಫಾರಿಸ್ ದಾಸರಬೆಟ್ಟು ಆಯ್ಕೆಯಾಗಿದ್ದಾರೆ.
ಕೆ.ಸಿ.ಎಫ್. ಸದಸ್ಯರಾದ ಬಶೀರ್ ಟಿ.ಕೆ., ಸಿದ್ದೀಕ್ ಕೊಳಂಬೆ, ಅಶ್ರಫ್ ಕೊಳಂಬೆ ಉಪಸ್ಥಿತರಿದ್ದರು.ನೂತನ ಕಾರ್ಯದರ್ಶಿ ಸ್ವರೂಪ್ ದಾಸರಬೆಟ್ಟು ವಂದಿಸಿದರು.