ಮೀನುಗಾರರ ಬಂಧನ: ಫೆ.15ರಂದು ತಹಶೀಲ್ದಾರ್ ವಿಚಾರಣೆ
ಉಡುಪಿ, ಫೆ.14: ಮಹಾರಾಷ್ಟ್ರದ ಮಲ್ವಾನ್ ಪ್ರದೇಶದಲ್ಲಿ ಬಂಧನಕ್ಕೆ ಒಳ ಗಾದ ಮಲ್ಪೆಯ ಶ್ರೀಲಕ್ಷ್ಮೀ ಮೀನುಗಾರಿಕೆ ಬೋಟಿನ ಏಳು ಮಂದಿ ಮೀನು ಗಾರರನ್ನು ವಿಚಾರಣೆ ಹಿನ್ನೆಲೆಯಲ್ಲಿ ಫೆ.15ರಂದು ಸಿಂಧುದುರ್ಗದ ತಹಶೀಲ್ದಾರ್ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಕುರಿತು ತಹಶೀಲ್ದಾರ್ ವಿಚಾರಣೆ ನಡೆಸಿ, ದಂಡದ ಮೊತ್ತವನ್ನು ನಿಗದಿ ಪಡಿಸಬಹುದು. ಅದರ ನಂತರವೇ ದಂಡ ಪಾವತಿಸಿ, ಬೋಟು ಹಾಗೂ ಏಳು ಮಂದಿ ಮೀನುಗಾರರನ್ನು ಬಿಡುಗಡೆ ಮಾಡಬಹುದಾಗಿದೆ ಎಂದು ಸಿಂಧುದುರ್ಗ ಜಿಲ್ಲೆಯ ದೇವಗಡದಲ್ಲಿರುವ ಬೋಟಿನ ಮಾಲಕ ಕುಂದಾಪುರದ ಅಂಕಿತ್ ಶೆಟ್ಟಿ ತಿಳಿಸಿದ್ದಾರೆ.
Next Story





