Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ17 Feb 2020 10:09 AM IST
share
ಓ ಮೆಣಸೇ...

ಜೆಡಿಎಸ್‌ನವರು ಎಂದೂ ಭಾರತ್ ಮಾತಾ ಕೀ ಜೈ ಎಂದು ಹೇಳಿಲ್ಲ -ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ.
ನೀವೊಮ್ಮೆ ಜೋರಾಗಿ ಪಂಪ್‌ವೆಲ್ ಮಾತಾ ಕೀ ಜೈ ಅನ್ನಿ ನೋಡೋಣ ?

---------------------
ಬಿಜೆಪಿಯವರು ತಾವು ಹೇಳಲಾಗದ್ದನ್ನು ಆರೆಸ್ಸೆಸ್ ಮೂಲಕ ಹೇಳಿಸುತ್ತಿದ್ದಾರೆ- ಡಿ.ಕೆ.ಶಿವಕುಮಾರ್, ಶಾಸಕ.
ನೀವು ಹೇಳಲಾಗದ್ದನ್ನು ಭಿನ್ನಮತೀಯರ ಕೈಯಲ್ಲಿ ಹೇಳಿಸುತ್ತೀರಲ್ಲ, ಹಾಗೆಯೇ ಇರಬೇಕು.

  ---------------------
  ಗುರುಕುಲದ ರಕ್ಷಣೆ ಸಮಾಜದ ಜವಾಬ್ದಾರಿ - ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘ ಚಾಲಕ.

  ಸರಕಾರಿ ಶಾಲೆಗಳನ್ನು ಮುಚ್ಚಿಸುವ ಮೂಲಕ ಗುರುಕುಲಗಳನ್ನು ತೆರೆಯುವ ಯೋಜನೆ ಇರಬೇಕು.

---------------------
ಕೃಷ್ಣನ ನಾಡಾದ ಭಾರತವನ್ನು ಎಂದಿಗೂ ಕ್ರಿಸ್ತನ ನಾಡು ಮಾಡಲು ಬಿಡುವುದಿಲ್ಲ - ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ನಾಯಕ.
ಈ ನಾಡು ಕ್ರಿಸ್ತನದೂ ಅಲ್ಲ, ಕೃಷ್ಣನದೂ ಅಲ್ಲ ಭೀಮ ಅಂಬೇಡ್ಕರ್ ಅವರದು.

---------------------

 ಜೆಡಿಎಸ್ ಶಾಸಕ ಕೆ.ಎಸ್.ಲಿಂಗೇಶ್ ಅಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದರೆ ಇಂದು ಅವರ ಕ್ಷೇತ್ರದ ಎಲ್ಲ ನೀರಿನ ಟ್ಯಾಂಕ್‌ಗಳು ಭರ್ತಿಯಾಗುತ್ತಿದ್ದವು- ಬಿ.ಸಿ.ಪಾಟೀಲ್, ಸಚಿವ.  

ಅಂದರೆ ಜನರ ಕುಡಿಯುವ ನೀರಿನ ಟ್ಯಾಂಕ್ ಭರ್ತಿಯಾಗಬೇಕಾದರೆ ಆ ಕ್ಷೇತ್ರದ ಶಾಸಕರು ರಾಜೀನಾಮೆ ನೀಡುವುದು ಅಗತ್ಯ ಎಂದಾಯಿತು.

---------------------
ಆರ್ಥಿಕ ಹಿಂಜರಿತವಿದ್ದರೆ ಜನರು ಕುರ್ತಾ, ಧೋತಿ ಬದಲು ಕೋಟು ಧರಿಸುತ್ತಿದ್ದರೇ?- ವೀರೇಂದ್ರ ಸಿಂಗ್, ಬಿಜೆಪಿ ಸಂಸದ.  
ಅಂದರೆ ಏನನ್ನೂ ಧರಿಸದೆ ಬೆತ್ತಲೆ ತಿರುಗಿದಾಗಷ್ಟೇ ಒಪ್ಪಿಕೊಳ್ಳುತ್ತೀರಿ ಎಂದಾಯಿತು.

---------------------

ನನ್ನ ಹೆಂಡತಿಯ ಮೇಲೆ ನಾನು ಸಿಟ್ಟು ಮಾಡಿಕೊಂಡಿಲ್ಲ, ಇನ್ನು ಸಿಎಂ ಯಡಿಯೂರಪ್ಪರ ಮೇಲೆ ಸಿಟ್ಟು ಮಾಡಿಕೊಳ್ಳುತ್ತೇನೆಯೇ?- ಉಮೇಶ್ ಕತ್ತಿ, ಶಾಸಕ.  
ನಿಮ್ಮ ಹೆಸರಲ್ಲಿರುವ ಕತ್ತಿಯೇ ಎಲ್ಲಕ್ಕೂ ಕಾರಣ.

---------------------

ಮೀಸಲಾತಿ ನಿರ್ಮೂಲನೆ ಬಿಜೆಪಿ, ಆರೆಸ್ಸೆಸ್‌ನ ಡಿಎನ್‌ಎ ಯಲ್ಲಿಯೇ ಇದೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ.
ಮೀಸಲಾತಿ ನಿರ್ಮೂಲನೆಯಾಗುತ್ತದೋ ಇಲ್ಲವೋ, ಕಾಂಗ್ರೆಸ್ ಅಂತೂ ನಿರ್ಮೂಲದ ಹಾದಿಯಲ್ಲಿದೆ.

---------------------

ನನಗೂ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದೆ - ಬಿ.ಸಿ.ಪಾಟೀಲ್, ಸಚಿವ.
ಹೊಸ ಸಿನೆಮಾದಲ್ಲಿ ಮುಖ್ಯಮಂತ್ರಿಯಾಗಿ ಅಭಿನಯಿಸಿ ಆಸೆ ತೀರಿಸಿಕೊಳ್ಳಿ.

---------------------
ನನ್ನ ಯೋಗ್ಯತೆಗೆ ಸಚಿವ ಸ್ಥಾನವಲ್ಲ, ಮುಖ್ಯಮಂತ್ರಿ ಸ್ಥಾನವೇ ಸಿಗಬೇಕು -  ಉಮೇಶ್ ಕತ್ತಿ, ಶಾಸಕ.
  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎನ್ನುವ ನಿಮ್ಮ ಹೋರಾಟಕ್ಕೆ ಇದು ಕಾರಣವೇ?

---------------------
ನಾನು ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.
ಆದರೆ ಬೇರೆಯೇ ಹೊಸ ತಪ್ಪನ್ನು ಮಾಡುತ್ತೀರಿ ಎಂದಾಯಿತು.

---------------------

ದಿಲ್ಲಿಯಲ್ಲಿ ಮತ್ತೆ ಆಪ್ ಅಧಿಕಾರಕ್ಕೆ ಬಂದಿರುವುದು ಬಿಜೆಪಿಗೆ ಆದ ಹಿನ್ನಡೆ ಅಲ್ಲ - ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ.
ಪಾಕಿಸ್ತಾನಕ್ಕೆ ಆದ ಹಿನ್ನಡೆ ಎಂದು ಸ್ಪಷ್ಟವಾಗಿ ಹೇಳಿ ಬಿಡಿ.

---------------------
ಬಿಜೆಪಿ ಚುನಾವಣೆಗಳ ಫಲಿತಾಂಶ ಏನೇ ಬಂದರೂ ಸ್ವಾಗತಿಸುತ್ತದೆ- ಸಿ.ಟಿ.ರವಿ, ಸಚಿವ.
  ಸ್ವಾಗತಿಸದೇ ತಿರಸ್ಕರಿಸುವುದಕ್ಕಾಗುತ್ತದೆಯೇ?

---------------------

ಶಾಸಕ ಕುಮಟಳ್ಳಿಗೆ ಸಚಿವ ಸ್ಥಾನ ನೀಡದಿದ್ದರೆ ಸಿಎಂ ಯಡಿಯೂರಪ್ಪ ವಚನ ಭ್ರಷ್ಟರಾಗುತ್ತಾರೆ - ಬಸನಗೌಡ ಪಾಟೀಲ್ ಯತ್ನಾಳ, ಶಾಸಕ.
ಭ್ರಷ್ಟಾತಿ ಭ್ರಷ್ಟರಿಂದಲೇ ರಚನೆಯಾಗಿರುವ ಸರಕಾರದಲ್ಲಿ ವಚನಭ್ರಷ್ಟರಾಗುವುದು ತಪ್ಪೇನಿಲ್ಲ.

---------------------

ಮೂರು ವರ್ಷಗಳಲ್ಲಿ ಕರ್ನಾಟಕವನ್ನು ಸುವರ್ಣ ರಾಜ್ಯ ಮಾಡುವ ಸಂಕಲ್ಪ ಮಾಡಲಾಗಿದೆ - ಎನ್. ರವಿಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ.
ಕರ್ನಾಟಕದ ಹೆಸರು ಬದಲಿಸುವ ಉದ್ದೇಶವಿರಬೇಕು.

---------------------
ಕಾಂಗ್ರೆಸ್‌ಗೆ ಈಗ ಹೋರಾಟದ ಸಮಯ - ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ.

 ಹೋರಾಡುವುದಕ್ಕೆ ಅಲ್ಲಿ ಕಾರ್ಯಕರ್ತರು ಬೇಡವೇ?

---------------------

ದೇಶದಲ್ಲಿ ಪ್ರಧಾನಿ ಮೋದಿಗೆ ಸರಿಸಾಟಿಯಾದ ನಾಯಕ ಯಾರೂ ಇಲ್ಲ - ಉಮಾಭಾರತಿ, ಬಿಜೆಪಿ ನಾಯಕಿ.
ಹೌದು, ಇಷ್ಟು ಬೇಗ ದೇಶವನ್ನು ಮುಳುಗಿಸಿದ ಇನ್ನೊಬ್ಬ ಪ್ರಧಾನಿ ಇರಲು ಸಾಧ್ಯವೇ ಇಲ್ಲ.

---------------------

ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚುವುದು ಸಾಧ್ಯವೇ ಇಲ್ಲ - ಸುನಿಲ್ ಅರೋರಾ, ಮುಖ್ಯ ಚುನಾವಣಾ ಆಯುಕ್ತ.
ಪ್ರಯತ್ನಿಸಿ ವಿಫಲರಾಗಿ ನೀಡಿದ ಹತಾಶ ಹೇಳಿಕೆಯಂತಿದೆ.

---------------------
ಪ್ರಜಾಪ್ರಭುತ್ವ ಹಾಗೂ ಬಹುತ್ವ ವ್ಯವಸ್ಥೆಯಲ್ಲಿ ಭಾರತ - ಅಮೆರಿಕ ಸಮಾನ ದೃಷ್ಟಿಕೋನ ಹೊಂದಿದೆ - ನರೇಂದ್ರ ಮೋದಿ, ಪ್ರಧಾನಿ.
ಹೌದು, ಎರಡೂ ದೇಶಗಳ ನಾಯಕರೂ ಅದರ ಬಗ್ಗೆ ನಂಬಿಕೆಯನ್ನು ಇಟ್ಟಿಲ್ಲ.-

---------------------
ನನ್ನನ್ನು ಸಚಿವನನ್ನಾಗಿ ಮಾಡಿ ಎಂದು ನಾನು ಗೋಗರೆಯುವುದಿಲ್ಲ- ಎಚ್.ವಿಶ್ವನಾಥ್, ಮಾಜಿ ಶಾಸಕ.

ಗೋಗರೆಯುವ ಇನ್ನೊಂದು ವಿಧಾನ ಇದು.

---------------------
 ನೆಲಕ್ಕ ಬಿದ್ದ ಬೀಜ, ಹೃದಯ ಸ್ಪರ್ಶಿ ಮಾತು ಯಾವತ್ತೂ ಉತ್ತಮ ಫಲ ಕೊಡದಿರಲು ಸಾಧ್ಯವಿಲ್ಲ - ಕೋಟ ಶ್ರೀನಿವಾಸ ಪೂಜಾರಿ, ಸಚಿವ.

ಆದರೆ ನೆಲಕ್ಕೆ ಬಿದ್ದ ವಿಷ ಬೀಜ, ಕೋಮುವಾದಿ ಮಾತು ಉತ್ತಮ ಫಲಕೊಡುವುದು ಹೇಗೆ ಸಾಧ್ಯ ?

---------------------
 ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ‘ಗೋಲಿ ಮಾರೋ’, ‘ಇಂಡೋ-ಪಾಕ್ ಮ್ಯಾಚ್’ಗಳಂತಹ ದ್ವೇಷ ಭಾಷಣಗಳಿಂದ ಬಿಜೆಪಿ ಸೋತಿರಬಹುದು - ಅಮಿತ್ ಶಾ, ಕೇಂದ್ರ ಸಚಿವ.
ಇವಿಎಂನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದೇ ಇರುವ ಸಾಧ್ಯತೆಯೂ ಕಾಣುತ್ತದೆ.

---------------------

 ಕಾಂಗ್ರೆಸ್ ಪಕ್ಷವನ್ನು ಉಳಿಸಿ ಬೆಳೆಸಬೇಕಿದ್ದರೆ ಸರ್ಜಿಕಲ್ ಆ್ಯಕ್ಷನ್ ಅನಿವಾರ್ಯ- ವೀರಪ್ಪ ಮೊಯ್ಲಿ, ಕಾಂಗ್ರೆಸ್ ನಾಯಕ.
ಸರ್ಜಿಕಲ್ ದಾಳಿ ನಡೆಸಲು ಮೋದಿಯವರು ತುದಿಗಾಲಲ್ಲಿ ನಿಂತಿದ್ದಾರೆ.

---------------------

ದಿಲ್ಲಿ ಚುನಾವಣೆ ಬೆಂಗಳೂರು ಕಾರ್ಪೊರೇಶನ್ ಮಟ್ಟದ್ದು, ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯ ಇಲ್ಲ - ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ.
ಕೊನೆಗೂ ಬಿಜೆಪಿ ಕಾರ್ಪೊರೇಶನ್ ಕಸದ ಲಾರಿ ಸೇರಿ ಬಿಟ್ಟಿತು ನೋಡಿ.

---------------------

share
ಪಿ.ಎ.ರೈ
ಪಿ.ಎ.ರೈ
Next Story
X