ಪ್ರವಾದಿ ನಿಂದನೆ: ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯದಿಂದ ದೂರು
ಉಪ್ಪಿನಂಗಡಿ: ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)ರನ್ನು ನಿಂದಿಸಿ ಅವಹೇಳನಕಾರಿ ಪದಬಳಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವ ಮಧುಗಿರಿ ಮೋದಿಯನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯ ಸಮಿತಿ ವತಿಯಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.
ವಲಯ ಅಧ್ಯಕ್ಷ ಅಶ್ರಫ್ ಬಾಖವಿ ಮುರ, ಉಪ್ಪಿನಂಗಡಿ ಖತೀಬ್ ನಝೀರ್ ಅಝ್ಹರಿ ಬೊಳ್ಮಿನಾರ್, ಉಪ್ಪಿನಂಗಡಿ ಅಧ್ಯಕ್ಷರಾದ ಮುಸ್ತಫ ಹಾಜಿ ಕೆಂಪಿ, ಯೂಸುಫ್ ಹಾಜಿ ಪೆದಮಲೆ, ಕೆ.ಎಸ್. ಅಬ್ದುಲ್ಲಾ ಕರಾಯ, ಹಾರಿಸ್ ಕೌಸರಿ ಕೋಲ್ಪೆ, ಜಬ್ಬಾರ್ ಮುಸ್ಲಿಯಾರ್ ಕರಾಯ, ಇ.ಕೆ. ಅಬ್ದುರ್ರಹ್ಮಾನ್ ಮುಸ್ಲಿಯಾರ್, ಮುಹಮ್ಮದ್ ಮುಸ್ಲಿಯಾರ್ ಜೋಗಿಬೆಟ್ಟು, ಝಖರಿಯಾ ಮುಸ್ಲಿಯಾರ್ ಆತೂರು, ಶುಕೂರ್ ದಾರಿಮಿ ಕರಾಯ, ಯೂಸುಫ್ ಹಾಜಿ ಎಚ್, ಅಬ್ದುರ್ರಹ್ಮಾನ್ ಅಡೆಕ್ಕಲ್, ಮುಹಮ್ಮದ್ ಕೂಟೆಲ್, ಮುಹಮ್ಮದ್ ಮೋನು ಕರುವೇಲು, ಫಾರೂಕ್ ಝಿಂದಗಿ, ಅಬ್ದುಲ್ ಅಝೀಝ್ ಕರಾವಳಿ, ಅಬ್ದುಲ್ ಸಮದ್ ಸಿಟಿ, ಯುಟಿ ಫಯಾಝ್, ಸ್ವಾದಿಕ್ ಕುಪ್ಪೆಟ್ಟಿ, ಹಾರಿಸ್ ಗಂಡಿಬಾಗಿಲು, ಹಾರಿಸ್ ಕರುವೇಲು ಸೇರಿದಂತೆ ವಲಯ ಕ್ಲಸ್ಟರ್ ನಾಯಕರು ಈ ಸಂದರ್ಭ ಉಪಸ್ಥಿತರಿದ್ದರು.