Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಈ ಹೊತ್ತಿನ ಹೊತ್ತಿಗೆ

ಈ ಹೊತ್ತಿನ ಹೊತ್ತಿಗೆ

ನಾಗಂದಿಯೊಳಗಿನ ಅಕ್ಷಯ ನೆನಪು....

-ಕಾರುಣ್ಯಾ-ಕಾರುಣ್ಯಾ19 Feb 2020 11:59 PM IST
share
ಈ ಹೊತ್ತಿನ ಹೊತ್ತಿಗೆ

‘ಮನೆಯ ಹೆಬ್ಬಾಗಿಲಿನ ಮೇಲೆ ಇರುವ ನಾಗಂದಿಗೆಯಲ್ಲಿ ಏನೆಲ್ಲಾ ಬೇಕಾದ ಮತ್ತು ಬೇಡವಾದವಸ್ತುಗಳನ್ನೂ ತಳ್ಳಿ ಬಿಟ್ಟಿರುತ್ತೇವೆ ಎಂಬುದು ಕಂಡವರಿಗೆ ಗೊತ್ತಿದೆ. ನಾಗಂದಿಗೆಯ ಮಹತ್ವ, ಅವಶ್ಯವಾದುದನ್ನು ಹುಡುಕುವಾಗ ಕೆಲವು ಅನಗತ್ಯವಾದ ವಸ್ತುಗಳೂ ಕೈಯನ್ನು ಸ್ಪರ್ಶಿಸಿ ‘ನೋಡು, ನಾನು ಇಲ್ಲಿದ್ದೇನೆ’ ಎಂದು ಹೇಳಿದಂತಾಗುತ್ತದೆ. ಹಾಗೆಯೇ ನಾನು ಪೇರಿಸಿಟ್ಟ ಕೆಲವು ಹಳೆಯ ನೆನಪುಗಳು ನನ್ನ ಕೈ ಹಿಡಿದು ಜಗ್ಗಿಸಿ ಬರೆಯುವಂತೆ ಸ್ಫೂರ್ತಿ ತುಂಬಿಸಿವೆ. ನಾಗಂದಿಗೆಯೊಳಗಿನ ವಸ್ತುಗಳು ಅಕ್ಷಯವಾಗಿರುವಂತೆ ನನ್ನ ನೆನಪುಗಳೂ ಅಕ್ಷಯ ಭಂಡಾರವೇ ಆಗಿದೆ. ಆದರೆ ನಾನು ಮಾತ್ರ ನನ್ನ ಕೈಗೆ ದಕ್ಕಿದವುಗಳನ್ನೇ ಕೃತಿಗಿಳಿಸಿದ್ದೇನೆ. ನನ್ನದೇನಿದ್ದರೂ ಮಣ್ಣಿನ ಮನೆಗಳ ಹಂಚು ಹೊದಿಸಿದ ಕಾಲದ ಅನುಭವಗಳು...’

 ತನ್ನ ಆತ್ಮಕಥನ ‘ನಾಗಂದಿಗೆಯೊಳಗಿಂದ’ ಪುಟಗಳ ಕುರಿತಂತೆ ಲೇಖಕಿ ಬಿ. ಎಂ. ರೋಹಿಣಿ ಅವರ ಮಾತಿದು. ಮಧ್ಯಮ ವರ್ಗದ ಕುಟುಂಬದೊಳಗಿನ ಕತ್ತಲ ಕೋಣೆಗೆ ದೀಪದ ಬೆಳಕು ಹಚ್ಚಿಟ್ಟಂತೆ ಈ ಕೃತಿಯಲ್ಲಿ ತನ್ನ ಬದುಕು ಕಂಡು ಉಂಡ ನಿಷ್ಠುರ ಸತ್ಯಗಳನ್ನು ಅವರು ಹಂಚಿಕೊಳ್ಳುತ್ತಾರೆ. ಸ್ತ್ರೀವಾದಿಯಾಗಿ, ಶಿಕ್ಷಕಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ, ಕಥೆಗಾರ್ತಿಯಾಗಿ ...ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ರೋಹಿಣಿ ಅವರನ್ನು ಗಟ್ಟಿಯಾಗಿ ರೂಪಿಸಿದ ಅವರ ಬದುಕು, ಅಂದಿನ ತಲೆಮಾರಿನ ಬಹುತೇಕ ಮಹಿಳೆಯರ ಬದುಕೂ ಹೌದು. ಒಂದೂವರೆ ವರ್ಷದ ಮಗುವಾಗಿದ್ದಾಗ ಲೇಖಕಿಯ ಎಡಕೈಗೆ ಬಿಸಿ ಪದಾರ್ಥ ಬಿದ್ದು ಸಂಪೂರ್ಣ ಬೆಂದು ಹೋಗುತ್ತದೆ. ಆದರೆ ಈ ಕೃತಿಯಲ್ಲಿ ಅದೊಂದು ರೂಪಕದಂತಿದೆ. ಬೇಯುವ ಪ್ರಕ್ರಿಯೆ ಅವರ ಬದುಕಿನಲ್ಲಿ ಮತ್ತೆ ಮತ್ತೆ ಎದುರಾಗುತ್ತದೆ. ರೋಹಿಣಿ ಎಂದರೆ ಬೆಂದು ಹದವಾದ ಮಡಿಕೆ.

ಕೌಟುಂಬಿಕ ವಲಯದಲ್ಲಿ ಹೆಣ್ಣು ಎದುರಿಸುವ ಸವಾಲು, ಸಮಾಜದಲ್ಲಿ ಆಕೆಯ ಮುಂದೆ ಎದುರಾಗುವ ಪ್ರಶ್ನೆ ಅವುಗಳಿಗೆ ಆಕೆ ನೀಡುವ ಉತ್ತರಗಳು ಎಲ್ಲ ಮಹಿಳೆಯರಿಗೂ ಆತ್ಮವಿಶ್ವಾಸವನ್ನು ನೀಡುವಂತಹದು. ಒಂಟಿ ಹೆಣ್ಣೊಬ್ಬಳು ಸ್ವಾವಲಂಬಿಯಾಗಿ ತನ್ನ ಬದುಕನ್ನು ತಾನೇ ರೂಪಿಸಲು ಹೊರಡುವುದು ಈಗಲೂ ಸುಲಭದ ಮಾತಲ್ಲ. ಹೀಗಿರುವಾಗ 70ರ ದಶಕದ ಕಾಲದಲ್ಲಿ ಅಂತಹದೊಂದು ಮನಸ್ಥಿತಿಯನ್ನು ಮಹಿಳೆ ಹೊಂದುವಾಗ ಆಕೆಗೆ ಎದುರಾಗುವ ಅಡೆತಡೆಗಳು ಯಾವುವು ಎನ್ನುವ ವಿವರಗಳು ಇಲ್ಲಿವೆ. ಈ ಕೃತಿಯಲ್ಲಿ ಹೊರಗಿನ ವಿವರಕ್ಕಿಂತ ನಮ್ಮನ್ನು ಕಾಡುವುದು ಅವರ ಒಳಗಿನ ವಿವರಗಳು. ಲೇಖಕಿ ಅದರ ಕುರಿತಂತೆ ಹೀಗೆ ಬರೆಯುತ್ತಾರೆ ‘‘ಸಮಾಜದೊಂದಿಗೆ ಗಟ್ಟಿಯಾದ ಬಾಂಧವ್ಯವನ್ನು ಬೆಳೆಸಿಕೊಂಡು ನಾನು ಕಂಡುಕೊಂಡ ಸತ್ಯವೇನೆಂದರೆ, ನಮ್ಮ ಸುತ್ತಮುತ್ತಲೂ ಸಮಾಜವೇ ಕಟ್ಟಿದ ಗೋಡೆಗಳನ್ನಾದರೂ ಸುಲಭದಲ್ಲಿ ಕೆಡವಬಹುದು. ಆದರೆ ನಮ್ಮ ಮನಸ್ಸಿನಲ್ಲಿ ನಾವೇ ಕಟ್ಟಿಕೊಂಡ ಗೋಡೆಗಳನ್ನು ಅಲ್ಲಾಡಿಸುವುದು ಬಿಡಿ, ಮುಟ್ಟಲಿಕ್ಕೂ ಸಾಧ್ಯವಿಲ್ಲ...’’

ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಈ ಕೃತಿಯನ್ನು ಹೊರತಂದಿದೆ. 288 ಪುಟಗಳ ಈ ಕೃತಿಯ ಮುಖಬೆಲೆ 300 ರೂಪಾಯಿ. ಆಸಕ್ತರು 97317 84976 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X